Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹಣಕ್ಕಾಗಿ ಕೇಸರಿವಾದಕ್ಕೆ ಮಣೆ: ಮಾಧ್ಯಮಗಳ...

ಹಣಕ್ಕಾಗಿ ಕೇಸರಿವಾದಕ್ಕೆ ಮಣೆ: ಮಾಧ್ಯಮಗಳ ಹುನ್ನಾರ

ಟೈಮ್ಸ್‌ಗ್ರೂಪ್, ಇಂಡಿಯಾ ಟುಡೇ ಸಹಿತ 24ಕ್ಕೂ ಅಧಿಕ ಮಾಧ್ಯಮಸಂಸ್ಥೆಗಳ ಒಳಮರ್ಮ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗ

ವಾರ್ತಾಭಾರತಿವಾರ್ತಾಭಾರತಿ25 May 2018 11:26 PM IST
share
ಹಣಕ್ಕಾಗಿ ಕೇಸರಿವಾದಕ್ಕೆ ಮಣೆ: ಮಾಧ್ಯಮಗಳ ಹುನ್ನಾರ

►ಕೋಬ್ರಾ ಪೋಸ್ಟ್ ಕುಟುಕು ಕಾರ್ಯಾಚರಣೆ

► ತಮ್ಮ ‘ಶುಲ್ಕ’ವನ್ನು ಕಪ್ಪುಹಣದ ಮೂಲಕ ಪಡೆಯಲು ಒಪ್ಪಿಕೊಂಡ ಪ್ರತಿಷ್ಠಿತ ಸುದ್ದಿಸಂಸ್ಥೆ

ಹೊಸದಿಲ್ಲಿ,ಮೇ 25: ಸಂಘಪರಿವಾರದ ಹಿಂದುತ್ವ ಎಜೆಂಡಾವನ್ನು ಪ್ರೋತ್ಸಾಹಿಸಲು ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷವೊಂದರ ಪರವಾಗಿ ಮತದಾರರನ್ನು ಸೆಳೆಯುವಂತೆ ಮಾಡಲು ‘ಟೈಮ್ಸ್‌ಗ್ರೂಪ್’, ‘ಇಂಡಿಯಾ ಟುಡೇ’ ಸೇರಿದಂತೆ 24ಕ್ಕೂ ಅಧಿಕ ಕೆಲವು ಪ್ರತಿಷ್ಠಿತ ಮಾಧ್ಯಮಸಂಸ್ಥೆಗಳು ಡೀಲ್‌ಗೆ ಸಿದ್ಧರಿರುವುದನ್ನು ಬಯಲಿಗೆಳೆದ ಆಪರೇಶನ್ 136 ಕುಟುಕು ಕಾರ್ಯಾಚರಣೆಯ ಎರಡನೆ ಕಂತಿನ ವೀಡಿಯೋವನ್ನು 'ಕೋಬ್ರಾ ಪೋಸ್ಟ್' ಶುಕ್ರವಾರ ಬಹಿರಂಗಪಡಿಸಿದೆ.

ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸಲು ಹಾಗೂ ಜನತೆಯ ಒಲವು ಬಿಜೆಪಿ ಪರವಾಗಿ ವಾಲುವಂತೆ ಮಾಡಲು ಸಾಧ್ಯವಾಗುವ ಅಭಿಯಾನವನ್ನು ನಡೆಸಲು ಟೈಮ್ಸ್ ಆಫ್ ಇಂಡಿಯಾ, ಇಂಡಿಯಾಟುಡೇ, ಹಿಂದೂಸ್ತಾನ್ ಟೈಮ್ಸ್, ಝೀ ನ್ಯೂಸ್, ನೆಟ್‌ವರ್ಕ್ 18, ಸ್ಟಾರ್ ಇಂಡಿಯಾ, ಎಬಿಪಿ ನ್ಯೂಸ್, ದೈನಿಕ್ ಜಾಗರಣ್, ರೇಡಿಯೋ ಓನ್, ರೆಡ್ ಎಫ್‌ಎಂ, ಲೋಕಮತ್, ಎಬಿಎನ್ ಆಂಧ್ರ ಜ್ಯೋತಿ, ಟಿವಿ 5, ದಿನಮಲರ್, ಬಿಗ್ ಎಫ್‌ಎಂ, ಕೆ ನ್ಯೂಸ್, ಇಂಡಿಯಾ ವಾಯ್ಸೋ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ಎವಿಟಿವಿ ಹಾಗೂ ಓಪನ್ ಮ್ಯಾಗಝಿನ್ ಸೇರಿದಂತೆ 25 ಮಾಧ್ಯಮಸಂಸ್ಥೆಗಳ ಉನ್ನತ ವ್ಯಕ್ತಿಗಳು ಸಿದ್ಧರಿದ್ದಾರೆಂಬುದನ್ನು ಎರಡನೆ ಹಂತದ ಆಪರೇಶನ್ 136 ಕುಟುಕು ಕಾರ್ಯಾಚರಣೆ ಬಯಲಿಗೆಳೆದಿದೆ.

ಈ ವೀಡಿಯೊದಲ್ಲಿ ಮಾರುವೇಷದ ವರದಿಗಾರರೊಬ್ಬರು ಸುಮಾರು ಎರಡು ಡಝನ್‌ಗೂ ಅಧಿಕ ದೇಶದ ಪ್ರತಿಷ್ಠಿತ ದಿನಪತ್ರಿಕೆಗಳು ಹಾಗೂ ಟಿವಿ ಚಾನೆಲ್‌ಗಳ ಮಾಲಕರು ಹಾಗೂ ಮ್ಯಾನೇಜರ್‌ಗಳು ದೇಶದ ನಾಗರಿಕರ ನಡುವೆ ಕೋಮುಸೌಹಾರ್ದತೆಯನ್ನು ಕದಡಲು ಹಾಗೂ ಚುನಾವಣಾ ಫಲಿತಾಂಶವು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಪರವಾಗಿ ವಾಲುವಂತೆ ಮಾಡಲು ಕಾರ್ಯತಂತ್ರಗಳನ್ನು ರೂಪಿಸಲು ಸಿದ್ಧರಿರುವುದನ್ನು ‘ಕೋಬ್ರಾಪೋಸ್ಟ್’ ಇಂದು ಪ್ರಸಾರ ಮಾಡಿದ ವೀಡಿಯೊ ಬಯಲಿಗೆಳೆದಿದೆ.

‘ಟೈಮ್ಸ್ ಗ್ರೂಪ್‌’ನ ವಿನೀತ್ ಜೈನ್ ಅವರಂತಹ ಬೃಹತ್ ಮಾಧ್ಯಮಸಂಸ್ಥೆಗಳ ಉದ್ಯಮಿಗಳು ಕಪ್ಪುಹಣದ ಮೂಲಕ ಈ ಕೋಟ್ಯಂತರ ಡೀಲನ್ನು ನಡೆಸಲು ಸಿದ್ಧರಿದ್ದಾರೆಂಬುದನ್ನು ಮಾರುವೇಷದ ವರದಿಗಾರರೊಬ್ಬರು ಈ ಕುಟುಕು ಕಾರ್ಯಾಚರಣೆಯಲ್ಲಿ ಬಯಲಿಗೆಳೆದಿದ್ದಾರೆ.

‘ಕೋಬ್ರಾ ಪೋಸ್ಟ್’ ತನ್ನ ಪತ್ರಕರ್ತ ಪುಷ್ಪ್ ಶರ್ಮಾ ಅವರನ್ನು ಅಚಾರ್ಯ ಅಟಲ್ ಎಂಬ ಹೆಸರಿನಲ್ಲಿ ಬಲಪಂಥೀಯ ಸಂಘಟನೆಯೊಂದರ ಪ್ರತಿನಿಧಿಯ ಸೋಗಿನಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿತ್ತು.

