Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ11 Jun 2018 12:03 AM IST
share
ಓ ಮೆಣಸೇ...

ಪ್ರಧಾನಿ ಮೋದಿ ಇನ್ನಾದರೂ ‘ಅಚ್ಛೇ ದಿನ್’ ಜಾರಿಗೆ ಮುಂದಾಗಲಿ - ವಿಶ್ವೇಶ್ವರ ತೀರ್ಥ ಸ್ವಾಮೀಜಿ, ಪೇಜಾವರ ಮಠ

ಟಿವಿ, ಪತ್ರಿಕೆಗಳು ಅದನ್ನು ಜಾರಿಗೊಳಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿವೆ.

---------------------

ಎಲ್ಲ ಕಡೆ ದೊಡ್ಡ ಮೀನು ಸಣ್ಣ ಮೀನನ್ನು ನುಂಗಿದರೆ ಕರ್ನಾಟಕದಲ್ಲಿ ಸಣ್ಣ ಮೀನು ದೊಡ್ಡ ಮೀನನ್ನು ನುಂಗುತ್ತಿದೆ - ಪ್ರಹ್ಲಾದ್ ಜೋಶಿ, ಸಂಸದ

ಗಂಟಲಲ್ಲಿ ಸಿಕ್ಕಿಕೊಂಡರೆ ಕಷ್ಟ.

---------------------
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅನೈತಿಕ - ನಳಿನ್ ಕುಮಾರ್ ಕಟೀಲು, ಸಂಸದ

ಅನೈತಿಕ ಮೈತ್ರಿ ಬಿಜೆಪಿಯ ಹಕ್ಕಿರಬೇಕು.

---------------------
ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಮೋದಿಯವರ ಶೌಚಾಲಯಗಳು ಪೂರ್ತಿಯಾದ ಬಳಿಕ ವಿಸರ್ಜನೆಯಾದರೆ ಒಳ್ಳೆಯದಲ್ಲವೇ?
---------------------

2019ರ ಚುನಾವಣೆಯಲ್ಲಿ ಮಂದಿರ, ಹಿಂದುತ್ವದಂತಹ ಅಜೆಂಡಾಗಳು ಇರುವುದಿಲ್ಲ - ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ

ಮೋದಿಯ ಕೊಲೆ ಸಂಚು ಎನ್ನುವ ಏಕೈಕ ಅಜೆಂಡಾದೊಂದಿಗೆ ಚುನಾವಣೆ ಎದುರಿಸುವ ಉದ್ದೇಶ.

---------------------
ಒಂದು ರೀತಿಯಲ್ಲಿ ಇದೊಂದು (ಮೈತ್ರಿ ಸರಕಾರ) ಬಲವಂತದ ಮದುವೆ -ಡಾ. ಜಿ. ಪರಮೇಶ್ವರ್, ಉಪಮುಖ್ಯಮಂತ್ರಿ

ಕಾಂಗ್ರೆಸ್ ನೀಡಿದ ವರದಕ್ಷಿಣೆ ಮಾತ್ರ ಭಾರೀ ದುಬಾರಿ.

---------------------

ಹಸಿದ ಜೆಡಿಎಸ್ ಮತ್ತು ಹಳಸಿದ ಕಾಂಗ್ರೆಸ್ ಮೈತ್ರಿ ಸರಕಾರ ಶೀಘ್ರ ಪತನವಾಗಲಿದೆ -ಸಿ.ಟಿ. ರವಿ, ಶಾಸಕ

ಹಳಸಿದ ಅನ್ನಕ್ಕಾಗಿ ಹಸಿದು ಕೂತವರ ಮಾತು.

---------------------
ಯೋಗ ಜಾತ್ಯತೀತ ಮತ್ತು ಧರ್ಮಾತೀತ - ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ

ಆದರೆ ಸಮಸ್ಯೆಯಿರುವುದು ಅದನ್ನು ಜಾರಿಗೊಳಿಸುವವರ ಕುರಿತಂತೆ.

---------------------

ಜೆಡಿಎಸ್ ಪಕ್ಷದೊಳಗೆ ನಾನೀಗ ಅಸ್ಪಶ್ಯನಿದ್ದಂತೆ - ವೈ.ಎಸ್.ವಿ. ದತ್ತಾ, ಮಾಜಿ ಶಾಸಕ

ಅಸ್ಪಶ್ಯ ವಿರೋಧಿ ಕಾನೂನನ್ನು ಬಳಸಿ ಪೊಲೀಸರಿಗೆ ದೂರು ಕೊಡಿ.

---------------------
ನಾನು ಅದೃಷ್ಟದ ರಾಜಕಾರಣಿ - ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ
ಮತದಾರರ ದುರದೃಷ್ಟ.

---------------------

ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರಿಗೆ ಗಂಗಾದರ್ಶನ ಮಾಡಿಸುವೆ - ಕೆ.ಎಸ್. ಈಶ್ವರಪ್ಪ, ಶಾಸಕ

ಅದೇನೂ ಬೇಡ, ಸಾರ್ವಜನಿಕವಾಗಿ ಒಂದು ಲೋಟ ಗಂಗಾನದಿ ನೀರನ್ನು ಕುಡಿದರೆ ಸಾಕು, ಎನ್ನುವುದು ಯಡಿಯೂರಪ್ಪ ಸವಾಲು.

