ಮಂಗಳೂರು: ಜೋಯಾಲುಕ್ಕಾಸ್ ಆಭರಣ ಮಳಿಗೆಯಿಂದ ಪ್ರತಿಭಾ ಪುರಸ್ಕಾರ

ಮಂಗಳೂರು, ಜೂ. 3: ನಗರದ ಫಳ್ನಿರ್ ನಲ್ಲಿರುವ ಜೊಯಾಲುಕ್ಕಾಸ್ ಅಭರಣ ಮಳಿಗೆಯ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಡಾ. ಯತೀಶ್ ಕುಮಾರ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಗರದ ರಥಬೀದಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ಶೈಲಾ ರಾಣಿ ಬಿ, ಬ್ಯಾರೀಸ್ ಪಬ್ಲಿಕ್ ಸ್ಕೂಲ್ನ ಮುಖ್ಯೋಪಾಧ್ಯಾಯಿನಿ ಗೀತಾ ಜೆನ್ನಿಫರ್ ರೇಗೋ , ಜೋಯಾಲುಕ್ಕಾಸ್ ಸಂಸ್ಥೆಯ ಮ್ಯಾನೇಜರ್ ಹರೀಶ್ ಕುಮಾರ್, ಸಹಾಯಕ ವ್ಯವಸ್ಥಾಪಕ ವಿರೇಂದ್ರ ಮೊದಲಾದವರು ಉಪಸ್ಥಿತರಿದ್ದರು.
27 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:- ಸಮಾರಂಭದಲ್ಲಿ ಏಳು ಪ್ರೌಢ ಶಾಲೆಗಳ ಪೈಕಿ ಎಸ್ಎಸ್ಎಲ್ಸಿಯಲ್ಲಿ ಅಧಿಕ ಅಂಗ ಪಡೆದ 27 ವಿದ್ಯಾರ್ಥಿಗಳಿಗೆ ಜೊಯಾಲುಕ್ಕಾಸ್ ಸಂಸ್ಥೆಯ ವತಿಯಿಂದ ಫಳ್ನಿರ್ ಮಳಿಗೆಯಲ್ಲಿಂದು ಪ್ರತಿಭಾ ಪುರಸ್ಕಾರ ನಡೆಯಿತು.
ಕೆನರಾ ಹೈಸ್ಕೂಲಿನ ಮಯೂರ್ ಕಾಮತ್, ಕೃತಿಕ್ ಕೆ, ಶೇಲೇಶ್ ಪ್ರಭು, ಮಿಲಾಗ್ರೀಸ್ ಹೈಸ್ಕೂಲಿನ ಮನಿಶ್ ಆ್ಯಂಟೊನಿ ಪಿಂಟೋ, ಶೈನಿ ಥೋಮಸ್, ನಾರಾಯಣ ಗುರು ಹಯಸ್ಕೂಲಿನ ರಕ್ಷಾ, ಪ್ರಿಯಾಂಕ, ಕೆನರಾ ಗಲ್ಸ್ರ್ ಹೈಸ್ಕೂಲಿನ ಶ್ರೇಯಾ ಮಲ್ಯ, ಅನನ್ಯ, ಸರೋಜಿನಿ ಮಧುಸೂಧನ್ ಕುಶೆ ಸ್ಕೂಲ್ನ ನಂದಿನಿ ಆರ್ ಶರ್ಮಾ, ವಿಗ್ನೇಶ್ ಎಸ್ ನಾಯಕ್, ಕೃಷ್ಣ ಪ್ರಸಾದ್ ಕಿಣಿ, ರಿಂಕು ಕುಮಾರಿ, ರಕ್ಷಿತ ಎಚ್.ಡಿ, ವಿಶ್ಮಿತ ಎಂ, ಶ್ವೇತಾ, ಸೈಂಟ್ ಜೆರೊಸಾ ಹಯ ಸ್ಕೂಲ್ನ ಅಂಜಲಿ, ಶ್ರೇಯ, ಅಧಿತಿ ಎಸ್ ಅನಿಲ್, ಅಶಿಯತ್ ತವೋರಾ, ಸೈಂಟ್ ಆ್ಯನ್ಸ್ ಸ್ಕೂಲ್ನ ಗೌತಮಿ ಸಿಎಸ್, ಹರ್ಷ ಪ್ರಭು, ಕುಶಿ ಎಂ.ಕೆ, ಅಕಾಂಶ ಡಿ ಸಾಲ್ಯಾನ್, ಸೃಷ್ಟಿ ಹಾಗೂ ಬ್ಯಾರೀಸ್ ಆಂಗ್ಲ ಮಾಧ್ಯಮ ಹೈಸ್ಕೂಲಿನ ಖದೀಜಾ ನುಫ್ರಾ, ನಿಹಾ ಅಶ್ರೀನ್ ಮೊದಲಾದವರಿಗೆ ಅತಿಥಿಗಳು ಸ್ಮರಣಿಕೆ, ಪದಕ ಹಾಗೂ ಪ್ರಮಾಣ ಪತ್ರ ನೀಡಿ ಪುರಸ್ಕರಿಸಿದರು.