ಮೂಡುಬಿದಿರೆ: ಅಕ್ರಮ ಕಸಾಯಿಖಾನೆಗೆ ಪೊಲೀಸರಿಂದ ದಾಳಿ
ಮೂಡುಬಿದಿರೆ, ಜೂ. 7: ತೋಡಾರು ಗ್ರಾಮದ ಹಂಡೇಲಿನ ಮುಂಡೇಲು ಎಂಬ ಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆಗೆ ಮೂಡುಬಿದಿರೆ ಪೊಲೀಸರು ಗುರುವಾರ ದಾಳಿ ನಡೆಸಿದ್ದು, ಮಾಂಸ ಮಾಡಲು ಕಟ್ಟಿ ಹಾಕಿದ್ದ 2 ಕರುಗಳನ್ನು ರಕ್ಷಿಸಿ, ಪ್ಯಾಕ್ ಮಾಡಿಟ್ಟಿದ್ದ 1.38 ಕ್ವಿಂಟಾಲ್ ದನದ ಮಾಂಸವನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ಹಸನ್ ಬಾವಾ ಎಂಬವರ ಮನೆಯಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ವಿಜಯಪ್ರಸಾದ್ ಮಾರ್ಗದರ್ಶನದಲ್ಲಿ ಪೊಲೀಸ್ ಉಪ ನಿರೀಕ್ಷಕ ದೇಜಪ್ಪ ನೇತೃತ್ವದಲ್ಲಿ ಪೊಲೀಸರು ಮಧ್ಯಾಹ್ನದ ವೇಳೆಗೆ ದಾಳಿ ನಡೆಸಿದ್ದು ಈ ಸಂದರ್ಭ ಹಸನ್ ಬಾವಾ ತಪ್ಪಿಸಿಕೊಂಡಿದ್ದು, ಮಹಮ್ಮದ್ ಸಮೀರ್ ಹಾಗು ಸೊತ್ತನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸ್ ಸಿಬ್ಬಂದಿಗಳಾದ ಮಹಮ್ಮದ್ ಮನ್ಸೂರ್, ಹಕೀಂ ಮಹಮ್ಮದ್, ಸುಜನ್, ಶಿವರುದ್ರಪ್ಪ, ಕೃಷ್ಣ ಮತ್ತು ಚಂದ್ರಹಾಸ ದಾಳಿಯಲ್ಲಿ ಭಾಗವಹಿಸಿದ್ದರು.
Next Story