Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸೆಲ್ಕೊದಿಂದ ಅಂ.ರಾ. ಮಟ್ಟದ ತರಬೇತಿ,...

ಸೆಲ್ಕೊದಿಂದ ಅಂ.ರಾ. ಮಟ್ಟದ ತರಬೇತಿ, ಸಂಶೋಧನಾ ಕೇಂದ್ರ

ಮಣಿಪಾಲದಲ್ಲಿ ಡಾ.ಹರೀಶ್ ಹಂದೆ ಘೋಷಣೆ

ವಾರ್ತಾಭಾರತಿವಾರ್ತಾಭಾರತಿ11 Jun 2018 8:18 PM IST
share
ಸೆಲ್ಕೊದಿಂದ ಅಂ.ರಾ. ಮಟ್ಟದ ತರಬೇತಿ, ಸಂಶೋಧನಾ ಕೇಂದ್ರ

ಮಣಿಪಾಲ, ಜೂ.11: ಬಡತನ ನಿವಾರಣೆಗೆ ಸುಸ್ಥಿರ ಪರಿಹಾರವನ್ನು ನೀಡುವ ಹಾಗೂ ಸೌರವಿದ್ಯುತ್‌ನ್ನು ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಬಳಕೆಗೆ ಉತ್ತೇಜನ ನೀಡುವ ವಿಶ್ವ ದರ್ಜೆಯ ತರಬೇತಿ ಹಾಗೂ ಸಂಶೋಧನಾ ಕೇಂದ್ರವೊಂದನ್ನು ಮಣಿಪಾಲದಲ್ಲಿ ಸ್ಥಾಪಿಸಲಾಗುತ್ತದೆ ಎಂದು ಸೌರವಿದ್ಯುತ್‌ನ ಮುಂಚೂಣಿ ಸಂಸ್ಥೆ ಸೆಲ್ಕೋದ ಅಧ್ಯಕ್ಷ ಹಾಗೂ ಸೆಲ್ಕೋ ಫೌಂಡೇಷನ್‌ನ ಸಿಇಒ, ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಡಾ.ಹರೀಶ್ ಹಂದೆ ಪ್ರಕಟಿಸಿದ್ದಾರೆ.

ಮಣಿಪಾಲದ ಶಿವಳ್ಳಿಯಲ್ಲಿರುವ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ)ನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಸೆಲ್ಕೋ ಫೌಂಡೇಷನ್ ಹಾಗೂ ಮಾಜಿ ಕೇಂದ್ರ ಸಚಿವ ಟಿ.ಎ.ಪೈ ಸ್ಥಾಪಿಸಿದ ಬಿವಿಟಿಗಳು ಜಂಟಿಯಾಗಿ ಈ ತರಬೇತಿ ಮತ್ತು ಸಂಶೋಧನಾ ಕೇಂದ್ರವನ್ನು ಮಣಿಪಾಲದಲ್ಲಿ ಪ್ರಾರಂಭಿಸಲಿವೆ ಎಂದರು.

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳನ್ನು ತರುವ ಸಲುವಾಗಿ ಶಿಕ್ಷಣ ಹಾಗೂ ತರಬೇತಿಗಳನ್ನು ನಡೆಸುತ್ತಾ ಬಂದಿರುವ ಬಿವಿಟಿಯ ಆಡಳಿತಾತ್ಮಕ ನಿಯಂತ್ರಣವನ್ನು ಸೆಲ್ಕೋ ಫೌಂಡೇಷನ್ ಪಡೆದಿದ್ದು, ಇನ್ನು ಮುಂದೆ ದೇಶದ ಮಾತ್ರವಲ್ಲದೇ ವಿಶ್ವದಾದ್ಯಂತ ಯುವ ಜನತೆಗೆ ಅಗತ್ಯವಿರುವ ಕೌಶಲ್ಯ ತರಬೇತಿಯನ್ನು ನೀಡಲಿದೆ ಎಂದು ಡಾ.ಹಂದೆ ತಿಳಿಸಿದರು.

