Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಭಾರತದಿಂದ ಚೀನಾಗೆ ಎಲ್ಲಾ ವಿಧದ ಅಕ್ಕಿ...

ಭಾರತದಿಂದ ಚೀನಾಗೆ ಎಲ್ಲಾ ವಿಧದ ಅಕ್ಕಿ ರಫ್ತು

6 ವಾರಗಳ ಬಳಿಕ ಎರಡನೆ ಬಾರಿ ಚೀನಾಗೆ ಮೋದಿ ಭೇಟಿ

ವಾರ್ತಾಭಾರತಿವಾರ್ತಾಭಾರತಿ9 Jun 2018 11:04 PM IST
share
ಭಾರತದಿಂದ ಚೀನಾಗೆ ಎಲ್ಲಾ ವಿಧದ ಅಕ್ಕಿ ರಫ್ತು

ಬೀಜಿಂಗ್,ಜೂ.9: ಪ್ರವಾಹದ ಋತುವಿನಲ್ಲಿ ಗಡಿಯಾಚೆಯಿಂದ ಹರಿದುಬರುವ ಬ್ರಹ್ಮಪುತ್ರ ನದಿನೀರಿನ ಕುರಿತಾದ ಮಾಹಿತಿಯ ಹಂಚಿಕೆ ಒಪ್ಪಂದವನ್ನು ಭಾರತ ಹಾಗೂ ಚೀನಾ ಶನಿವಾರ ನವೀಕರಿಸಿದೆ. ಬಸುಮತಿಯ ಜೊತೆಗೆ ಇತರ ಎಲ್ಲಾ ವಿಧದ ಅಕ್ಕಿಯನ್ನು ಕೂಡಾ ರಫ್ತು ಮಾಡಲು ಭಾರತಕ್ಕೆ ಅನುಮತಿ ನೀಡುವ ಕುರಿತಾದ ಶಿಷ್ಟಾಚಾರದ ಒಪ್ಪಂದಕ್ಕೂ ಉಭಯ ದೇಶಗಳು ಸಹಿಹಾಕಿವೆ.

ಎರಡು ದಿನಗಳ 18ನೇ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಶನಿವಾರ ಚೀನಾದ ಕ್ವಿಂಗ್‌ಡಾವೊಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚೀನಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಉಭಯ ದೇಶಗಳು ಈ ಒಪ್ಪಂದಗಳಿಗೆ ಸಹಿ ಹಾಕಿದವು.

 ಪ್ರವಾಹದ ಋತುವಿನ ಅವಧಿಯಲ್ಲಿ ತಾನು ಭಾರತದ ಗಡಿಯಾಚೆಗೆ ಹರಿಯಬಿಡುವ ಬ್ರಹ್ಮಪುತ್ರ ನದಿ ನೀರಿನ ಪ್ರಮಾಣದ ದತ್ತಾಂಶಗಳ ಮಾಹಿತಿಯನ್ನು ಹಂಚಿಕೊಳ್ಳುವ ಕುರಿತ ಒಪ್ಪಂದವನ್ನು ಚೀನಾ ನವೀಕರಿಸಿದೆ. ಈ ತಿಳುವಳಿಕಾ ಒಪ್ಪಂದದ ಅನ್ವಯ ಬ್ರಹ್ಮಪುತ್ರ ನದಿಯು ಪ್ರವಾಹ ಪೀಡಿತವಾಗುವ ಮೇ 15ರಿಂದ ಅಕ್ಟೋಬರ್ 15ರವರೆಗಿನ ಅವಧಿಯಲ್ಲಿ ಚೀನಾದಿಂದ ಭಾರತಕ್ಕೆ ಹರಿಯಬಿಡಲಾಗುವ ನದಿನೀರಿನ ಪ್ರಮಾಣದ ದತ್ತಾಂಶಗಳನ್ನು ಚೀನಾವು ಭಾರತಕ್ಕೆ ಒದಗಿಸಲಿದೆ.

 ಇದರ ಜೊತೆಗೆ ಭಾರತವು ಬಸುಮತಿಯಲ್ಲದೆ ಇತರ ಎಲ್ಲಾ ವಿಧದ ಅಕ್ಕಿಯನ್ನು ಚೀನಾಗೆ ರಫ್ತು ಮಾಡಲು ಸಾಧ್ಯವಾಗುವುದಕ್ಕಾಗಿ, ಬೆಳೆ ಆರೋಗ್ಯ ಪ್ರಮಾಣಪತ್ರವನ್ನು ನೀಡಲು ಅವಕಾಶ ಮಾಡಿಕೊಡುವ ಶಿಷ್ಟಾಚಾರದ ಒಪ್ಪಂದಕ್ಕೆ ಚೀನಾದ ಕಸ್ಟಮ್ಸ್ ಇಲಾಖೆ ಹಾಗೂ ಭಾರತದ ಕೃಷಿ ಇಲಾಖೆಯ ಅಧಿಕಾರಿಗಳು ಸಹಿಹಾಕಿದ್ದಾರೆ.ಈವರೆಗೆ ಭಾರತವು ಚೀನಾಗೆ ಬಸುಮತಿ ಅಕ್ಕಿಯನ್ನು ಮಾತ್ರ ರಫ್ತು ಮಾಡಬಹುದಾಗಿತ್ತು.

