Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದುಬೈಯ ಈ ಮಸೀದಿಯಲ್ಲಿ ಭಾರತದ ಕಂಞಿಗಾಗಿ...

ದುಬೈಯ ಈ ಮಸೀದಿಯಲ್ಲಿ ಭಾರತದ ಕಂಞಿಗಾಗಿ ಸೇರುತ್ತಾರೆ ಸಾವಿರಾರು ಮಂದಿ

ವಾರ್ತಾಭಾರತಿವಾರ್ತಾಭಾರತಿ28 May 2018 8:58 PM IST
share
ದುಬೈಯ ಈ ಮಸೀದಿಯಲ್ಲಿ ಭಾರತದ ಕಂಞಿಗಾಗಿ ಸೇರುತ್ತಾರೆ ಸಾವಿರಾರು ಮಂದಿ

ದುಬೈ, ಮೇ 28 : ಇಲ್ಲಿನ ದೇರಾದಲ್ಲಿರುವ ಕುವೈತಿ ಮಸೀದಿ ದುಬೈಯಲ್ಲಿರುವ ವಿಶ್ವದ ವಿವಿಧೆಡೆಯ ಜನರ ಪಾಲಿಗೆ ಫೇವರಿಟ್ ಇಫ್ತಾರ್ ಪಾಯಿಂಟ್. ಇದಕ್ಕೆ ಕಾರಣವೇನು ಗೊತ್ತೇ ? ಭಾರತದ ಗಂಜಿ ಅಥವಾ ಮುಸ್ಲಿಮರ ಮಾತಲ್ಲಿ ಹೇಳುವುದಾದರೆ ಕಂಞಿ ! 

ಭಾರತದ ವಿವಿಧೆಡೆ ಅದರಲ್ಲೂ ವಿಶೇಷವಾಗಿ ಕರ್ನಾಟಕ ಕರಾವಳಿಯ ಮುಸ್ಲಿಮರಿಗೆ ಇಫ್ತಾರ್ ಸಮಯದಲ್ಲಿ ಅತ್ಯಂತ ಅಚ್ಚುಮೆಚ್ಚಿನ ಆಹಾರವಾದ ಕಂಞಿ ಈ ಮಸೀದಿಯಲ್ಲಿ ಇಫ್ತಾರ್ ಗೆ ಲಭ್ಯವಿರುತ್ತದೆ. ಇದು ಇಲ್ಲಿ ಎಷ್ಟು ಜನಪ್ರಿಯವಾಗಿದೆಯೆಂದರೆ ಕೇವಲ ಇದಕ್ಕಾಗಿಯೇ ದುಬೈಯ ವಿವಿಧೆಡೆಗಳಿಂದ ಇಫ್ತಾರ್ ಮಾಡಲು ಈ ಮಸೀದಿಗೆ ಜನರು ದೊಡ್ಡ ಸಂಖ್ಯೆಯಲ್ಲಿ ಬಂದು ಸೇರುತ್ತಾರೆ. ಹಾಗೆ ಬರುವವರಲ್ಲಿ ಹೆಚ್ಚಿನವರು ಭಾರತೀಯರು ಎಂದು ನೀವು ಭಾವಿಸಿದ್ದರೆ ತಪ್ಪು. ಇಲ್ಲಿಗೆ ಬರುವವರಲ್ಲಿ ಬಹಳಷ್ಟು ಮಂದಿ ದುಬೈ ಯಲ್ಲಿ ನೆಲೆಸಿರುವ ವಿಶ್ವದ ವಿವಿಧೆಡೆಗಳ ಜನರು.  ಸುಮಾರು 6,000 ಮಂದಿ ಇಲ್ಲಿ ಇಫ್ತಾರ್ ಗಾಗಿ ಸೇರುತ್ತಾರೆ. ಅವರಲ್ಲಿ ಕಾರ್ಮಿಕರು, ಬೇರೆ ಬೇರೆ ಉದ್ಯೋಗಿಗಳು ಮಾತ್ರವಲ್ಲದೆ ಪ್ರವಾಸಿಗರು, ಉದ್ಯಮಿಗಳೂ ಇರುತ್ತಾರೆ. 

