Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾರ್ಕಳದಲ್ಲಿ 8 ಮನೆಗಳಿಗೆ ಸಿಡಿಲಿನಿಂದ...

ಕಾರ್ಕಳದಲ್ಲಿ 8 ಮನೆಗಳಿಗೆ ಸಿಡಿಲಿನಿಂದ ಹಾನಿ, ಒಬ್ಬರಿಗೆ ಗಾಯ

ತೋಟ, ಕೃಷಿ, 30 ಮನೆಗಳಿಗೆ ಹಾನಿ

ವಾರ್ತಾಭಾರತಿವಾರ್ತಾಭಾರತಿ28 May 2018 9:31 PM IST
share
ಕಾರ್ಕಳದಲ್ಲಿ 8 ಮನೆಗಳಿಗೆ ಸಿಡಿಲಿನಿಂದ ಹಾನಿ, ಒಬ್ಬರಿಗೆ ಗಾಯ

ಉಡುಪಿ, ಮೇ 28: ನಿನ್ನೆ ರಾತ್ರಿಯಿಂದ ತಡರಾತ್ರಿಯವರೆಗೆ ಭಾರೀ ಗಾಳಿ ಮಳೆಯೊಂದಿಗೆ ಆರ್ಭಟಿಸಿದ ಗುಡುಗು-ಸಿಡಿಲಿನಿಂದ ಕಾರ್ಕಳ ತಾಲೂಕಿನ ಮೂರು ಗ್ರಾಮಗಳ ವ್ಯಾಪ್ತಿಯ 9 ಮನೆಗಳಿಗೆ ಹಾನಿಯಾಗಿದೆ. ಒಬ್ಬ ಕಾಲಿಗೆ ಸಿಡಿಲು ಬಡಿದು ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಆರು ಕಡೆಗಳಲ್ಲಿ ತೋಟಗಾರಿಕಾ ಹಾಗೂ ಕೃಷಿ ಬೆಳೆಗಳಿಗೆ ಹಾನಿಯುಂಟಾಗಿದೆ ಎಂದು ಇಲ್ಲಿಗೆ ಬಂದಿರುವ ಮಾಹಿತಿಗಳು ತಿಳಿಸಿವೆ.

ಮಿಯಾರು ಗ್ರಾಮದ ಮೋನು ಮೊಯ್ಲಿ ಎಂಬವರ ಕಾಲಿಗೆ ಸಿಡಿಲಿನಿಂದ ಗಾಯವಾಗಿದೆ. ಉಳಿದಂತೆ ಮಿಯಾರು ಗ್ರಾಮದ ಜಗನ್ನಾಥ ಮೊಯ್ಲಿ, ಸುಂದರಿ ಮೊಯ್ಲಿ, ಸದಾಶಿವ ಆಚಾರ್ಯ, ಮಹಾಬಲ ಶೆಟ್ಟಿ,ನಳಿನಿ ಹಾಗೂ ಕಸ್ತೂರಿ ಮೋನಪ್ಪ ಎಂಬವರ ಮನೆಗಳಿಗೆ ಸಿಡಿಲಿನಿಂದ ಹಾನಿಯಾಗಿವೆ.

ಇನ್ನು ಬೋಳಾ ಗ್ರಾಮದ ಸೋಮಾವತಿ ಹಾಗೂ ನಲ್ಲೂರು ಗ್ರಾಮದ ಮರಿಯಮ್ಮ ಎಂಬವರ ಮನೆಗಳಿಗೆ ಸಿಡಿಲು ಬಡಿದು ವ್ಯಾಪಕ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಇವುಗಳಲ್ಲಿ ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ವಿದ್ಯುತ್ ವಯರಿಂಗ್ ಹಾಗೂ ವಿದ್ಯುತ್ ಉಪಕರಣಗಳು ನಾಶವಾಗಿವೆ.
ಸಾಣೂರು ಗ್ರಾಮದ ಆಲ್ಫೋನ್ಸ್ ಡಿಸೋಜ ಎಂಬವರ ಮನೆಯ ತೋಟದ ಬಾಳೆ, ಅಡಿಕೆ ಗಿಡಗಳು ಗಾಳಿಗೆ ನೆಲಕಚ್ಚಿದ್ದರೆ, ಮಿಯಾರು ಗ್ರಾಮದ ಚಂದ್ರಹಾಸ, ಸುನಂದ, ಗೋವಿಂದ ನಾಯ್ಕ, ಸುಲೋಚನ, ಈಶ್ವರ ನಾಯ್ಕ, ಪೊಮರ ಮೂಲ್ಯ ಅವರ ಮನೆಯ ತೋಟದ ಅಡಿಕೆ, ತೆಂಗು, ಬಾಳೆ ಹಾಗೂ ಇತರ ಗಿಡಗಳು ಗಾಳಿಗೆ ಉರುಳಿ ಬಿದ್ದು ನಷ್ಟ ಉಂಟಾಗಿದೆ.