 ತನ್ನ ಪಾವತಿ ಕೊರತೆಯನ್ನು ಕಡಿಮೆಗೊಳಿಸುವುದಕ್ಕೆ ನೆರವಾಗಲು, ಕೃಷಿ ಉತ್ಪನ್ನಗಳ ರಫ್ತಿಗೆ ಅನುಮತಿ ನೀಡುವಂತೆ ಭಾರತವು ಚೀನಾವನ್ನು ಬಹಳ ಸಮಯದಿಂದ ಆಗ್ರಹಿಸುತ್ತಾ ಬಂದಿದೆ. ಈ ನೂತನ ಒಪ್ಪಂದದಿಂದಾಗಿ ಭಾರತವು ಚೀನಾಗೆ ಇನ್ನು ಮುಂದೆ ಬಸುಮತಿ ಮಾತ್ರವಲ್ಲದೆ ಇತರ ತಳಿಯ ಅಕ್ಕಿಗಳನ್ನು ಕೂಡಾ ರಫ್ತು ಮಾಡಬಹುದಾಗಿದೆ.

  ಒಪ್ಪಂದಕ್ಕೆ ಮುನ್ನ ಮೋದಿ ಹಾಗೂ ಕ್ಸಿಜಿನ್ ಪಿಂಗ್ ಅವರು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವ ಕುರಿತಾಗಿ ಮಾತುಕತೆ ನಡೆಸಿದರೆಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

  ಕಳೆದ ಎರಡು ತಿಂಗಳುಗಳಲ್ಲಿ ಮೋದಿ ಹಾಗೂ ಕ್ಸಿಜಿನ್ ಪಿಂಗ್ ನಡುವೆ ಮಾತುಕತೆ ನಡೆದಿರುವುದು ಇದು ಎರಡನೆ ಸಲವಾಗಿದೆ. ಸುಮಾರು ಆರು ವಾರಗಳ ಹಿಂದೆ ನಡೆದ ವುಹಾನ್ ಶೃಂಗಸಭೆಯ ಸಂದರ್ಭದಲ್ಲಿಯೂ ಉಭಯ ನಾಯಕರು ಅನೌಪಚಾರಿಕ ಮಾತುಕತೆ ನಡೆಸಿದ್ದರು. ಡೊಕ್ಲಾಮ್ ಗಡಿ ಬಿಕ್ಕಟ್ಟು ಹಾಗೂ ಇತರ ಕೆಲವು ಜಟಿಲ ವಿವಾದಗಳಿಂದ ಭಾರತ-ಚೀನಾ ಬಾಂಧವ್ಯದಲ್ಲಿ ತೊಡಕು ಉಂಟಾಗಿದ್ದ ಹಿನ್ನೆಲೆಯಲ್ಲಿ ವುಹಾನ್‌ನಲ್ಲಿ ಮೋದಿ-ಕ್ಸಿ ನಡುವೆ ನಡೆದ ಮಾತುಕತೆ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು.

ಉಭಯದೇಶಗಳ ನಾಯಕರ ನಡುವೆ ಇಂದು ನಡೆದ ಮಾತುಕತೆ, ಸೌಹಾರ್ದಪೂರ್ಣವಾಗಿತ್ತು ಹಾಗೂ ಪ್ರಗತಿ ಸಾಧಿಸುವ ದೃಷ್ಟಿಕೋನವನ್ನು ಹೊಂದಿತ್ತು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಬಣ್ಣಿಸಿದ್ದಾರೆ.

 ಈ ಮಧ್ಯೆ ಭಾರತದಲ್ಲಿನ ಚೀನಾ ರಾಯಭಾರಿ ಲುವೊ ಝಾವೊಹುಯಿ ಅವರು ಎರಡೂ ದೇಶಗಳ ಮುಖಂಡರು ವುಹಾನ್ ಶೃಂಗಸಭೆಯ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ಮೂಡಿಬಂದಿರುವ ಸಹಮತದ ಅಭಿಪ್ರಾಯವನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದ್ದಾರೆ ಹಾಗೂ ಭವಿಷ್ಯದಲ್ಲಿ ಭಾರತ-ಚೀನಾದ ನಂಟನ್ನು ಬಲಪಡಿಸುವ ನಿಟ್ಟಿನಲ್ಲಿ ನೀಲನಕ್ಷೆಯೊಂದನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಹಾಗೂ ಕ್ಸಿಜಿನ್ ಪಿಂಗ್ ನಡುವೆ ನಡೆದ 14ನೇ ಮಾತುಕತೆ ಇದಾಗಿದೆಯೆಂದು ಲುವೊ ತಿಳಿಸಿದ್ದಾರೆ.

ಚೀನಾಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ವಾರ್ಷಿಕ ಶಾಂಘೈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಇಂದು ಮಧ್ಯಾಹ್ನ ಕ್ವಿಂಗಾಡೊಗೆ ಆಗಮಿಸಿದ್ದಾರೆ.

“ಈ ವರ್ಷದ ಶಾಂಘೈ ಶೃಂಗಸಭೆಯ ಅತಿಥೇಯರಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಇಂದು ಸಂಜೆ ಭೇಟೆಯಾದೆ. ನಾವು ದ್ವಿಪಕ್ಷೀಯ ಹಾಗೂ ಜಾಗತಿಕ ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದೆವು. ನಮ್ಮ ಮಾತುಕತೆಗಳು ಭಾರತ-ಚೀನಾ ಮೈತ್ರಿಗೆ ಇನ್ನಷ್ಟು ಚೈತನ್ಯವನ್ನು ತುಂಬಲಿದೆ.”

ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X