‘ಟೈಮ್ಸ್ ಗ್ರೂಪ್‌’ನ ಮಾಲಕ ಹಾಗೂ ಆಡಳಿತ ನಿರ್ದೇಶಕ ವಿನೀತ್ ಜೈನ್ ಹಾಗೂ ಗ್ರೂಪ್‌ನ ಕಾರ್ಯಕಾರಿ ಅಧ್ಯಕ್ಷ ಸಂಜೀವ್ ಶಾ ಜೊತೆಗೆ ‘ಆಚಾರ್ಯ ಅಟಲ್’ಈ ಪ್ರಸ್ತಾಪಿತ ಡೀಲ್ ಬಗ್ಗೆ ಚರ್ಚಿಸುವುದನ್ನು ಕೂಡಾ ವೀಡಿಯೊದಲ್ಲಿ ತೋರಿಸಲಾಗಿದೆ. ಈ ವೀಡಿಯೊದಲ್ಲಿ ‘ಆಚಾರ್ಯ ಅಟಲ್ ’ ಅವರು ಕೃಷ್ಣ ಹಾಗೂ ಭಗವದ್ಗೀತೆಯ ಕುರಿತ ಕಾರ್ಯಕ್ರಮಗಳು ಹಾಗೂ ಪ್ರಚಾರ ಲೇಖನಗಳನ್ನು ಮುಖವಾಡವಾಗಿ ಬಳಸಿಕೊಂಡು ಹಿಂದುತ್ವವಾದವನ್ನು ಹಾಗೂ ಅದರ ರಾಜಕೀಯ ಕಾರ್ಯಸೂಚಿಯನ್ನು ಪ್ರಚಾರ ಪಡಿಸಲು ಬಳಸಿಕೊಳ್ಳಬೇಕೆಂದು ಹೇಳುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಇದಕ್ಕಾಗಿ 500 ಕೋಟಿ ರೂ. ಪಾವತಿಸುವುದಾಗಿಯೂ ಅವರು ವೀಡಿಯೊದಲ್ಲಿ ವಿನೀತ್ ಜೈನ್ ಅವರಿಗೆ ಅಮಿಷವೊಡ್ಡುವುದನ್ನು ತೋರಿಸಲಾಗಿದೆ.

ಇನ್ನೊಂದು ವೀಡಿಯೊದಲ್ಲಿ ಜೈನ್ ಹಾಗೂ ಶಾ ಅವರು ಈ ಹಣವನ್ನು ಯಾವ ರೀತಿಯಾಗಿ ಪಾವತಿಸಬೇಕೆಂದು ಮಾರುವೇಷದ ಪತ್ರಕರ್ತನಿಗೆ ಮಾರ್ಗದರ್ಶನ ನೀಡುವುದನ್ನು ಕೂಡಾ ತೋರಿಸಲಾಗಿದೆ.

ವೀಡಿಯೊದಲ್ಲಿ ವಿನೀತ್ ಜೈನ್ ಅವರು ‘‘ ಔರ್ ಬಿ ಬ್ಯುಸಿನೆಸ್‌ಮ್ಯಾನ್ ಹೋಂಗೆ ಜೊ ಹಮೆ ಚೆಕ್ ದೇಂಗೆ ಅಪ್ ಉನೆ ಕ್ಯಾಶ್ ದೆ ದೋ ( ಹಣ ಪಡೆದು ನಮಗೆ ಚೆಕ್ ನೀಡುವ ಉದ್ಯಮಿಗಳಿದ್ದಾರೆ. ನೀವು ಅವರಿಗೆ ನಗದನ್ನು ನೀಡಬಹುದಾಗಿದೆ) ಎಂದು ಹೇಳುವುದನ್ನು ವೀಡಿಯೊ ತೋರಿಸಿದೆ.

