ಜೂ. 8: ಪದವೀಧರರ/ಶಿಕ್ಷಕರ ಕ್ಷೇತ್ರದ ಚುನಾವಣೆ
ದ.ಕ. ಜಿಲ್ಲೆಯಲ್ಲಿ 37 ಮತಗಟ್ಟೆಗಳು
ಮಂಗಳೂರು, ಜೂ.7: ಭಾರತ ಚುನಾವಣಾ ಆಯೋಗದ ಅಧಿಸೂಚನೆಯಂತೆ ಕನಾಟಕ ನೈರುತ್ಯ ಪದವೀಧರ/ಶಿಕ್ಷಕರ ಕ್ಷೇತ್ರದ ದೈವಾರ್ಷಿಕ ಚುನಾವಣೆಗೆ ಜಿಲ್ಲೆಯಲ್ಲಿ ಕ್ರಮವಾಗಿ ಪದವೀಧರ ಕ್ಷೇತ್ರಕ್ಕಾಗಿ 23 ಮತಗಟ್ಟೆಗಳು ಮತ್ತು ಶಿಕ್ಷಕರ ಕ್ಷೇತ್ರಕ್ಕಾಗಿ 14 ಮತಗಟ್ಟೆಗಳನ್ನು ಅಳವಡಿಸಲಾಗಿದೆ.
ಪದವೀಧರರ ಕ್ಷೇತ್ರ ಮತಗಟ್ಟೆಗಳು: ಮುಲ್ಕಿ-ನಗರ ಪಂಚಾಯತ್ ಕಟ್ಟಡ, ಮೂಡಬಿದ್ರೆ-ಪುರಸಭೆ ಕಟ್ಟಡ (2 ಮತಗಟ್ಟೆ), ಸುರತ್ಕಲ್-ಗೋವಿಂದದಾಸ ಕಾಲೇಜು(2 ಮತಗಟ್ಟೆ), ಬಜಪೆ-ಪಂಚಾಯತ್ ಕಟ್ಟಡ, ಗುರುಪುರ- ಸರಕಾರಿ ಪದಪೂರ್ವ ಕಾಲೇಜು, ಹಂಪನಕಟ್ಟೆ-ಯುನಿವರ್ಸಿಟಿ ಕಾಲೇಜು ಮಂಗಳೂರು-(5 ಮತಗಟ್ಟೆಗಳು), ಕೊಣಾಜೆ-ವಿಶ್ವ ಮಂಗಳಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕೊಣಾಜೆ, ಬಬ್ಬುಕಟ್ಟೆ-ದ.ಕ. ಜಿಲ್ಲಾ ಪಂಚಾಯತ್ ಹೈಯರ್ ಪ್ರೈಮರಿ ಸ್ಕೂಲ್, ಬಿ.ಸಿ. ರೋಡ್-ಮಿನಿ ವಿಧಾನ ಸೌಧ ತಾಲೂಕು ಕಟ್ಟಡ (3 ಮತಗಟ್ಟೆ), ಬೆಳ್ತಂಗಡಿ-ತಾಲೂಕು ಕಚೇರಿ (2 ಮತಗಟ್ಟೆ), ಪುತ್ತೂರು-ತಾಲೂಕು ಪಂಚಾಯತ್ ಕಚೇರಿ (2 ಮತಗಟ್ಟೆ), ಸುಳ್ಯ-ತಾಲೂಕು ಕಚೇರಿ, ಪಂಜ-ನಾಡ ಕಚೇರಿ.ಶಿಕ್ಷಕರ ಕ್ಷೇತ್ರ ಮತಗಟ್ಟೆಗಳು:
ಮುಲ್ಕಿ-ನಗರ ಪಂಚಾಯತ್, ಮೂಡಬಿದ್ರೆ-ಪುರಸಭೆ ಕಟ್ಟಡ, ಸುರತ್ಕಲ್-ಗೋವಿಂದದಾಸ ಕಾಲೇಜು, ಬಜಪೆ-ಪಂಚಾಯತ್ ಕಟ್ಟಡ, ಗುರುಪುರ-ಸರಕಾರಿ ಪದಪೂರ್ವ ಕಾಲೇಜು, ಮಂಗಳೂರು-ಯುನಿವರ್ಸಿಟಿ ಕಾಲೇಜು ಮಂಗಳೂರು-(2 ಮತಗಟ್ಟೆಗಳು), ಕೊಣಾಜೆ-ವಿಶ್ವ ಮಂಗಳಾ ಇಂಗ್ಲಿಷ್ ಮೀಡಿಯಂ ಸ್ಕೂಲು, ಬಬ್ಬುಕಟ್ಟೆ-ದ.ಕ. ಜಿಲ್ಲಾ ಪಂಚಾಯತ್ ಹೈಯರ್ ಪ್ರೈಮರಿ ಸ್ಕೂಲ್, ಬಿ.ಸಿ. ರೋಡ್-ಸಾಮರ್ಥ್ಯ ಸೌಧ ತಾಲೂಕು ಪಂಚಾಯತ್ ಕಟ್ಟಡ, ಬೆಳ್ತಂಗಡಿ-ತಾಲೂಕು ಕಚೇರಿ, ಪುತ್ತೂರು-ತಾಲೂಕು ಪಂಚಾಯತ್ ಕಚೇರಿ, ಸುಳ್ಯ-ತಾಲೂಕು ಕಚೇರಿ, ಪಂಜ-ನಾಡ ಕಚೇರಿ.
