Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಈ ವಿಶಿಷ್ಟ ಇಫ್ತಾರ್ ಕೂಟದ ಬಗ್ಗೆ ನೀವು...

ಈ ವಿಶಿಷ್ಟ ಇಫ್ತಾರ್ ಕೂಟದ ಬಗ್ಗೆ ನೀವು ಓದಲೇಬೇಕು

ವಾರ್ತಾಭಾರತಿವಾರ್ತಾಭಾರತಿ10 Jun 2018 10:00 AM IST
share
ಈ ವಿಶಿಷ್ಟ ಇಫ್ತಾರ್ ಕೂಟದ ಬಗ್ಗೆ ನೀವು ಓದಲೇಬೇಕು

ಹೊಸದಿಲ್ಲಿ, ಜೂ.10: ಕಳೆದ ರವಿವಾರ ದಿಲ್ಲಿಯ ಮಹಿಳೆಯರ ಗುಂಪೊಂದು ತಮ್ಮ ಮನೆಯನ್ನು ಅಂತರ್ ಧರ್ಮೀಯ ಅತಿಥಿಗಳ ಇಫ್ತಾರ್‌ಗಾಗಿ ತೆರೆಯಿತು. ಅತಿಥಿಗಳಲ್ಲಿ ಬಹುತೇಕ ಮಂದಿ ಇದುವರೆಗೂ ಇಫ್ತಾರ್‌ನಲ್ಲಿ ಭಾಗವಹಿಸಿದವರಲ್ಲ. ಇವರೆಲ್ಲರನ್ನೂ ಮೊಗ್ರಾ ಹೂವು ಹಾಗೂ ಇತ್ತಾರ್‌ನೊಂದಿಗೆ ಸ್ವಾಗತಿಸಲಾಯಿತು. ಬಳಿಕ ಖರ್ಜೂರ, ನಿಂಬೆ- ಸೌತೆಕಾಯಿ ರೂಹ್ ಅಫ್ಜಾ ಮತ್ತು ಕೀಮಾ ಸಮೋಸಾದೊಂದಿಗೆ ಉಪಚರಿಸಲಾಯಿತು. ಆದರೆ ಇದು ಕೇವಲ ಇಫ್ತಾರ್ ಕೂಟ ಆಗಿರಲಿಲ್ಲ!

ರಮಝಾನ್ ಮಹತ್ವದ ಬಗ್ಗೆ ಕಿರು ಉಪನ್ಯಾಸ ನೀಡಿ, ಅತಿಥಿಗಳು ತಮ್ಮ ಜೀವನದಲ್ಲಿ 'ಇತರ' ಸಮುದಾಯದ ಬಗ್ಗೆ ಏನು ಕೇಳಿದ್ದಾರೆ ಎಂಬ ಟಿಪ್ಪಣಿ ಬರೆಯುವಂತೆ ಕೋರಲಾಯಿತು. ಈ ಬಗ್ಗೆ ಸ್ವಾರಸ್ಯಕರ ಸಂವಾದ ನಡೆಯಿತು. ತಲೆಮಾರುಗಳಿಂದ ಬೆಳೆದುಬಂದ ಪೂರ್ವಾಗ್ರಹ ರಾತ್ರೋರಾತ್ರಿ ಮಾಯವಾಗದು. ಆದರೆ ಈ ವಿನೂತನ ಪ್ರಯತ್ನ ಅಂತರವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಹೆಜ್ಜೆ ಎಂದು ಅತಿಥೇಯರಲ್ಲಿ ಒಬ್ಬರಾದ ಸಾಹಿತಿ ನಾಝಿಯಾ ಎರೂಮ್ ಹೇಳುತ್ತಾರೆ.

"ರೋಝಾ ಎಂದರೇನು ಎಂಬ ಪ್ರಶ್ನೆಗೆ ನಾವು ಉತ್ತರಗಳನ್ನು ಪಡೆದೆವು. ಇದು ಕೇವಲ ಹಗಲಿನ ಉಪವಾಸ ಮಾತ್ರವಲ್ಲ; ಇಚ್ಛಾಶಕ್ತಿ, ಸ್ವಯಂನಿಯಂತ್ರಣ ಹಾಗೂ ಇತರರ ಬಗೆಗಿನ ಕ್ರಿಯೆಗಳ ನಿಯಂತ್ರಣ ಕೂಡಾ ಹೌದು'' ಎಂದು ವಿದ್ಯಾರ್ಥಿನಿ ಹಾಗೂ ಅತಿಥಿ ತಾನ್ಯಾ ಕತ್ರುಗೋಡ್ ಉತ್ತರಿಸಿದ್ದಾರೆ

