Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಛಾಯಾಗ್ರಾಹಕ ಕೇಶವ ವಿಟ್ಲ ನಿಧನಕ್ಕೆ...

ಛಾಯಾಗ್ರಾಹಕ ಕೇಶವ ವಿಟ್ಲ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ

ವಾರ್ತಾಭಾರತಿವಾರ್ತಾಭಾರತಿ28 May 2018 5:58 PM IST
share
ಛಾಯಾಗ್ರಾಹಕ ಕೇಶವ ವಿಟ್ಲ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ

ಬೆಂಗಳೂರು, ಮೇ 28: ಪ್ರತಿಭಾವಂತ ಸುದ್ದಿ ಛಾಯಾಗ್ರಾಹಕ ಕೇಶವ ವಿಟ್ಲ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಮೂವತ್ತು ವರ್ಷಗಳ ಹಿಂದೆ ಮಂಗಳೂರು ನಗರದಿಂದ ಪ್ರಕಟವಾಗುತ್ತಿದ್ದ ಮುಂಗಾರು ಕನ್ನಡ ದಿನಪತ್ರಿಕೆಯಲ್ಲಿ ಸುದ್ದಿ ಛಾಯಾಗ್ರಾಹಕರಾಗಿ ವೃತ್ತಿ ಪ್ರಾರಂಭಿಸಿದ ಕೇಶವ ವಿಟ್ಲ, ತದ ನಂತರ ಕನ್ನಡಪ್ರಭ ಪತ್ರಿಕೆಯಲ್ಲಿ ಜನಮನ್ನಣೆ ಗಳಿಸಿದರು. ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದ ಕೇಶವ ವಿಟ್ಲರ ‘ವೀಕ್ಷಣ ಛಾಯಾಂಕಣ’ ಭಾರತದ ಪತ್ರಿಕೋದ್ಯಮ ಇತಿಹಾಸದಲ್ಲೆ ಒಂದು ನೂತನ ಪರಿಕಲ್ಪನೆ ಹಾಗೂ ನೂತನ ಪ್ರಯೋಗವಾಗಿತ್ತು.

ಸಾಮಾಜಿಕ ಸಮಸ್ಯೆಗಳತ್ತ ಬೆಳಕು ಬೀರುತ್ತಿದ್ದ ವೀಕ್ಷಣ ಅಂಕಣದಲ್ಲಿ ಛಾಯಾಚಿತ್ರದ ಜೊತೆ ಒಂದು ವಾಕ್ಯದ ಬರಹ ಪ್ರಕಟಗೊಂಡರೆ ಅದಕ್ಕೆ ಎಲ್ಲೆಡೆ ಸ್ಪಂದನೆ-ಪ್ರಶಂಸೆ ದೊರೆಯುತ್ತಿತ್ತು. ಕನ್ನಡಪ್ರಭದ ನಂತರ ಉದಯವಾಣಿ, ರೂಪತಾರ, ದಿ ಟೆಲಿಗ್ರಾಫ್, ಹಿಂದುಸ್ತಾನ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಹೀಗೆ ವಿವಿಧ ಪತ್ರಿಕೆಗಳಲ್ಲಿ ಪಯಣಿಸಿದ ವಿಟ್ಲ ಅವರು ಈವರೆಗೆ ನಾಲ್ಕು ಛಾಯಾಚಿತ್ರ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ.

ಕೇಶವ ವಿಟ್ಲ ಅವರು 1988ರಲ್ಲಿ ಏರ್ಪಡಿಸಿದ್ದ ಮೊದಲ ಛಾಯಾಚಿತ್ರ ಪ್ರದರ್ಶನ ದಿ ಇನ್‌ಸೈಟ್ಸ್ ಆಫ್ ಲೈಫ್ ಬದುಕಿನ ಒಳನೋಟಗಳನ್ನು ತೋರ್ಪಡಿಸಿದರೆ, 1998ರ illusion and reality ಛಾಯಾಚಿತ್ರ ಪ್ರದರ್ಶನವು ಕಲ್ಪನೆ ಮತ್ತು ವಾಸ್ತವಿಕತೆಯ ನಡುವಿನ ಸೋಜಿಗವನ್ನು ಬಿಂಬಿಸಿತ್ತು.

ಅಂತೆಯೇ, 2003ರಲ್ಲಿ ಕೇಶವ ವಿಟ್ಲ ಆಯೋಜಿಸಿದ್ದ the faithfull ಛಾಯಾಚಿತ್ರ ಪ್ರದರ್ಶನವು ರಾಷ್ಟ್ರಾದ್ಯಂತ ಎಲ್ಲ ಮಹಾನಗರಗಳಲ್ಲಿನ ಬೀದಿನಾಯಿಗಳ ಸ್ಥಿತಿಗತಿಗಳನ್ನು ಪರಿಚಯಿಸಿ ಸಂಚಲನ ಮೂಡಿಸಿದ್ದು ವಿಶೇಷವಾಗಿತ್ತು. ಅನಂತರ, 2008ರಲ್ಲಿ ಆಯೋಜಿಸಿದ್ದ karnataka waterscapes ಪ್ರದರ್ಶನವು ಪ್ರಮುಖ ಕೆರೆಗಳು, ಆಕರ್ಷಕ ಕಡಲ ತೀರಗಳು ಹಾಗೂ ನಯನ ಮನೋಹರ ಜಲಪಾತಗಳು ಹೀಗೆ ರಾಜ್ಯದ ಎಲ್ಲ್ಲ ಜಲಸಿರಿಯ ಕೇಂದ್ರ ಬಿಂದುವಾಗಿತ್ತು.

