Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪಾದೆಬೆಟ್ಟು ನಿಧಿ ಸಾವಿಗೆ ರಾ.ಹೆದ್ದಾರಿ...

ಪಾದೆಬೆಟ್ಟು ನಿಧಿ ಸಾವಿಗೆ ರಾ.ಹೆದ್ದಾರಿ ಸೇತುವೆ ಕಾಮಗಾರಿ ಕಾರಣ

ಸ್ಥಳೀಯರ ಆರೋಪ: ಶೀಘ್ರ ಕಾಮಗಾರಿ ನಡೆಸುವಂತೆ ಆಗ್ರಹ

ವಾರ್ತಾಭಾರತಿವಾರ್ತಾಭಾರತಿ30 May 2018 8:33 PM IST
share
ಪಾದೆಬೆಟ್ಟು ನಿಧಿ ಸಾವಿಗೆ ರಾ.ಹೆದ್ದಾರಿ ಸೇತುವೆ ಕಾಮಗಾರಿ ಕಾರಣ

ಉಡುಪಿ, ಮೇ 30: ಪಡುಬಿದ್ರೆ ಸಮೀಪದ ಪಾದೆಬೆಟ್ಟುವಿನಲ್ಲಿ ನಿನ್ನೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ವಿದ್ಯಾರ್ಥಿನಿ ನಿಧಿ ಆಚಾರ್ಯ(9) ಸಾವಿಗೆ ಪಡುಬಿದ್ರೆ ಕಲ್ಸಂಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯೇ ಕಾರಣ ಎಂಬುದು ಸ್ಥಳೀಯರ ಆರೋಪ.

ಪಾದೆಬೆಟ್ಟುವಿನ ಉಮೇಶ್ ಆಚಾರ್ಯ ಹಾಗೂ ಆಶಾ ದಂಪತಿಯ ಮಕ್ಕ ಳಾದ ಮೃತ ನಿಧಿ ಆಚಾರ್ಯ ಹಾಗೂ ಆಕೆಯ ಸಹೋದರಿ ನಿಶಾ ಆಚಾರ್ಯ ಪಡುಬಿದ್ರೆಯ ಎಸ್‌ಬಿವಿಪಿ ಹಿರಿಯ ಪ್ರಾಥಮಿಕ ಶಾಲೆಯಿಂದ ಮನೆಗೆ ಸೈಕಲಿ ನಲ್ಲಿ ಬರುತ್ತಿರುವಾಗ ಮಳೆ ನೀರಿಗೆ ಕೊಚ್ಚಿ ಹೋಗಿದ್ದರು. ಇವರಲ್ಲಿ ನಿಶಾಳನ್ನು ಸ್ಥಳೀಯರು ರಕ್ಷಿಸಿದ್ದರು. ಆದರೆ ನಿಧಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಪಾದೆಬೆಟ್ಟು ಪರಿಸರದ ಮಳೆಯ ನೀರು ತೋಡಿನಲ್ಲಿ ಹರಿದು ಹೋಗಿ ಕಲ್ಸಂಕ ರಾಷ್ಟ್ರೀಯ ಹೆದ್ದಾರಿ ಸೇತುವೆ ಮೂಲಕ ಸಮುದ್ರ ಸೇರುತ್ತದೆ. ಆದರೆ ಈ ಬಾರಿ ಸೇತುವೆ ಕಾಮಗಾರಿಯಿಂದಾಗಿ ಇಲ್ಲಿ ಹರಿದು ಹೋಗುವ ನೀರಿಗೆ ತಡೆಯೊಡ್ಡಿದಂತಾಗಿತ್ತು. ಇದರಿಂದ ಪಾದೆಬೆಟ್ಟು ಪ್ರದೇಶದ ಇಡೀ ಗದ್ದೆಗಳು ಮಳೆ ನೀರಿನಿಂದ ತುಂಬಿ ಹೋಗಿ ಹೊಳೆಯಂತಾಗಿವೆ. ಇದರ ಪರಿಣಾಮ ಪಾದೆಬೆಟ್ಟುವಿನಿಂದ ಪಡುಬಿದ್ರೆಗೆ ತೆರಳುವ ರಸ್ತೆ ನೀರಿನಲ್ಲಿ ಮುಳುಗಿ ಹೋಗಿದೆ. ಹೀಗಾಗಿ ಬಾಲಕಿ ನಿಧಿ ಜೀವ ಬಲಿಯಾಗಿದೆಂದು ಸ್ಥಳೀಯರು ದೂರುತ್ತಾರೆ.

