ಮಂಗಳೂರು ಮಾರುಕಟ್ಟೆಗೆ 'ಅಧ್ವೈತ ಹುಂಡೈನ ನ್ಯೂ ಕ್ರೆಟಾ 2018'

ಮಂಗಳೂರು, ಮೇ 30: ಹುಂಡೈ ಕಾರು ಮಾರಾಟದಲ್ಲಿ ಪ್ರಥಮ ಸ್ಥಾನದಲ್ಲಿರುವ ನಗರವಾದ ಮಂಗಳೂರಿನಲ್ಲಿ ಅಧ್ವೈತ ಹುಂಡೈನ ವಿನೂತನ ಮಾದರಿಯ ನ್ಯೂ ಕ್ರೆಟಾ 2018 ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.
ಕನ್ನಡ-ತುಳು ಚಿತ್ರ ರಂಗದ ಉದಯೋನ್ಮುಖ ನಟಿ ಆರಾಧ್ಯ ಶೆಟ್ಟಿ ಕುಂಟಿಕಾನದಲ್ಲಿರುವ ಅಧ್ವೈತ ಹುಂಡೈ ಮಳಿಗೆಯಲ್ಲಿ ನೂತನ ಕಾರನ್ನು ಮಂಗಳೂರು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾ 21 ನೂತನ ಗ್ರಾಹಕರಿಗೆ ನೂತನ ಕಾರಿನ ಕೀ ಯನ್ನು ಹಸ್ತಾಂತರಿಸಿ ಶುಭ ಹಾರೈಸಿದರು.
ರಾಜ್ಯದಲ್ಲಿ 22 ಶೋ ರೂಂ ಮತ್ತು 26 ಸರ್ವಿಸ್ ಸೆಂಟರನ್ನು ಅಧ್ವೈತ ಹುಂಡೈ ಹೊಂದಿದೆ. ನೂತನ ನ್ಯೂ ಕ್ರೆಟಾ 2018 ಕಾರು ಹೆಚ್ಚುವರಿಯಾಗಿ ನೂತನ ಸೌಲಭ್ಯಗಳನ್ನು ಒಳಗೊಂಡಿದೆ. ಸ್ಮಾರ್ಟ್ ಎಲೆಕ್ಟ್ರಿಕ್ ಸನ್ ರೂಫ್,ಕ್ರೂಸ್ ಕಂಟ್ರೋಲ್ 6ನೆ ಪವರ್ ಎಡ್ಜ್ ಸ್ಟೇಬಲ್ ಡ್ರೈವರ್ ಸೀಟ್, ಸ್ಮಾರ್ಟ್ ಕೀ ಬ್ಯಾಂಡ್, ವಯರ್ ಲೆಸ್ ಪೋನ್ ಚಾರ್ಚ್ರ್ ಸುರಕ್ಷತಾ ಸೌಲಭ್ಯಗಳಾದ 6 ಏರ್ ಬ್ಯಾಗ್, ಬಿಯನ್ ಇಬಿಡಿ, ವಿಯಸ್ಎಂ ಹಾಗೂ ಹಿಲ್ ಅಸಿಸ್ಟ್ ಕಂಟ್ರೋಲ್ 17 ಇಂಚಿನ ಡೈಮಂಡ್ ಕಟ್ ಅಲೋಯ್ ವೀಲ್ 17 ಇಂಚಿನ ಎ.ವಿ.ಎನ್.ಟಚ್ ಸ್ಕ್ರೀನ್ ಜೊತೆ ವಿಪಿಸಿ ಡಿಸ್ ಪ್ಲೇಯನ್ನು ನೂತನ ಕಾರು ಒಳಗೊಂಡಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅದ್ವೈತ್ ಹುಂಡೈ ನ ಬ್ರಾಂಚ್ ಮ್ಯಾನೇಜರ್ ಶಿವಪ್ರಸಾದ್, ಸರ್ವಿಸ್ ಜನರಲ್ ಮ್ಯಾನೇಜರ್ ಶಶಿಕಾಂತ್ ಶೆಟ್ಟಿ, ಅಕೌಂಟ್ಸ್ ಮ್ಯಾನೇಜರ್ ಸುಧಾಕರ್, ಸೇಲ್ಸ್ ಮ್ಯಾನೇಜರ್ ಮೀನಾ ರೇಗೋ ಮೊದಲಾದವರು ಉಪಸ್ಥಿತರಿದ್ದರು.
ಶೋ ರೂಂ ಮ್ಯಾನೇಜರ್ ರಾಜೇಶ್ ಉಳ್ಳಾಲ್ ಸ್ವಾಗತಿಸಿದರು. ಸೇಲ್ಸ್ ಮ್ಯಾನೇಜರ್ ಹರ್ಷರಾಜ್ ವಂದಿಸಿದರು. ಪ್ರಸನ್ನ ಪ್ರಾರ್ಥಿಸಿ, ಸತೀಶ್ ಕಾರ್ಯ ಕ್ರಮ ನಿರೂಪಿಸಿದರು.