ಈ ದಕ್ಷಿಣ ಭಾರತದ ಖ್ಯಾತ ಆಹಾರ ಪದಾರ್ಥವನ್ನು ಕುವೈತಿ ಮಸೀದಿಯಲ್ಲಿ 42 ವರ್ಷಗಳ ಹಿಂದೆ ಇಫ್ತಾರ್ ಸಮಯದಲ್ಲಿ ನೀಡಲು ಪ್ರಾರಂಭಿಸಲಾಯಿತು. ಬಳಿಕ ಪ್ರತಿವರ್ಷ ಇದನ್ನು ಮುಂದುವರೆಸಿಕೊಂಡು ಬರಲಾಗಿದೆ. ಇಲ್ಲಿನ ಇಮಾನ್ ಕಲ್ಚರಲ್ ಸೆಂಟರ್ ನ ನೂರಕ್ಕೂ ಹೆಚ್ಚು ಕಾರ್ಯಕರ್ತರು ಇದಕ್ಕಾಗಿ ದುಡಿಯುತ್ತಾರೆ. ಈ ಗಂಜಿಯಲ್ಲಿ ಅಕ್ಕಿ , ತೆಂಗಿನಕಾಯಿ, ಮೆಂತೆ ಕಾಳು  ಮಾತ್ರವಲ್ಲದೆ ಮಾಂಸದ ತುಣುಕುಗಳನ್ನು ಭಾರತದ ಮಸಾಲೆ ಪದಾರ್ಥಗಳ ಜೊತೆ ಸೇರಿಸಿ ಅತ್ಯಂತ ರುಚಿಕರವಾಗಿ ತಯಾರಿಸಲಾಗುತ್ತದೆ. 

ಗಂಜಿ ತಿನ್ನಲು ನನಗೆ ಬಹಳ ಖುಷಿ. ನಮ್ಮ ದೇಶದಲ್ಲೂ ಇಂತಹ ಆಹಾರ ತಿನ್ನುತ್ತೇವೆ. ಹಾಗಾಗಿ ಇಲ್ಲಿಗೆ ಬಂದು ಇದನ್ನು ತಿನ್ನುವಾಗ ಮನೆಯ ಊಟ ಮಾಡಿದಂತೆ ಖುಷಿಯಾಗುತ್ತದೆ.  ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಮತ್ತು ದೇಹಕ್ಕೆ ಶಕ್ತಿ ನೀಡುತ್ತದೆ ಎಂದು ಆಫ್ರಿಕಾದ ನೌಶಾದ್ ಅಬ್ದುಲ್ಲಾ ದಿ ನ್ಯಾಷನಲ್ ಪತ್ರಿಕೆಯ ಪ್ರತಿನಿಧಿ ಜೊತೆ ಮಾತನಾಡುತ್ತ ಹೇಳಿದ್ದಾರೆ. 

ಇಫ್ತಾರ್ ಗೆ ಒಂದು ಗಂಟೆ ಮೊದಲೇ ಜನರು ಬಂದು ಇಲ್ಲಿ ಸರತಿ ಸಾಲಿನಲ್ಲಿ ನಿಂತುಕೊಳ್ಳುತ್ತಾರೆ. ಇದರಲ್ಲಿ ಮುಸ್ಲಿಮರು ಮಾತ್ರವಲ್ಲದೆ ಎಲ್ಲ ಧರ್ಮೀಯರು ಇರುತ್ತಾರೆ. ಕೆಲವರು ಅಲ್ಲಿ ಬಂದು ಡಬ್ಬಗಳಲ್ಲಿ ನೀಡುವ ಗಂಜಿಯನ್ನು ತಾವಿರುವಲ್ಲಿಗೆ ತೆಗೆದುಕೊಂಡು ಹೋಗಿ ಸೇವಿಸುತ್ತಾರೆ. 

" ಇಲ್ಲಿ ಎಲ್ಲರಿಗೂ ಸ್ವಾಗತ. ಮುಸ್ಲಿಮರು , ಮುಸ್ಲಿಮೇತರರು, ಉಪವಾಸಿಗರು, ಉಪವಾಸ ಇಡದವರು ಎಂಬ ಭೇದ ಇಲ್ಲ. ಹಸಿವಾದವರು ಯಾರು ಬೇಕಾದರೂ ಇಲ್ಲಿ ಬರಬಹುದು " ಎಂದು ಹೇಳುತ್ತಾರೆ ಇಮಾನ್ ಕಲ್ಚರಲ್ ಸೆಂಟರ್ ನ ಪ್ರಧಾನ ಕಾರ್ಯದರ್ಶಿ ಹಮೀದ್ ಯಾಸಿನ್. 

ಕೃಪೆ: www.thenational.ae

share
ವಾರ್ತಾಭಾರತಿ
ವಾರ್ತಾಭಾರತಿ
Next Story
X