ಆಪರೇಶನ್ 136 ಎಂಬ ಕುಟುಕು ಕಾರ್ಯಾಚರಣೆ ನಡೆಸಿದ್ದ ‘ಕೋಬ್ರಾ ಪೋಸ್ಟ್’, ಹೇಗೆ ಭಾರತೀಯ ಮಾಧ್ಯಮಗಳು ಹಣಕ್ಕಾಗಿ ರಾಜಕೀಯ ಪಕ್ಷಗಳ ಜೊತೆ ಕೈಜೋಡಿಸಿ ವಿರೋಧ ಪಕ್ಷಗಳ ನಾಯಕರನ್ನು ಹಣಿಯುವ, ಒಂದು ರಾಜಕೀಯ ಪಕ್ಷದ ಸಿದ್ಧಾಂತವನ್ನು ಹರಡುವ, ಮತಗಳನ್ನು ಧ್ರುವೀಕರಿಸುವ ಮತ್ತು ಕೋಮು ಭಾವನೆಯನ್ನು ಜನರಲ್ಲಿ ಮೂಡಿಸುವ ಕೆಲಸ ಮಾಡುತ್ತಿವೆ ಎಂಬುದನ್ನು ಮಾರ್ಚ್ 26ರಂದು ಬಿಡುಗಡೆ ಮಾಡಿದ ಆಪರೇಶನ್ 136ನ ಮೊದಲ ಕಂತಿನಲ್ಲಿ ಬಹಿರಂಗಪಡಿಸಿತ್ತು. ಮೊದಲ ಕಂತಿನಲ್ಲಿ ‘ಕೋಬ್ರಾಪೋಸ್ಟ್’ ಹದಿನೇಳು ಭಾರತೀಯ ಮಾಧ್ಯಮಗಳ ಸಂಚನ್ನು ಬಯಲುಗೊಳಿಸಿತ್ತು.

ಕೆಲವು ಮಾಧ್ಯಮ ಸಂಸ್ಥೆಗಳು ಬಿಜೆಪಿ ನಾಯಕರು, ಕೇಂದ್ರ ಸಚಿವರು ಮತ್ತು ಆಡಳಿತ ಪಕ್ಷದ ಮಿತ್ರಪಕ್ಷದ ನಾಯಕರ ವಿರುದ್ಧ ಕಟ್ಟುಕತೆ ಸೃಷ್ಟಿಸಲು, ರಾಜಕೀಯ ಷಡ್ಯಂತ್ರವನ್ನು ರೂಪಿಸಲು ಮತ್ತು ಒಳಜಗಳದ ವರದಿಗಳನ್ನು ರಚಿಸಲು ಹಣವನ್ನು ಪಡೆದಿರುವುದಾಗಿಯೂ ‘ಕೋಬ್ರಾಪೋಸ್ಟ್’ ಕಾರ್ಯಾಚರಣೆ ಆರೋಪಿಸಿದೆ.

 ಪೇಟಿಎಂ ಬಳಕೆದಾರರ ಖಾಸಗಿ ಮಾಹಿತಿ ಕೇಳಿದ್ದ ಪ್ರಧಾನಿ ಕಾರ್ಯಾಲಯ

 ಜಮ್ಮುಕಾಶ್ಮೀರದಲ್ಲಿ ಕಲ್ಲೆಸೆತದ ಪ್ರತಿಭಟನೆಗಳು ನಡೆದ ಸಮಯದಲ್ಲಿ ಪ್ರಧಾನಿ ಕಾರ್ಯಾಲಯದ ಕೋರಿಕೆಯಂತೆ ಮೊಬೈಲ್ ಹಣಪಾವತಿ ಕಂಪೆನಿ ಪೇಟಿಎಂ ತನ್ನ ಬಳಕೆದಾರರ ಖಾಸಗಿ ಮಾಹಿತಿಗಳನ್ನು ರಾಜಕೀಯ ಪಕ್ಷವೊಂದಕ್ಕೆ ಒದಗಿಸಿರುವುದನ್ನು ಕೂಡಾ ಕೋಬ್ರಾಪೋಸ್ಟ್ ನಡೆಸಿದ ಕುಟುಕು ಕಾರ್ಯಾಚರಣೆಯೊಂದು ಬಯಲಿಗೆಳೆದಿದೆ.

