ಬೀಡಿಕಾರ್ಮಿಕರಿಗೆ ವಂಚಿಸುತ್ತಿರುವ ಬೀಡಿ ಮಾಲಕರು: ಬಿ.ಎಂ.ಭಟ್

ಬೆಳ್ತಂಗಡಿ, ಮೇ 29: ಬೀಡಿ ಕಂಪೆನಿಯ ಮಾಲರು ಬೀಡಿಕಾರ್ಮಿಕರನ್ನು ದುಡಿಸಿ ಶೋಷಿಸುತ್ತಾ ಸರಕಾರದ ಕೃಪಕಟಾಕ್ಷದಲ್ಲಿ ಕಾರ್ಮಿಕರನ್ನು ವಂಚಿಸುತಾ ಇದ್ದಾರೆ ಎಂದು ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಅದ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು.
ಅವರು ಇಂದು ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿವಿಧಾನ ಸೌಧದ ಎದುರು ನಡೆದ ಕಾರ್ಮಿಕರ ಧರಣಿಯನ್ನುದ್ದೇಶಿಸಿ ಮಾತಾಡುತ್ತಿದ್ದರು. ಕೋಮುವಾದದ ವಿರುದ್ಧ ಸ್ವರ ಎತ್ತುವವರಿಗಾಗಲಿ, ಹಿಂದೂ ಉದ್ಧಾರಕರಿಗಾಗಲಿ, ಧರ್ಮೋದ್ಧಾರಕರಿಗಾಗಲಿ, ಅಧಿಕಾರಕ್ಕಾಗಿ ಕಚ್ಚಾಡುವವರಿಗಾಗಲಿ ನಮ್ಮಜಿಲ್ಲೆಯ 4 ಲಕ್ಷ ಬೀಡಿ ಕಾರ್ಮಿಕರ ಚಿಂತಾಜನಕ ಬದುಕಿನ ಬಗ್ಗೆ ಅರಿವಿಲ್ಲದಾಗಿದೆ. ಹಿಂದೂ ಮಾಲಕರೇ ಹಿಂದೂ ಕಾರ್ಮಿಕರಿಗೆ ಶೋಷಿಸುತ್ತಾ ವಂಚಿಸುತ್ತಿದ್ದಾರೆಂದರೆ ಹಿಂದೂ ಉದ್ಧಾರ ಮಾಡುತ್ತೇನೆಂದು ಹೇಳುವ ಸಂಘ ಪರಿವಾರಗಳಿಗೆ ಹಿಂದೂ ಮಾಲಕರ ಹಿತವಷ್ಟೇ ಬೇಕಾಗಿದೆ ಎಂದು ಅವರು ಹೇಳಿದರು.
ಸಂಘದ ಕಾರ್ಯದರ್ಶಿ ಈಶ್ವರಿ ಸ್ವಾಗತಿಸಿದರು. ಹೋರಾಟದಲ್ಲಿ ಕಾರ್ಮಿಕ ಮುಖಂಡರುಗಳಾದ ಜಯರಾಮ ಮಯ್ಯ, ಲೋಕೇಶ್ ಕುದ್ಯಾಡಿ, ನೆಬಿಸಾ, ಜಯಶ್ರೀ, ಪುಷ್ಪಾ, ಇಂದಿರಾ, ಸುಜಾತ, ಜೋಶೀಲಾ, ಸುಮಿತ್ರ, ಸಂಜೀವ ನಾಯ್ಕ, ರಾಮಚಂದ್ರ, ದಿನೇಶ್, ಧನಂಜಯಗೌಡ, ಡೊಂಬಯಗೌಡ, ವಿಠಲ ಮಲೆಕುಡಿಯ, ಸವಿತ, ವೇದಾವತಿ ಮೊದಲಾದವರು ಇದ್ದರು. ಜಯಶ್ರೀ ವಂದಿಸಿದರು.