‘ನಿನ್ನೆ ಸುರಿದ ಭಾರೀ ಮಳೆಯುಂದಾಗಿ ಇಲ್ಲಿ ನೀರು ತುಂಬಾ ರಭಸವಾಗಿ ಹರಿದು ಹೋಗುತ್ತಿತ್ತು. ಇಂದು ಮಳೆ ಕಡಿಮೆಯಾದರೂ ನೀರು ಮಾತ್ರ ಇಳಿದು ಹೋಗಿಲ್ಲ. ರಸ್ತೆ ಕೂಡ ನೀರುಪಾಲಾಗಿಯೇ ಇದೆ. ಇದಕ್ಕೆ ರಾ.ಹೆ. ಯಲ್ಲಿನ ಸೇತುವೆ ಕಾಮಗಾರಿಯೇ ಕಾರಣ. ಇಷ್ಟು ವರ್ಷ ಇಲ್ಲಿ ಈ ರೀತಿಯ ಸಮಸ್ಯೆ ಎದುರಾಗಿಲ್ಲ. ಒಂದೆಡೆ ಸೇತುವೆ ಕಾಮಗಾರಿಯಿಂದ ಸರಿಯಾಗಿ ನೀರು ಹರಿದುಹೋಗಲು ಜಾಗ ಇಲ್ಲದಿರುವುದು, ಮತ್ತೊಂದೆಡೆ ಯುಪಿ ಸಿಎಲ್ ಸ್ಥಾವರದಿಂದ ನೀರು ಹರಿದು ಬರುತ್ತಿರುವುದರಿಂದ ಇಡೀ ಪಾದೆಬೆಟ್ಟು ಪರಿಸರ ಜಲಾವೃತ್ತಗೊಂಡಿದೆ ಎಂದು ಸ್ಥಳೀಯರಾದ ಅಭಿಷೇಕ್ ದೂರಿದರು.

‘ನಮ್ಮ ಮಕ್ಕಳು ಕೂಡ ಶಾಲೆಯಿಂದ ಇದೇ ದಾರಿಯಿಂದ ನಡೆದುಕೊಂಡು ಬರುತ್ತಿದ್ದಾರೆ. ಆದುದರಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮೊದಲು ಸೇತುವೆ ಕಾಮಗಾರಿಯನ್ನು ಮುಗಿಸಬೇಕು. ಅಲ್ಲದೆ ಪಾದೆಬೆಟ್ಟು ರಸ್ತೆಯ ಇಕ್ಕೆಲಗಳಿಗೆ ಸುರಕ್ಷತಾ ಕ್ರಮವಾಗಿ ತಡೆ ನಿರ್ಮಿಸಬೇಕು. ಅಲ್ಲದೆ ಈ ರಸ್ತೆ ಕಾಂಕ್ರೀಟ್ ಕಾಮ ಗಾರಿಯು ಅರ್ಧಕ್ಕೆ ನಿಂತಿದ್ದು ಕೂಡಲೇ ಇದನ್ನು ಪೂರ್ಣಗೊಳಿಸಬೇಕು’ ಎಂದು ಜಗದೀಶ್ ಆಚಾರ್ಯ ಪಾದೆಬೆಟ್ಟು ಒತ್ತಾಯಿಸಿದರು.