ಈ ಯೋಜನೆ, ಮಾಹೆ ವಿವಿಯ ವೈದ್ಯಕೀಯ ಕಾಲೇಜು, ಮ್ಯಾನೇಜ್‌ಮೆಂಟ್ ಸಂಸ್ಥೆ ಹಾಗೂ ರಾಜ್ಯದ ಎಲ್ಲಾ ಕೃಷಿ ವಿವಿಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದು, ಗ್ರಾಮೀಣ ಪ್ರದೇಶಗಳ ಯುವಕರಲ್ಲಿರುವ ಹೊಸ ಯೋಚನೆ, ಯೋಜನೆಗೆ ಉತ್ತೇಜನವನ್ನು ನೀಡಲಾಗುತ್ತದೆ. ಇಲ್ಲಿ ತರಬೇತಿ ಪಡೆಯಲು ಯಾವುದೇ ಪದವಿಯ ಅಗತ್ಯವಿಲ್ಲ. ಆರೋಗ್ಯ, ಕೃಷಿ, ಸೌರವಿದ್ಯುತ್, ಗ್ರಾಮೀಣ ಬದುಕಿನ ಕುರಿತಂತೆ ಇರುವ ಹೊಸ ಆಲೋಚನೆಗೆ ಇಲ್ಲಿ ಮೂರ್ತರೂಪ ನೀಡಬಹುದು ಎಂದರು.

ಶಿವಳ್ಳಿಯಲ್ಲಿರುವ ಬಿವಿಟಿಯ 3.5ಎಕರೆ ಪ್ರದೇಶದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಸೆಲ್ಕೋ ಫೌಂಡೇಷನ್ ಎರಡು ಕೋಟಿ ರೂ. ಬಂಡವಾಳವನ್ನು ಈ ತರಬೇತಿ ಕೇಂದ್ರದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿನಿಯೋಗಿಸಲಿದೆ. ಇದರ ಪ್ರಯೋಜನ ವನ್ನು ಎಲ್ಲಾ ವಯಸ್ಸಿನ ವಿದ್ಯಾರ್ಥಿಗಳು ಯಾವುದೇ ನಿರ್ಬಂಧಗಳಿಲ್ಲದೇ ಬಳಸಿ ಕೊಳ್ಳಬಹುದು ಎಂದು ಡಾ.ಹರೀಶ್ ಹಂದೆ ನುಡಿದರು.

‘ಯಾವುದೇ ದೇಶದ ಬಡತನ ನಿರ್ಮೂಲನೆ ಸುಸ್ಥಿರ ಶಕ್ತಿಯಿಂದ ಮಾತ್ರ ಸಾಧ್ಯ. ನಮ್ಮ ದೇಶದ 60ಕೋಟಿಗೂ ಅಧಿಕ ಮಂದಿ ಬಳಿ ಇಂದು ವಿದ್ಯುತ್ ಇಲ್ಲ ಅಥವಾ ಇಂಧನದ ಲಭ್ಯತೆ ಇಲ್ಲ. ಇವರು ವಿದ್ಯುತ್ (ಇಂಧನ)ದ ಅಲಭ್ಯತೆಯಿಂದ ತಮ್ಮ ಜೀವನಾಧಾರ ವೃತ್ತಿಗಳನ್ನು ನಡೆಸಿಕೊಂಡು ಹೋಗಲು ವಿಫಲರಾಗುತಿದ್ದಾರೆ. ಕೃಷಿ ಚಟುವಟಿಕೆಗಳಲ್ಲದೇ, ಅನೇಕ ಜೀವನೋಪಾಯ ವೃತ್ತಿಗಳಾದ ಕಮ್ಮಾರಿಕೆ, ನೇಕಾರಿಕೆ, ಹೊಲಿಗೆಗಳಿಗೆ ಸುಸ್ಥಿರ ಇಂಧನವಿಲ್ಲದೇ ಇವರು ಬಡತನದಿಂದ ಹೊರಬರಲು ವಿಫಲರಾಗುತಿದ್ದಾರೆ.’ ಎಂದವರು ಹೇಳಿದರು.

