Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮೊದಲ ಬಾರಿಗೆ ಕಬ್ಬಿಣ ಪೂರ್ವ ಯುಗದ ರಥ...

ಮೊದಲ ಬಾರಿಗೆ ಕಬ್ಬಿಣ ಪೂರ್ವ ಯುಗದ ರಥ ಪತ್ತೆ

ಪ್ರಪಂಚೋದ್ಯ

*ವಿಸ್ಮಯ*ವಿಸ್ಮಯ5 Jun 2018 11:59 PM IST
share
ಮೊದಲ ಬಾರಿಗೆ ಕಬ್ಬಿಣ ಪೂರ್ವ ಯುಗದ ರಥ ಪತ್ತೆ

ಉತ್ತರಪ್ರದೇಶದ ಸನೌಲಿಯಲ್ಲಿ ಉತ್ಖನನ  

ಭಾರತದಲ್ಲೇ ಮೊದಲ ಬಾರಿಗೆ ಸಮಾಧಿ ಹೊಂಡದಲ್ಲಿ ಪೂರ್ವ ಕಬ್ಬಿಣ ಯುಗ(ಕಂಚು)ದ ರಥ ಪತ್ತೆಯಾಗಿದೆ. ಇದು ಮಹಾಭಾರತ ಅವಧಿಯ ಕಾಲದ ಕುರಿತ ಹಾಗೂ ಹರಪ್ಪಾ ಕಾಲದಲ್ಲಿ ಕುದುರೆಗಳ ಉಗಮದ ಬಗ್ಗೆ ಹೆಚ್ಚಿನ ಸಂಶೋಧನೆಗೆ ದಾರಿ ಮಾಡಿ ಕೊಟ್ಟಿದೆ ಎಂದು ಉತ್ತರಪ್ರದೇಶದ ಸಾನೌಲಿಯಲ್ಲಿ ಕಳೆದ ಮೂರು ತಿಂಗಳಿಂದ ಸಂಶೋಧನೆ ನಡೆಸುತ್ತಿರುವ ತಜ್ಞರು ಹೇಳಿದ್ದಾರೆ. ಸಮಾಧಿ ಹೊಂಡದಲ್ಲಿ ಪೂರ್ವ ಕಬ್ಬಿಣ ಯುಗ (ಕಂಚು)ದ ರಥವನ್ನು ಪುರಾತತ್ವ ತಜ್ಞರ ತಂಡ ಪತ್ತೆ ಹಚ್ಚಿದೆ. ಈ ಹಿಂದೆ ಕಾಖಿಗರಿ, ಕಾಲಿಬಂಗನ್ ಹಾಗೂ ಲೋಥಾಲ್‌ನಲ್ಲಿ ಉತ್ಖನನ ನಡೆಸಿದಾಗ ಸಮಾಧಿ ಹೊಂಡಗಳು ಪತ್ತೆಯಾಗಿದ್ದವು. ಆದರೆ, ರಥ ಪತ್ತೆಯಾಗುತ್ತಿರುವುದು ಇದೇ ಮೊದಲು. ಸನೌಲಿಯಲ್ಲಿ ಈ ಉತ್ಖನನ 2018ರಲ್ಲಿ ಆರಂಭವಾಗಿತ್ತು. 1985ರಲ್ಲಿ ಸ್ಥಾಪಿಸಲಾದ ಪುರಾತತ್ವ ಸಂಸ್ಥೆಯ ಎಸ್.ಕೆ. ಮುಂಜುಳಾ ನೇತೃತ್ವದ 10 ಸದಸ್ಯರ ತಂಡ ಈ ಉತ್ಖನನವನ್ನು ನಡೆಸಿತ್ತು. ಇದರ ಸಹ ನಿರ್ದೇಶಕಿ ಅರ್ವಿನ್ ಮಂಜುಳಾ. ಈ ಬಗ್ಗೆ ಮಾತನಾಡಿರುವ ಮಂಜುಳಾ, ‘‘ಪ್ರಾಚೀನ ಜಾಗತಿಕ ಚರಿತ್ರೆಯಲ್ಲಿ ಭಾರತಕ್ಕೆ ಸ್ಥಾನವಿದೆ. ನಮ್ಮ ಸಮಕಾಲೀನ ನಾಗರಿಕತೆಗಳಾದ ಮೆಸಪಟೋಮಿಯಾ, ಜಾರ್ಜಿಯಾ ಹಾಗೂ ಗ್ರೀಕ್‌ನಲ್ಲಿ ರಥಗಳು ದೊರಕಿವೆ. ಈ ಸಂಶೋಧನೆ ಮೂಲಕ ಇತರ ನಾಗರಿಕತೆಗಳಂತೆ ನಮ್ಮ ನಾಗರಿಕತೆಯಲ್ಲೂ ಪೂರ್ವ ಕಬ್ಬಿಣ ಯುಗದ ರಥ ಪತ್ತೆಯಾಗಿದೆ ಎಂದು ಹೇಳಬಹುದು. ಇದು ನಮ್ಮ ಚರಿತ್ರೆಗೆ ನೂತನ ಆಯಾಮ ನೀಡಿದೆ. ನಾವು ನಮ್ಮ ಭೂತಕಾಲದ ಬಗ್ಗೆ ಮರು ಚಿಂತಿಸಬೇಕಿದೆ.’’ ಎಂದು ಅವರು ಹೇಳಿದ್ದಾರೆ. ಇದು ಕಂಚಿನ ಯುಗದ ರಥವಾಗಿದ್ದರೆ, ಇದನ್ನು ಚಲಾಯಿಸಲು ಏನನ್ನು ಬಳಸುತ್ತಿದ್ದರು. ಎತ್ತು ಅಥವಾ ಕುದುರೆ? ‘‘ಇದು ಚರ್ಚಾರ್ಹ ವಿಚಾರ. ಅದು ಎತ್ತು ಅಥವಾ ಕುದುರೆ ಆಗಿರಬಹುದು. ಆದರೆ, ಪ್ರಾಥಮಿಕ ಸಂಶೋಧನೆಯ ಆಧಾರದಲ್ಲಿ ಹೇಳುವುದಾದರೆ ಈ ರಥಕ್ಕೆ ಕುದುರೆಯನ್ನು ಬಳಸುತ್ತಿದ್ದರು. ಈ ರಥ ಮೆಸಪಟೋಮಿಯಾದ ನಾಗರಿಕತೆಯಲ್ಲಿ ಕಂಡು ಬಂದ ರಥದಂತೇ ಇದೆ’’ ಎಂದು ಮಂಜುಳಾ ಹೇಳಿದ್ದಾರೆ.
 

share
*ವಿಸ್ಮಯ
*ವಿಸ್ಮಯ
Next Story
X