ಮೃತ ಬಾಲಕಿಯ ತಾಯಿ ಆಶಾ ಮೂಲತಃ ಉಚ್ಚಿಲ ಪಣಿಯೂರಿನವರ ರಾಗಿದ್ದು, ಇವರು ಹಲವು ವರ್ಷಗಳಿಂದ ಪಡುಬಿದ್ರೆಯಲ್ಲಿ ವಾಸವಾಗಿದ್ದರು. ಎರಡು ವರ್ಷಗಳ ಹಿಂದೆ ಪಾದೆಬೆಟ್ಟುವಿನಲ್ಲಿ ಜಾಗ ಖರೀದಿಸಿ ಮನೆ ನಿರ್ಮಿಸಿ ಕೊಂಡಿದ್ದು. ಉಮೇಶ್ ಆಚಾರ್ಯ ಅಡುಗೆ ಮತ್ತು ಮರದ ಕೆಲಸ ನಿರ್ವ ಹಿಸುತ್ತಿದ್ದಾರೆ. ಈ ಬಡ ಕುಟುಂಬ ಇದೀಗ ಮನೆ ಮಗಳನ್ನು ಕಳೆದುಕೊಂಡು ರೋದಿಸುತ್ತಿದೆ.

‘ಹೆದ್ದಾರಿ ಸೇತುವೆ ಕಾಮಗಾರಿಯಿಂದ ಇಲ್ಲಿ ನೆರೆ ಸಂಭವಿಸಿ ಬಾಲಕಿ ಸಾವಿಗೆ ಕಾರಣವಾಗಿದ್ದರೆ ನವಯುಗ ಕಂಪೆನಿ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳು ವಂತೆ ಪತ್ರ ಬರೆಯುತ್ತೇನೆ. ಅಲ್ಲದೆ ಈ ಕುರಿತು ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಸೇತುವೆಯಡಿಯಲ್ಲಿ ನೀರು ಸುಗಮ ರೀತಿಯಲ್ಲಿ ಹರಿದುಹೋಗಲು ಕ್ರಮ ಕೈಗೊಳ್ಳಲು ತಿಳಿಸುತ್ತೇನೆ. ನಿಧಾನಗತಿಯಲ್ಲಿ ಕಾಮಗಾರಿ ನಡೆಸುತ್ತಿರುವ ನವಯುಗ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ರಸ್ತೆ ಬಿಟ್ಟರೆ ಬೇರೆ ಯಾವುದೇ ರಸ್ತೆ ಕಾಮಗಾರಿಯನ್ನು ಅವರಿಗೆ ನೀಡಿಲ್ಲ’

-ಶೋಭಾ ಕರಂದ್ಲಾಜೆ, ಸಂಸದರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ.

ನಿಶಾಳ ಜೀವ ಉಳಿಸಿದ 50ರ ಹರೆಯದ ಬೇಬಿ!


ಮನೆಯಿಂದ ಹೊರಗೆ ಕಾಲಿಡಲಾದಷ್ಟು ಮಳೆ ಹಾಗೂ ಸಿಡಿಲಿನ ಅಬ್ಬರದ ನಡುವೆ ಮನೆ ಎದುರಿನ ನೆರೆಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕಿ ಯೊಬ್ಬಳ ಚೀರಾಟ ಕೇಳಿ ರಕ್ಷಣೆಗೆ ದಾವಿಸಿದ 50ರ ಹರೆಯದ ಮಹಿಳೆ ಸ್ಥಳೀಯ ರನ್ನು ಬೊಬ್ಬೆ ಹಾಕಿ ಕರೆದು ಆಕೆಯ ಜೀವ ರಕ್ಷಿಸಿದರು.