 ಉಳಿದಂತೆ ಮಿಯಾರು ಗ್ರಾಮದ ಸುಮತಿ ಮೂಲ್ಯ, ಕಲ್ಯಾಣಿ ಮೂಲ್ಯ, ಕಸಬಾ ಗ್ರಾಮದ ಮಂಜುಳಾ ಆನಂದರಾವ್, ರಮಣಿ ಆಚಾರ್ಯ, ಅನುಷಾ, ರತ್ನ, ಸಾಣೂರು ಗ್ರಾಮದ ಐಸಮ್ಮ, ಕಲ್ಲಯ್ಯ ಹಿರೇಮಠ, ರಮಣಿ ಶೆಟ್ಟಿಗಾರ್, ಪ್ರೇಮ ಪೂಜಾರಿ, ಶೋಭಾ ಶೇಖರ ಪೂಜಾರಿ, ನೋಣಯ್ಯ ಪರವ, ಅಬ್ದುಲ್ಲಾ, ಸಾಧು ಶೆಟ್ಟಿಗಾರ್, ಇಸ್ಮಾಯಿಲ್, ಮಿಯಾರಿನ ಸುಮತಿ ಸತೀಶ್ ಮೂಲ್ಯ ಹಾಗೂ ಜಗನನಾಥ ಮೂಲ್ಯ ಅವರ ಮನೆಗಳು ಗಾಳಿ-ಮಳೆಗೆ ಭಾಗಶ: ಹಾನಿಗೊಂಡಿದ್ದು, 5,000ರೂ.ಗಳಿಂದ 80,000ರೂ.ಗಳವರೆಗೆ ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.

ಕಾರಿನ ಮೇಲೆ ಮರ ಬಿದ್ದು 3 ಲಕ್ಷ ಹಾನಿ: ಉಡುಪಿ ತಾಲೂಕು ಮೂಡನಿಡಂಬೂರಿನ ವನಿತಾ ಎಂಬವರ ಕಾರಿನ ಮೇಲೆ ಮರ ಬಿದ್ದು 3 ಲಕ್ಷ ರೂ.ನಷ್ಟ ಸಂಭವಿಸಿದೆ. ಅದೇ ಗ್ರಾಮದ ಜಯರಾಂ ಎಂಬವರ ಮನೆಗೆ 30,000ರೂ., 76 ಬಡಗುಬೆಟ್ಟಿನ ಶ್ರೀಮತಿ ಉಪಾಧ್ಯಾಯರ ಮನೆಗೆ 50,000ರೂ., ಅಂಬಲಪಾಡಿ ಗ್ರಾಮದ ಸಂಜೀವ ಪೂಜಾರ್ತಿ, ಶೋಭಾ, ಸುಗಂಧಿ, ಕಿದಿಯೂರು ಗ್ರಾಮದ ಆನಂದ ಪೂಜಾರಿ, ವಸಂತಿ, ಶಶಿಧರ ಪೂಜಾರಿ, ವಾರಿಜ, ಗ್ರೆಗರಿ ಡಿಸೋಜ, ಪುತ್ತೂರು ಗ್ರಾಮದ ಕೆ.ವಿಠಲ ಮತ್ತು ವೆಂಕಟೇಶ ಎಂಬವರ ಮನೆಗಳಿಗೆ ಗಾಳಿ-ಮಳೆಯಿಂದ ಅಲ್ಲದೇ ಮರ ಬಿದ್ದು ಹಾನಿಯಾಗಿವೆ. ಪೆರ್ಡೂರು ಗ್ರಾಮದ ಬಾಬಿ ಪಾನಾರ ಅವರ ಮನೆಗೆ ಭಾಗಶ: ಹಾನಿಯಾಗಿ 30,000ರೂ.ನಷ್ಟ ಉಂಟಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X