ಉಡುಪಿ: ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ

ಉಡುಪಿ, ಜೂ.5: ಉಡುಪಿ ಶ್ರೀಪೇಜಾವರ ಬ್ಲಡ್ ಡೊನೇಟಿಂಗ್ ಟೀಮ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪೇಜಾವರ ಶ್ರೀಗಳ ವೃಕ್ಷ- ರಕ್ಷ ಯೋಜನೆಯಡಿ ಉಚಿತ ಸಸಿ ವಿತರಣೆ ಕಾರ್ಯಕ್ರಮವನ್ನು ಇಂದು ನಗರದ ಕ್ಲಾಕ್ ಟವರ್ ಎದುರು ಹಮ್ಮಿಕೊಳ್ಳಲಾಗಿತ್ತು.
ರಿಕ್ಷಾ, ಬಸ್ ಚಾಲಕರು, ಬೈಕ್ ಸೇರಿದಂತೆ ವಿವಿಧ ವಾಹನ ಸವಾರರು, ಪೊಲೀಸರು, ಸಾರ್ವಜನಿಕರಿಗೆ ಒಟ್ಟು 1700 ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಡ್ ಟೀಮ್ನ ಅಧ್ಯಕ್ಷ ಆರೀಫ್ ದೊಡ್ಡಣಗುಡ್ಡೆ, ಪ್ರಧಾನ ಕಾರ್ಯದರ್ಶಿ ಅನ್ಸಾರ್ ಅಹ್ಮದ್, ಉಮೇಶ್ ಜೋಗಿ, ಪ್ರವೀಣ್ ಬಾರಕೂರು, ಜಾನ್, ಶಾಹೀಲ್, ಸಂದೀಪ್ ಮೊದಲಾದ ವರು ಉಪಸ್ಥಿತರಿದ್ದರು.
Next Story