ಇದು ಮಂಗಳವಾರ ಪಡುಬಿದ್ರೆ ಸಮೀಪದ ಪಾದೆಬೆಟ್ಟುವಿನ ನೆರೆಯ ನೀರಿ ನಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ನಿಧಿ ಆಚಾರ್ಯರ ಸಹೋದರಿ ನಿಶಾ ಆಚಾರ್ಯಳನ್ನು ಸ್ಥಳೀಯ ಮಹಿಳೆ ಬೇಬಿ ರಕ್ಷಿಸಿದ ಕ್ಷಣ.

‘ಸಂಜೆ ವೇಳೆ ಮನೆಯ ಕಿಟಕಿ ಕೂಡ ತೆರೆಯಲು ಆಗದಷ್ಟು ಗುಡುಗು ಸಿಡಿಲು ಬರುತ್ತಿತ್ತು. ಈ ಮಧ್ಯೆ ನಾನು ಮನೆಯ ಆವರಣದಲ್ಲಿ ತುಂಬಿದ ನೀರು ಹರಿದು ಹೋಗುವಂತೆ ಮಾಡಲು ಹೊರಗಡೆ ಬಂದಿದ್ದೆ. ಆಗ ಮನೆಯ ಎದುರಿನ ಗದ್ದೆಯಲ್ಲಿ ತುಂಬಿದ ನೆರೆಯ ನೀರಿನ ಮಧ್ಯೆ ಬಾಲಕಿಯೊಬ್ಬಳು ವಂಶಿ.. ವಂಶಿ.. (ಬೇಬಿಯ ಅಣ್ಣನ ಮಗಳು, ನಿಶಾಳ ಸಹಪಾಠಿ) ಎಂದು ಬೊಬ್ಬೆ ಹಾಕುತ್ತಿರುವುದು ಕಂಡು ಬಂತು’

ಗದ್ದೆಯ ಮಧ್ಯೆ ಸಿಕ್ಕಿದ ದಂಡೆಯ ಆಧಾರದಲ್ಲಿ ಸಿಲುಕಿದ ಬಾಲಕಿಯನ್ನು ರಕ್ಷಿಸಲು ಮುಂದಾದೆ. ನೋಡಿದರೆ ಆಕೆ ನನ್ನ ಅಣ್ಣನ ಮಗಳು ವಂಶಿಯ ಸಹ ಪಾಠಿ ನಿಶಾ ಆಗಿದ್ದಳು. ನನಗೆ ಈಜಲು ಬರುತ್ತದೆ. ಆದರೆ ಈಗ ವಯಸ್ಸಾಗಿ ರುವುದರಿಂದ ಸರಿಯಾಗಿ ಈಜಲು ಆಗುತ್ತಿರಲಿಲ್ಲ. ಆದರೂ ಆಕೆಯನ್ನು ರಕ್ಷಿಸ ಬೇಕೆಂದು ಆದಷ್ಟು ಹತ್ತಿರ ಹೋದೆ. ನನ್ನ ಕುತ್ತಿಗೆ ವರೆಗೆ ನೀರು ಬಂತು. ಕೊನೆಗೆ ಹತ್ತಿರ ಹೋಗಲು ಸಾಧ್ಯವಾಗಿಲ್ಲ. ಆಗ ಬೈಕಿನಲ್ಲಿ ಹೋಗುತ್ತಿದ್ದ ಯುವಕನನ್ನು ಕರೆದೆ. ನಂತರ ಬೊಬ್ಬೆ ಹಾಕಿ ಮನೆ ಸಮೀಪದ ಸತೀಶ್ ಶೆಟ್ಟಿ ಅವರನ್ನು ಕರೆದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅವರು ಬಾಲಕಿಯನ್ನು ರಕ್ಷಿಸಿದರು. ನಂತರ ನಮಗೆ ಆಕೆಯ ತಂಗಿ ನಿಧಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ ಎಂದು ಗೊತ್ತಾಯಿತು’ ಎಂದು ಪಾದೆಬೆಟ್ಟುವಿನ ಬೇಬಿ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X