Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. 'ವೆನಿಲ್ಲಾ' ನಿರೂಪಣೆಯಲ್ಲಿ ವೇಗವಿಲ್ಲ

'ವೆನಿಲ್ಲಾ' ನಿರೂಪಣೆಯಲ್ಲಿ ವೇಗವಿಲ್ಲ

ಕನ್ನಡ ಸಿನೆಮಾ

ಶಶಿಶಶಿ3 Jun 2018 12:00 AM IST
share
ವೆನಿಲ್ಲಾ ನಿರೂಪಣೆಯಲ್ಲಿ ವೇಗವಿಲ್ಲ

ಪ್ರೀತಿ ಪ್ರೇಮದ ಚಿತ್ರದಲ್ಲಿ ಅನಿರೀಕ್ಷಿತ ಕೊಲೆ ಒಂದು ಸೇರಿಕೊಂಡರೆ ಅದು ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ನಿಲ್ಲಿಸುತ್ತದೆ. ಅದುವೇ ವೆನಿಲ್ಲಾ.

ಅವಿ ಮತ್ತು ಅನಘಾ ಎಂಬ ಬಾಲ್ಯಕಾಲದ ಸ್ನೇಹಿತರು ಬಹಳ ವರ್ಷಗಳ ಬಳಿಕ ಭೇಟಿಯಾಗುವುದು ಮತ್ತು ಬಾಲ್ಯದ ಪ್ರೀತಿ ಪ್ರೇಮವಾಗುವುದು ಚಿತ್ರದ ಆರಂಭ. ಅವರ ಪ್ರೇಮ ಮುಂದುವರಿಯುವ ಮುನ್ನ ಅನಘಾಳನ್ನು ಕೊಲೆಯ ಆಪಾದನೆಯಿಂದ ಪಾರು ಮಾಡುವ ಜವಾಬ್ದಾರಿ ಅವಿಯದಾಗುತ್ತದೆ. ಈ ಪ್ರಯತ್ನದಲ್ಲಿ ಅವಿ ಕೂಡ ಆಪಾದನೆಗೆ ಒಳಗಾಗುವ ಪರಿಸ್ಥಿತಿ ಬರುತ್ತದೆ. ಅಷ್ಟು ಹೊತ್ತಿಗೆ ಚಿತ್ರ ಮಧ್ಯಂತರ ತಲುಪಿರುತ್ತದೆ. ಎರಡನೇ ಭಾಗದಲ್ಲಿ ಆ ಕೊಲೆಯ ಹಿಂದೆ ಡ್ರಗ್ಸ್ ಮತ್ತು ಸಿಗರೆಟ್ ಮಾಫಿಯಾ ಅಡಗಿರುವ ಸತ್ಯ ಹೊರಬೀಳುತ್ತದೆ. ಅಲ್ಲಿಗೆ ಲವ್, ಸಸ್ಪೆನ್ಸ್, ಕ್ರೈಮ್ ಹೀಗೆ ಎಲ್ಲ ಭಾವವನ್ನು ಚಿತ್ರ ತೋರಿಸಿರುತ್ತದೆ. ಆದರೆ ಕತೆಯಲ್ಲಿನ ಈ ವೈವಿಧ್ಯಮಯ ಭಾವಗಳು ನಿರ್ದೇಶನದಲ್ಲಿ ಅಭಾವವಾಗಿ ಕಾಣಿಸಿವೆ.

