ತಂದೆ ತಾಯಿಯರೇ ಜೀವನದ ಅತ್ಯುತ್ತಮ ಶಿಕ್ಷಕರು: ಡಾ.ವಿಜಯ ಬಲ್ಲಾಳ್
ಉಡುಪಿ ಜಿಲ್ಲಾ ಮಟ್ಟದ ವರ್ತಕರ ಸಮಾವೇ ಉದ್ಘಾಟನೆ

ಉಡುಪಿ, ಜೂ.10: ಮಕ್ಕಳು ಶಿಕ್ಷಣವನ್ನು ಶಾಲೆಗಳಲ್ಲಿ ಪಡೆದರೂ ಜೀವನ ವನ್ನು ಎದುರಿಸುವ ಶಿಕ್ಷಣವನ್ನು ತಂದೆ ತಾಯಿಯರು ನೀಡುತ್ತಾರೆ ಎಂದು ಅಂಬಲಪಾಡಿ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ.ವಿಜಯ ಬಲ್ಲಾಳ ಹೇಳಿದ್ದಾರೆ.
ಉಡುಪಿ ಜಿಲ್ಲಾ ವರ್ತಕರ ಸಂಘದ ವತಿಯಿಂದ ಅಂಬಲಪಾಡಿ ದೇವ ಸ್ಥಾನದ ಭವಾನಿ ಮಂಟಪದಲ್ಲಿ ರವಿವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ವರ್ತಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉತ್ತಮ ಸಂಸ್ಕಾರ, ವಿನಯ, ನಡೆ ನುಡಿ, ಹಿರಿಯರಿಗೆ ನೀಡುವ ಗೌರವ, ಕಷ್ಟಕ್ಕೆ ನೆರವಾಗುವ ಗುಣ, ಎದೆಗುಂದದೇ ಮುನ್ನುಗ್ಗಲು, ಸೋತಾಗ ಮತ್ತೆ ಎದುರಿಸಲು, ಬಿದ್ದಾಗ ಎದ್ದೇಳಲು ಸೇರಿದಂತೆ ನೂರಾರು ವಿದ್ಯೆಗಳನ್ನು ಪಾಲಕರ ಹೊರತಾಗಿ ಯಾವುದೇ ಶಾಲೆಗಳಲ್ಲಿ ಮಕ್ಕಳಲು ಪಡೆಯಲು ಸಾಧ್ಯವಿಲ್ಲ. ಆದು ರಿಂದ ಮಕ್ಕಳಿಗೆ ತಂದೆ ತಾಯಿಯರೇ ಜೀವನದ ಅತ್ಯುತ್ತಮ ಶಿಕ್ಷಕರು ಎಂದರು.
ಉತ್ತಮ ಮನಸ್ಥಿತಿಯೊಂದಿಗೆ ದೇಹದ ಆರೊಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ. ಇಂದಿನ ಜೀವನ ಶೈಲಿಯಲ್ಲಿ ಸೇವಿಸುವ ಆಹಾರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಮಕ್ಕಳು ಇಂದು ಜಂಕ್ ಫುಡ್ಗಳನ್ನು ಸೇವಿಸಿ ಅಗತ್ಯವಿರುವ ಪೋಷಕಾಂಶಗಳ ಕೊರತೆಯಿಂದ ಅನಾರೋಗ್ಯಕ್ಕೆ ಒಳಗಾಗು ತ್ತಿದ್ದಾರೆ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ನರೇಂದ್ರ ಪೈ, ಗೋಪಾಲ ಭಟ್, ಕಾರ್ಯದರ್ಶಿ ಡಿ.ಜಿ.ಬಂಗೇರ, ಲೆಕ್ಕ ಪರಿಶೋಧಕ ಪಿ.ವಿ.ಶೆಣೈ, ಸುಜಾತ, ಗಾಯಕ ಗಣೇಶ್ ಗಂಗೊಳ್ಳಿ, ತಾರಾನಾಥ, ರಾಘವೇಂದ್ರ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಐರೋಡಿ ಸಹನ ಶೀಲ ಪೈ ಸ್ವಾಗತಿಸಿದರು.