Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಏನಿ ಬಂದಿರಿ ಹದುಳಿದ್ದಿರೆ?

ಏನಿ ಬಂದಿರಿ ಹದುಳಿದ್ದಿರೆ?

ವಾರ್ತಾಭಾರತಿವಾರ್ತಾಭಾರತಿ26 May 2018 12:05 AM IST
share
ಏನಿ ಬಂದಿರಿ ಹದುಳಿದ್ದಿರೆ?

ಏನಿ ಬಂದಿರಿ, ಹದುಳಿದ್ದಿರೆ ಎಂದಡೆ
ನಿಮ್ಮೈಸಿರಿ ಹಾರಿ ಹೋಹುದೆ?
ಕುಳ್ಳಿರೆಂದಡೆ ನೆಲ ಕುಳಿಹೋಹುದೆ?
ಒಡನೆ ನುಡಿದಡೆ ಸಿರ, ಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ
ಮೂಗ ಕೊಯ್ವುದು ಮಾಬನೆ ಕೂಡಲಸಂಗಮದೇವಯ್ಯ?
                                                                     -ಬಸವಣ್ಣ

ಬನ್ನಿರಿ, ಎಲ್ಲ ಕ್ಷೇಮವೇ? ಬಂದ ಕಾರಣವೇನು? ಎಂದು ವಿಚಾರಿಸಿದರೆ ನಿಮ್ಮ ಐಶ್ವರ್ಯ ಹಾರಿ ಹೋಗುವುದೇ? ಬನ್ನಿ, ಕೂಡಿ, ನಮಸ್ಕಾರ ಎಂದು ಹೇಳಿದರೆ ನಿಮ್ಮ ಮನೆಯ ನೆಲದಲ್ಲಿ ತಗ್ಗು ಗುಂಡಿಗಳು ಬೀಳುವವೇ? ಶ್ರೀಸಾಮಾನ್ಯರು ಮನೆಗೆ ಬಂದಾಗ ನೀವು ಅವರಿಗೆ ಉದಾಸೀನ ಮಾಡದೆ ಪ್ರೀತಿಯಿಂದ ಮಾತನಾಡಿಸಿದರೆ ನಿಮ್ಮ ತಲೆ ಒಡೆದುಹೋಗುವುದೇ; ನಿಮ್ಮ ಹೊಟ್ಟೆ ಸೀಳಿಹೋಗುವುದೇ? ನೀವು ನಿಮ್ಮ ಬಳಿ ಬರುವ ಅಸಹಾಯಕರಿಗೆ ಕೊಡುವ ಮನಸಿಲ್ಲದಿದ್ದರೂ ಗೌರವದಿಂದ ಕಾಣುವ ಗುಣವೂ ಇಲ್ಲದಿದ್ದರೆ ದೇವರು ಮೂಗುಕುಯ್ದು ಅಪಮಾನಿಸದೆ ಬಿಡುವನೇ ಎಂದು ಬಡವರನ್ನು ಅಸಡ್ಡೆಯಿಂದ ಕಾಣುವ ಶ್ರೀಮಂತರನ್ನು ಬಸವಣ್ಣನವರು ಪ್ರಶ್ನಿಸುತ್ತಾರೆ. ಹೀಗೆ ಪ್ರಶ್ನಿಸುವಲ್ಲಿ ಇಂಥ ಶ್ರೀಮಂತರ ಬಗ್ಗೆ ವ್ಯಕ್ತಪಡಿಸುವ ಸಾತ್ವಿಕ ಕೋಪಕ್ಕಿಂತಲೂ ಬಡವರ ಬಗ್ಗೆ ಅವರಿಗಿುವ ಕಾಳಜಿ ಮುಖ್ಯವಾಗುತ್ತದೆ.