ನಾಯಕನಾಗಿ ಅವಿನಾಶ್ ಉತ್ತಮ ನಟನೆಗೆ ಪ್ರಯತ್ನಿಸಿದ್ದಾರೆ. ಅನಘಾ ಪಾತ್ರದಲ್ಲಿ ಸ್ವಾತಿ ಕೊಂಡೆಯ ನಟನೆ ನೋಡಿದಾಗ ಕನ್ನಡಕ್ಕೂ ಒಬ್ಬ ತಮನ್ನಾ ಸಿಕ್ಕ ಫೀಲ್ ನೀಡುತ್ತದೆ. ‘ಟಗರು’ ಸಿನೆಮಾದ ‘ಕಾಕ್ರೋಚ್’ ಖ್ಯಾತಿಯ ಸುಧಿ, ಪುಟ್ಟದಾದರೂ ಪ್ರಮುಖವೆನಿಸುವ ಪಾತ್ರಗಳಲ್ಲಿ ಕಾಣಿಸಿರುವ ರೆಹಮಾನ್, ಬಿ. ಸುರೇಶ್ ಮೊದಲಾದವರು ತಮ್ಮ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ರವಿಶಂಕರ್ ಗೌಡ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಆದರೆ ನೋಟದಲ್ಲಿರುವ ಪೊಲೀಸ್ ಸ್ಮಾರ್ಟ್‌ನೆಸ್ ಅನ್ನು ಅವರ ಪಾತ್ರದ ವರ್ತನೆಗಳಿಗೆ, ಕಾರ್ಯವೈಖರಿಗಳಿಗೆ ನೀಡಲಾಗಿಲ್ಲ. ಹಾಗಾಗಿ ಡಮ್ಮಿಯಾಗಿಯೇ ಉಳಿದು ಬಿಡುತ್ತಾರೆ.

ಭರತ್ ಬಿಜೆ ಸಂಗೀತದ ಮಾಧುರ್ಯಮಯ ಗೀತೆಗೆ ಹಡಗು ಲೊಕೇಶನ್ ಆಗಿರುವ ರೀತಿ ಮನ ಮೋಹಕ. ಥೀಮ್ ಮ್ಯೂಸಿಕ್ ಹೊರತು ಪಡಿಸಿ ಹಿನ್ನೆಲೆ ಸಂಗೀತದಲ್ಲಿ ಹೇಳಿಕೊಳ್ಳುವಂಥದ್ದೇನೂ ಇಲ್ಲ. ಛಾಯಾಗ್ರಹಣದಲ್ಲಿಯೂ ಆಕರ್ಷಣೆಯಿಲ್ಲ. ಎಲ್ಲವೂ ಚೆನ್ನಾಗಿದ್ದರೆ ದೃಶ್ಯ ಸಿನೆಮಾದಂತೆ ಮರ್ಡರ್ ಮಿಸ್ಟ್ರಿ ಜೊತೆಗೆ ಒಂದು ಕೌಟುಂಬಿಕ ಮನೋರಂಜನಾ ಚಿತ್ರವಾಗಿಯೂ ಚಿತ್ರ ಮನಸೆಳೆಯುತ್ತಿತ್ತು.

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಇಂದಿನ ಪ್ರೇಕ್ಷಕರು ಮೊದಲು ಬಯಸುವುದು ವೇಗವನ್ನು. ಹಾಗಾಗಿ ಒಳ್ಳೆಯ ಕತೆ, ದೃಶ್ಯಗಳಿದ್ದರೂ ಕೂಡ ಸಡಿಲವಾದ ನಿರೂಪಣೆಯ ಕಾರಣ ನಿರಾಶೆ ಮೂಡಿಸುತ್ತದೆ ವೆನಿಲ್ಲಾ. ಆದರೆ ‘‘ಕುಟುಂಬ ಸಮೇತ ಕುಳಿತು ನೋಡುವಂಥ ಒಳ್ಳೆಯ ಸಂದೇಶಾತ್ಮಕ ಚಿತ್ರ ನೀಡುವ ನಿರ್ದೇಶಕ ಜಯತೀರ್ಥ’’ ಎಂಬ ಅಭಿಮಾನದಿಂದ ಚಿತ್ರ ನೋಡುವವರು ಖಂಡಿತವಾಗಿ ಆ ಅಭಿಮಾನವನ್ನು ಹಾಗೆಯೇ ಮುಂದುವರಿಸಬಹುದು. ಆ ನಿಟ್ಟಿನಲ್ಲಿ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಬಲ್ಲದು.

ತಾರಾಗಣ: ಅವಿನಾಶ್, ಸ್ವಾತಿ ಕೊಂಡೆ
ನಿರ್ದೇಶನ: ಜಯತೀರ್ಥ
ನಿರ್ಮಾಣ: ಎನ್. ಜಯರಾಮ

share
ಶಶಿ
ಶಶಿ
Next Story
X