---------------------
ಕಾಂಗ್ರೆಸ್-ಜೆಡಿಎಸ್ ಸರಕಾರಕ್ಕೆ ನಿಪಾಹ್ ಸೋಂಕು -ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

ಬಿಜೆಪಿಯೆಂಬ ಬಾವಲಿಯಿಂದ ಈ ಸೋಂಕು ಬಂದಿದೆ ಎಂಬುದು ಸಿದ್ದರಾಮಯ್ಯ ಆರೋಪ.

---------------------

ವಿಧಾನಸೌಧದಲ್ಲಿರುವುದಕ್ಕಿಂತ ಹೆಚ್ಚು ರಾಜಕೀಯ ಮಠಾಧೀಶರಲ್ಲಿದೆ -ಬಸವರಾಜ ಹೊರಟ್ಟಿ, ವಿ.ಪ. ಸದಸ್ಯ

 ಹಣವೂ ಕೂಡ.

---------------------
ಕಲ್ಲು ಅಥವಾ ಬಂದೂಕು ಸಂಸ್ಕೃತಿಯಿಂದ ಹೊರಬರುವ ದಾರಿಯನ್ನು ನಾವು ಯುವಕರಿಗೆ ತೋರಿಸಬೇಕಿದೆ -ಮೆಹಬೂಬ ಮುಫ್ತಿ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ

ಮೊದಲು ಕಾಶ್ಮೀರದೊಳಗಿರುವ ಸೇನೆಯ ಕೈಯಲ್ಲಿರುವ ಬಂದೂಕನ್ನು ಕಿತ್ತುಕೊಳ್ಳಿ.

---------------------
ರಾಜಭವನಗಳು ಅಧಿಕಾರದ ಪರ್ಯಾಯ ಕೇಂದ್ರಗಳಲ್ಲ - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ನಾಗಪುರವೇ ನಿಜವಾದ ಕೇಂದ್ರ.

---------------------
ನನ್ನನ್ನು ನಾನೇ ಕ್ಷಮಿಸಲು ನನಗೆ ಸಂಪೂರ್ಣ ಅಧಿಕಾರವಿದೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಆದರೆ ಜಗತ್ತು ಕ್ಷಮಿಸುವುದು ಕಷ್ಟ.

---------------------
ದೇವೇಗೌಡರು ನನಗೆ ರಾಜಕೀಯ ಪುನರ್ಜನ್ಮ ನೀಡಿದ್ದಾರೆ -ಎಚ್. ವಿಶ್ವನಾಥ್, ಶಾಸಕ

ಅಹಿಂದ ಹೋರಾಟವನ್ನು ಮತ್ತೆ ಶುರು ಮಾಡಿ ಆ ಋಣವನ್ನು ತೀರಿಸುವ ಆಲೋಚನೆಯಿದೆಯೇ?
---------------------
ಉಡದಾರ, ಜನಿವಾರ, ಪುಟಗೋಸಿ, ತುಂಡು ಬಟ್ಟೆಗಳಿಗೆ ತಮ್ಮದೇ ಆದ ಮಹತ್ವವಿದೆ - ಮುಖ್ಯಮಂತ್ರಿ ಚಂದ್ರು, ವಿ.ಪ. ಮಾಜಿ ಸದಸ್ಯ

ಅವುಗಳೇ ಅಲ್ಲವೇ ದೇಶವನ್ನು ಆಳುತ್ತಿರುವುದು.

---------------------
ಸ್ಮಾರ್ಟ್‌ಆ್ಯಪ್‌ಗಳು ದೇಶದ ಪ್ರಗತಿಯ ಇಂಜಿನ್‌ಗಳು - ನರೇಂದ್ರ ಮೋದಿ, ಪ್ರಧಾನಿ

ಅಂದರೆ ಈ ಆ್ಯಪ್‌ಗಳನ್ನು ಬಳಸಿಕೊಂಡು ವಾಹನ ಓಡಿಸಲು ಕರೆ ನೀಡುತ್ತಿದ್ದೀರಾ?
---------------------
ಸರಕಾರಿ ಅಧಿಕಾರಿಗಳಿಗಿಂತ ವೇಶ್ಯೆಯರು ಉತ್ತಮ - ಸುರೇಂದ್ರಸಿಂಗ್, ಉ.ಪ್ರ.ಶಾಸಕ

ವೇಶ್ಯೆಯರು ಅವಮಾನಗೊಂಡು ಪ್ರತಿಭಟನೆಗಿಳಿಯುವ ಅಪಾಯವಿದೆ.

---------------------
ಅಸಹಿಷ್ಣುತೆಯಿಂದ ದೇಶದ ಅಸ್ತಿತ್ವವೇ ದುರ್ಬಲ - ಪ್ರಣಬ್ ಮುಖರ್ಜಿ, ಮಾಜಿ ರಾಷ್ಟ್ರಪತಿ

ಆರೆಸ್ಸೆಸ್ ಕುರಿತ ನಿಮ್ಮ ಸಹಿಷ್ಣುತೆಗೆ ಕಾರಣ ಗೊತ್ತಾಯಿತು.

---------------------
ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ರೈತರ ಕಿವಿಗೆ ಹೂ ಇಡುತ್ತಿದ್ದಾರೆ - ಶ್ರೀರಾಮುಲು, ಶಾಸಕ

ಕಮಲ ಹೂವಿರಬೇಕು, ಸರಿಯಾಗಿ ನೋಡಿ.

---------------------
ಆರೆಸ್ಸೆಸ್ ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ದಲಿತರಿಗೂ ಪ್ರವೇಶ ಇದೆಯೇ?
 

share
ಪಿ.ಎ.ರೈ
ಪಿ.ಎ.ರೈ
Next Story
X