ದೀವಿತ್ಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ

ಮೂಡುಬಿದಿರೆ, ಮೇ 28: ಗೋವಾ ಕರ್ಮಭೂಮಿ ಕನ್ನಡ ಸಂಘದ ದಶಮಾನೋತ್ಸವ ಪ್ರಯುಕ್ತ ನಡೆದ ಕನ್ನಡಿಗರ ಸಮ್ಮೇಳನದಲ್ಲಿ ಯಕ್ಷಗಾನ ಕಲಾವಿದ, ಪತ್ರಕರ್ತ ದೀವಿತ್ ಕೋಟ್ಯಾನ್ ಅವರಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಗೋವಾದ ಬಿಜ್ಜೋಲಿ ಹೀರಾಬಾಯಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೀವಿತ್ ಏಕವ್ಯಕ್ತಿ ಯಕ್ಷಗಾನ ನೀಡಿದ ಬಳಿಕ ಅವರಿಗೆ ಸಮ್ಮೇಳನದ ಅಧ್ಯಕ್ಷ ರವೀಂದ್ರ ತೋಟಿಗೇರ ಪ್ರಶಸ್ತಿ ಪ್ರದಾನ ಮಾಡಿದರು.
Next Story