ಪ್ರಾಣಿ ಪಕ್ಷಿಗಳನ್ನು ಒಳಗೊಂಡಂತೆ ಅರಣ್ಯದ ವೈಶಿಷ್ಟ ಹಾಗೂ ವೈವಿಧ್ಯತೆಗಳು, ಬೆಟ್ಟ-ಗುಡ್ಡಗಳು, ಕಲ್ಲು-ಬಂಡೆಗಳು ಮತ್ತು ಶಿಲೆಗಳು, ಕಡಲ ತೀರಗಳು, ಜಲಪಾತಗಳೂ ಸೇರಿದಂತೆ ನಿಸರ್ಗ ಹಾಗೂ ಪ್ರಕೃತಿಯ ಸಿರಿ ಸೊಬಗು ಹಾಗೂ ಪರಿಸರದ ವಿಸ್ಮಯಗಳು facets of karnataka: a pictorial journey  ಕೇಶವ ವಿಟ್ಲ ಅವರ ಪುಸ್ತಕದಲ್ಲಿನ ವಿಶೇಷತೆಗಳಾಗಿವೆ.

ಈ ಪುಸ್ತಕವನ್ನು ಅವಲೋಕಿಸಿದರೆ ರವಿ ಕಾಣದ್ದನ್ನು ಕವಿ ಕಂಡ ಎಂಬ ನಾಣ್ಣುಡಿ ನೆನಪಾಗುತ್ತದೆ. ಅಷ್ಟೇ ಅಲ್ಲ, ಕೇಶವ ವಿಟ್ಲ ಅವರು ವರ್ಣ ಪಾರದರ್ಶಿಕೆಗಳನ್ನು ಸೆರೆಡಿಯುವಲ್ಲಿ ಸಿದ್ಧಹಸ್ತರು ಎಂಬುದು ಸಾಬೀತಾಗುತ್ತದೆ. ವಿಟ್ಲ ಅವರು ಈ ಪುಸ್ತಕಕ್ಕೆ ಸರಕು ಸಿದ್ದಪಡಿಸಲು 8 ವರ್ಷಗಳ ಕಾಲ ಶ್ರಮಿಸಿದ್ದಾರೆಂಬುದು ಪ್ರಾಕೃತಿಕ ಸಂಪತ್ತಿನ ಬಗ್ಗೆ ಅವರಲ್ಲಿನ ಕಳಕಳಿ ಹಾಗೂ ಕಾಳಜಿಗೆ ಧ್ಯೋತಕವಾಗಿದೆ.

ಈ ಪುಸ್ತಕವನ್ನು ಹೊರತಂದು ಒಂದು ಬೃಹತ್ ಸಂಸ್ಥೆ ಮಾಡಲಾಗದ ಕೆಲಸವನ್ನು ಕೇಶವ ವಿಟ್ಲ ಅವರು ಕೇವಲ ಒಬ್ಬ ವ್ಯಕ್ತಿಯಾಗಿ ಮಾಡಿದ್ದಾರೆಂಬುದು ಕೇಶವ ವಿಟ್ಲ ಅವರ ಕೀರ್ತಿಗೆ ಮತ್ತೊಂದು ಗರಿ ಮೂಡಿಸುತ್ತದೆ. ವಿಟ್ಲ ಅವರಲ್ಲಿ nose for news  ಎಂಬಂತೆ eyes for photography ಇತ್ತು. ಕೇಶವ ವಿಟ್ಲ ಅವರ ಈ ಪುಸ್ತಕವನ್ನು ಒಮ್ಮೆ ಅವಲೋಕಿಸಿದರೆ, ಯಾವುದೇ ಶ್ರಮವಿಲ್ಲದೆ ಕರ್ನಾಟಕದ ಪ್ರೇಕ್ಷಣೀಯ ತಾಣಗಳನ್ನು ಒಂದು ಸುತ್ತು ಹಾಕಿಕೊಂಡು ಬಂದ ಅನುಭವವಾಗುತ್ತದೆ. ಅಷ್ಟೇ ಅಲ್ಲ, ಈ ಎಲ್ಲ ತಾಣಗಳನ್ನು ಜೀವನಲ್ಲಿ ಒಮ್ಮೆಯಾದರೂ ನೋಡಬೇಕೆನಿಸುತ್ತದೆ. ಜೊತೆಗೆ, ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಕುಮಾರಸ್ವಾಮಿ ತಮ್ಮ ಸಂದೇಶದಲ್ಲಿ ಬಣ್ಣಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X