ಇಂಥ ವಿಶಿಷ್ಟ ಇಫ್ತಾರ್ ಕಳೆದ ವರ್ಷ ಆರಂಭವಾಗಿದೆ. ಆಗ ಎರೂಮ್, "ಮದರಿಂಗ್ ಎ ಮುಸ್ಲಿಂ" ಎಂಬ ಪುಸ್ತಕ ಬರೆಯುತ್ತಿದ್ದರು. ಕೇವಲ ಶೇಕಡ 33ರಷ್ಟು ಹಿಂದೂಗಳು ಮಾತ್ರ ಮುಸ್ಲಿಮರನ್ನು ಆತ್ಮೀಯ ಸ್ನೇಹಿತ ಎಂದು ಪರಿಗಣಿಸುತ್ತಾರೆ ಎಂಬ ಅಂಶ ಸಿಎಸ್‌ಡಿಎಸ್ ಅಧ್ಯಯನದಿಂದ ತಿಳಿದುಬಂದ ಬಳಿಕ ಈ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದರು. ಇದುವರೆಗೂ ಇಫ್ತಾರ್‌ನಲ್ಲಿ ಪಾಲ್ಗೊಳ್ಳದವರನ್ನು ಫೇಸ್‌ಬುಕ್ ಪೋಸ್ಟ್‌ ಮೂಲಕ ಆಹ್ವಾನಿಸಿದಾಗ, ಅದ್ಭುತ ಸ್ಪಂದನೆ ಸಿಕ್ಕಿತ್ತು. 12 ಮಂದಿ ಇದನ್ನು ಆಯೋಜಿಸಲು ನೆರವಾಗಿದ್ದರು. ಬಹುತೇಕ ಎಲ್ಲರೂ ಅಪರಿಚಿತರು.

"ಇದರ ಹಿಂದಿನ ಯೋಚನೆ ನಮ್ಮ ಮನೆಗಳನ್ನು ಅತಿಥಿಗಳಿಗಾಗಿ ತೆರೆಯುವುದು ಹಾಗೂ ಸಾಂಪ್ರದಾಯಿಕ ಖಾದ್ಯಗಳನ್ನು ವಿಶೇಷ ಪ್ರೀತಿಯಿಂದ ಬಡಿಸುವುದು" ಎಂದು ಎರೂಮ್ ಹೇಳುತ್ತಾರೆ. 90ಕ್ಕೂ ಹೆಚ್ಚು ಮಂದಿ ಮೊದಲ ವರ್ಷ ಭಾಗವಹಿಸಿದ್ದರು. ಇದರಿಂದ ಉತ್ತೇಜಿತರಾಗಿ ಮುಂಬೈ, ಗುವಾಹತಿ, ಭೋಪಾಲ್, ಪುಣೆ ಮತ್ತು ಹೈದ್ರಾಬಾದ್‌ಗಳಲ್ಲೂ ಇಂಥ ಕೂಟ ಈ ವರ್ಷ ಆಯೋಜಿಸಲಾಗಿದೆ.

ದೆಹಲಿಯ ನಿವಾಸಿ ಯಶ್ಪಾಲ್ ಸಕ್ಸೇನಾ ಇಫ್ತಾರ್ ಆಯೋಜಿಸಿದ್ದು, ದೊಡ್ಡ ಸುದ್ದಿಯಾಗಿತ್ತು. ಇವರ ಮಗ ಅಂಕಿತ್ ಕಳೆದ ವರ್ಷ ಮುಸ್ಲಿಂ ಪ್ರಿಯತಮೆಯಿಂದ ಹತ್ಯೆಯಾಗಿದ್ದಾನೆ ಎಂದು ಆಪಾದಿಸಲಾಗಿತ್ತು. ಸಕ್ಸೇನಾ ಹಾಗೂ ಎರೂಮ್ ಅವರಂಥ ಜನಸಾಮಾನ್ಯರು ಇಂಥ ಇಫ್ತಾರ್ ಏರ್ಪಡಿಸುತ್ತಿರುವುದು ಸಾಮರಸ್ಯದ ಪ್ರತೀಕವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X