ಕಳೆದ ವರ್ಷ ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಗಳ ವೇಳೆ ಕಲ್ಲೆಸೆತವನ್ನು ನಡೆಸಿದವರು ಪೇಟಿಎಂ ಬಳಕೆದಾರರೇ ಎಂಬುದನ್ನು ಪತ್ತೆಹಚ್ಚಲು, ಪೇಟಿಎಂ ಬಳಕೆದಾರರ ಖಾಸಗಿ ಮಾಹಿತಿಗಳನ್ನು ನೀಡುವಂತೆ ಪ್ರಧಾನಿ ಕಾರ್ಯಾಲಯ ತನ್ನನ್ನು ಕೋರಿತ್ತೆಂದು ಪೇಟಿಎಂ ಕಂಪೆನಿಯ ಹಿರಿಯ ಉಪಾಧ್ಯಕ್ಷ ಅಜಯ್ ಶೇಖರ್ ಕುಟುಕು ಕಾರ್ಯಾಚರಣೆಯೊಂದರಲ್ಲಿ ಹೇಳಿದ್ದರೆನ್ನಲಾದ ವೀಡಿಯೊವನ್ನು ಕೋಬ್ರಾ ಪೋಸ್ಟ್ ಪ್ರಸಾರ ಮಾಡಿದೆ.

 ಕರ್ನಾಟಕ ಚುನಾವಣೆಯಲ್ಲಿ ಪ್ರಭಾವ ಬೀರುವ ಕೊಡುಗೆ !

‘ಆಪರೇಶನ್ 136’ ಕುಟುಕು ಕಾರ್ಯಾಚರಣೆಯಲ್ಲಿ ಆಂಧ್ರಜ್ಯೋತಿ ಮಾಧ್ಯಮಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಶಶಿಧರ್ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವವನ್ನು ಬೀರುವಂತಹ ಸಾಮರ್ಥ್ಯವನ್ನು ತನ್ನ ಪತ್ರಿಕೆ ಹೊಂದಿರುವುದಾಗಿಯೂ ಹೇಳಿದ್ದರು.

 ಮಾಧ್ಯಮಗಳ ಪಡಸಾಲೆಯಲ್ಲಿ ಆರೆಸ್ಸೆಸ್

 ಆರೆಸ್ಸೆಸ್ ಹಾಗೂ ಅದು ಪ್ರತಿಪಾದಿಸುವ ಹಿಂದುತ್ವವಾದವು ಭಾರತೀಯ ಮಾಧ್ಯಮ ಸಂಸ್ಥೆಗಳ ಸುದ್ದಿ ಕೊಠಡಿಗಳಲ್ಲಿ ಹಾಗೂ ಆಡಳಿತಮಂಡಳಿಗಳಲ್ಲಿ ಪ್ರವೇಶಿಸುವಲ್ಲಿ ಸಫಲವಾಗಿರುವುದನ್ನು ಕೂಡಾ ಈ ಕುಟುಕು ಕಾರ್ಯಾಚರಣೆ ಬಹಿರಂಗಪಡಿಸಿದೆಯೆಂದು ಕೋಬ್ರಾಪೋಸ್ಟ್ ಹೇಳಿದೆ.

ಖಾಸಗಿ ರೇಡಿಯೋ ಸಂಸ್ಥೆ ಬಿಗ್‌ಎಫ್‌ಎಂ ಹಾಗೂ ಕೇಂದ್ರದ ಅಧಿಕಾರರೂಢ ಪಕ್ಷದ ನಡುವೆ ‘ಉತ್ತಮ ಬಾಂಧವ್ಯ’ವಿದೆಯೆಂದು ಬಿಗ್‌ಎಫ್‌ಎಂನ ಹಿರಿಯ ಉದ್ಯಮ ಪಾಲುದಾರ ಅಮಿತ್ ಚೌಧುರಿ ಹೇಳಿದ್ದಾರೆ ಎನ್ನಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X