 ಬಸವಣ್ಣನವರು ಪ್ರಾಮಾಣಿಕ ಕಾಯಕಜೀವಿಗಳಲ್ಲಿ ಭಕ್ತಿ ಕಾಣುತ್ತಾರೆ. ಧರ್ಮ ಕಾಣುತ್ತಾರೆ. ಈ ಪೃಥ್ವಿಗೆ ಭೂಷಣವಾಗುವಂಥ ಸುಂದರ ಸಮಾಜ ಕಾಣುತ್ತಾರೆ. ಅಂಥವರ ಸಮೂಹದಲ್ಲಿ ದೇವರನ್ನೇ ಕಾಣುತ್ತಾರೆ. ಸರಳ ಮಾನವೀಯ ಬದುಕೇ ಧಾರ್ಮಿಕ ಆಚರಣೆಗಳಾಗಿಬಿಡುತ್ತವೆ. ‘‘ಕಂಡ ಭಕ್ತರಿಗೆ ಕೈಮುಗಿಯುವಾತನೇ ಭಕ್ತ, ಮೃದುವಚನವೆ ಸಕಲ ಜಪಂಗಳಯ್ಯಾ, ಮೃದುವಚನವೆ ಸಕಲ ತಪಂಗಳಯ್ಯಾ, ಸದುವಿನಯವೆ ಸದಾಶಿವನ ಒಲುಮೆಯಯ್ಯಾ. ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.’’ ಎಂದು ಹೇಳುವುದರ ಮೂಲಕ ಶಿಷ್ಟಾಚಾರವನ್ನು ಎತ್ತಿಹಿಡಿಯುತ್ತಾರೆ. ಮರ್ಯಾದಸ್ಥ ಬಡವರ ಬದುಕೇ ಶ್ರೀಮಂತ ಬದುಕು ಎಂಬುದನ್ನು ಅರಿಯುವಂತೆ ಮಾಡುತ್ತಾರೆ. ಇಂಥ ಬಡತನವನ್ನೇ ಶ್ರೀಮಂತಗೊಳಿಸುತ್ತಾರೆ.
 ಸಂಪತ್ತೇ ಶ್ರೀಮಂತಿಕೆ ಎಂದು ತಿಳಿಯುವವರ ಬಗ್ಗೆ ಬಸವಣ್ಣನವರಿಗೆ ಬೇಸರವಿದೆ. ಗುಣಸಂಪತ್ತು ಹಣಸಂಪತ್ತಿಗಿಂತ ಶ್ರೇಷ್ಠವಾದುದು. ಆದರೆ ಕೆಲ ಹಣವಂತರಿಗೆ ಸಿರಿಗರವೆಂಬ ಭೂತ ಬಡಿದಿರುತ್ತದೆ. ಅದು ಮನಸ್ಸನ್ನು ವಿಷಮಯವಾಗಿಸುವುದು. ಮನಸ್ಸಿನಲ್ಲಿ ವಿಷ ತುಂಬುವ ಈ ಸಿರಿಗರ ಎಲ್ಲ ಭೂತಚೇಷ್ಟೆಗಳಿಗಿಂತ ಅಸಹ್ಯವಾದುದು. ಅಲ್ಲದೆ ಸರ್ಪದ ವಿಷಕ್ಕಿಂತಲೂ ಘೋರವಾದುದು. ಈ ಸಿರಿಗರವನ್ನು ಹೋಗಲಾಡಿಸಲು ಬಡತನವೆಂಬ ಮಂತ್ರವಾದಿಯೇ ಅವರ ಬದುಕಿನ ಮೇಲೆ ದಾಳಿ ಮಾಡಬೇಕಾಗುತ್ತದೆ. ಆಗ ಮಾತ್ರ ಅವರು ಎಚ್ಚರಗೊಂಡು, ಸಂಪತ್ತೆಂಬ ವಿಷಭೂತದ ದುಷ್ಪರಿಣಾಮದಿಂದ ಹೊರಬಂದು ಮಾತನಾಡಲು ಸಾಧ್ಯವಾಗುತ್ತದೆ. ಅಂತೆಯೆ ಬಸವಣ್ಣನವರು ಬೇರೊಂದು ವಚನದಲ್ಲಿ ಹೀಗೆ ಹೇಳಿದ್ದಾರೆ: ಹಾವು ತಿಂದವರ ನುಡಿಸಬಹುದು, ಗರ ಹೊಡೆದವರ ನುಡಿಸಬಹುದು, ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ. ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರಯ್ಯಾ ಕೂಡಲಸಂಗಮದೇವಾ.’’

share
ವಾರ್ತಾಭಾರತಿ
ವಾರ್ತಾಭಾರತಿ
Next Story
X