ಜೂ.8ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮೇಲ್ಕಾಣಿಸಿರುವ ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕ್ಷೇತ್ರದ ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸಿರುವ ಮತದಾರರು ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ ಮತಗಟ್ಟೆಗಳಿಗೆ ತೆರಳಿ ಮತದಾನವನ್ನು ಮಾಡಬಹುದು. ಅಲ್ಲದೆ ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದವರು ಅಧಿಕೃತ ದಾಖಲೆಗಳಲ್ಲಿ ಯಾವುದಾದರೊಂದನ್ನು ಪತಗಟ್ಟೆಯಲ್ಲಿ ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.
ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು:ಅರುಣ್ ಕುಮಾರ್-ಜನತಾದಳ(ಜಾತ್ಯಾತೀತ), ಅಯನೂರು ಮಂಜುನಾಥ್-ಭಾರತೀಯ ಜನತಾ ಪಾರ್ಟಿ, ಎಸ್.ಪಿ. ದಿನೇಶ್- ಕಾಂಗ್ರೆಸ್, ಜಿ.ಸಿ. ಪಟೇಲ್-ಸರ್ವ ಜನತಾ ಪಾರ್ಟಿ, ಜಫರುಲ್ಲಾ ಸತ್ತಾರ್ ಖಾನ್-ಪಕ್ಷೇತರ, ಜಿ.ಎಂ. ಜಯಕುಮಾರ್-ಪಕ್ಷೇತರ, ಬಿ.ಕೆ. ಮಂಜುನಾಥ-ಪಕ್ಷೇತರ.ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ ಅಭ್ಯರ್ಥಿಗಳು:ಕ್ಯಾ. ಗಣೇಶ್ ಕಾರ್ಣಿಕ್-ಭಾರತೀಯ ಜನತಾ ಪಾರ್ಟಿ, ಎಸ್.ಎಲ್. ಬೋಜೆಗೌಡ-ಜನತಾದಳ (ಜಾತ್ಯಾತೀತ), ಕೆ.ಕೆ. ಮಂಜುನಾಥ ಕುಮಾರ್ (ಮಾಸ್ಟರ್)- ಕಾಂಗ್ರೆಸ್, ಡಾ.ಅರುಣ್ ಹೊಸಕೊಪ್ಪ-ಪಕ್ಷೇತರ, ಅಲೋಶಿಯಸ್ ಡಿಸೋಜ-ಪಕ್ಷೇತರ, ಕೆ.ಬಿ. ಚಂದ್ರೋಜಿ ರಾವ್-ಪಕ್ಷೇತರ, ಡಿ.ಕೆ. ತುಳಸಪ್ಪ-ಪಕ್ಷೇತರ, ಅಂಪಾರ ನಿತ್ಯಾನಂದ ಶೆಟ್ಟಿ-ಪಕ್ಷೇತರ, ಪ್ರಭುಲಿಂಗ ಬಿ.ಆರ್.-ಪಕ್ಷೇತರ, ಬಸವರಾಜಪ್ಪ ಕೆ.ಸಿ. - ಪಕ್ಷೇತರ, ಎಂ. ರಮೇಶ-ಪಕ್ಷೇತರ, ರಾಜೇಂದ್ರ ಕುಮಾರ್ ಕೆ.ಪಿ. -ಪಕ್ಷೇತರ.ಚುನಾವಣೆಯ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಸಿಸಿರುವ ಎಲ್ಲಾ ಮತದಾರರು ವಿವರಗಳನ್ನು ವೆಬ್ಸೈಟ್ dk.nic.in ನಲ್ಲಿ ಪರಿಶೀಲಿಸಿ ಜೂ.8 ರಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಸಹಾಯಕ ಚುನಾವಣಾಧಿಕಾರಿ, ಕರ್ನಾಟಕ ನೈರುತ್ಯ ಪದವೀಧರರ/ಶಿಕ್ಷಕರ ಕ್ಷೇತ್ರ ಹಾಗೂ ದ.ಕ. ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.