ಇವುಗಳಿಗೆ ಪರಿಹಾರವಾಗಿ ಈ ಕ್ಷೇತ್ರಗಳಲಲಿ ಬಹಳಷ್ಟು ಹೊಸ ಸಂಶೋಧನೆಗಳನ್ನು ಮಾಡಬೇಕಾಗಿದೆ. ಈ ನಿಟ್ಟಿನ ತಮ್ಮ ಹೊಸ ಯೋಜನೆ ಮಹತ್ವದ ಪಾತ್ರವನ್ನು ವಹಿಸಲಿದೆ ಎಂದರು. ಇಂದು ಯುವ ಸಮುದಾಯಕ್ಕೆ ಮಾರ್ಗದರ್ಶನದ ಅಗತ್ಯವಿದೆ. ದೇಶದ ಮಾತ್ರವಲ್ಲದೇ, ವಿಶ್ವದ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಯುವಜನತೆಗೆ ವಿಶ್ವ ದರ್ಜೆಯ ತರಬೇತಿ ಕೇಂದ್ರಗಳ ಅಗತ್ಯವನ್ನು ಮನಗಂಡು ಈ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಸಾಲಿಗ್ರಾಮ ಮೂಲದ ಡಾ.ಹರೀಶ್ ಹಂದೆ ನುಡಿದರು.

ಇಲ್ಲಿ ದೇಶದ ಅದರಲ್ಲೂ ಮುಖ್ಯವಾಗಿ ತೀರಾ ಹಿಂದುಳಿದಿರುವ ಈಶಾನ್ಯ ಭಾರತದ ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಬರ್ಮಾ ಗಡಿ ಪ್ರದೇಶಗಳ ಯುವಜನತೆಗೆ ಸೌರವಿದ್ಯುತ್ ಬಳಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಇದರೊಂದಿಗೆ ಸೋಮಾಲಿಯಾ, ಸೂಡಾನ್, ಘಾನ ಮುಂತಾದ ತೀರಾ ಹಿಂದುಳಿದ ದೇಶದ ಯುವಕರಿಗೂ ತರಬೇತಿ ನೀಡಲಾಗುತ್ತದೆ. ವಿಶ್ವದ ಪ್ರಮುಖ ವಿವಿಗಳ ಸಂಶೋಧಕರು ಈ ಕೇಂದ್ರ ದೊಂದಿಗೆ ಸಂಪರ್ಕ ಹೊಂದಿರುತ್ತಾರೆ ಎಂದರು.

ಒಪ್ಪಂದಕ್ಕೆ ಸಹಿ: ಮಣಿಪಾಲದಲ್ಲಿ ವಿಶ್ವಮಟ್ಟದ ತರಬೇತಿ ಮತ್ತು ಸಂಶೋಧನ ಕೇಂದ್ರದ ಸ್ಥಾಪನೆಗೆ ಸಂಬಂಧಿಸಿದಂತೆ ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಸೆಲ್ಕೋ ಫೌಂಡೇಷನ್ ನಡುವೆ ಇಂದು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸೆಲ್ಕೋ ಫೌಂಡೇಷನ್ ಪರವಾಗಿ ಸಿಇಒ ಡಾ. ಹರೀಶ್ ಹಂದೆ ಹಾಗೂ ಬಿವಿಟಿ ಪರವಾಗಿ ಆಡಳಿತ ಟ್ರಸ್ಟಿ ಕೆ.ಎಂ.ಉಡುಪ ಹಾಗೂ ಟ್ರಸ್ಟಿ ಟಿ.ಅಶೋಕ ಪೈ ಸಹಿ ಹಾಕಿದರು. ಸೆಲ್ಕೋದ ಸಿಒಒ ಮೋಹನ ಹೆಗಡೆ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X