ದೇವಾಲಯದ ಹೊರಗೆ ನಡೆಸುವ ಪೂಜೆ ದೇವರಿಗೆ ಸಲ್ಲುವುದಿಲ್ಲ: ಕುಕ್ಕೆ ಸುಬ್ರಹ್ಮಣ್ಯ ಆಡಳಿತ

ಮಂಗಳೂರು, ಜೂ.13: ದೇವಸ್ಥಾನದ ಹೊರಗೆ ಸಲ್ಲಿಸಿದ ಪೂಜೆ ದೇವರಿಗೆ ಸಲ್ಲುವುದಿಲ್ಲ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯದ ದೇವಸ್ಥಾನದ ಆಡಳಿತ ಮಂಡಳಿ ಸಾರ್ವಜನಿಕ ಪ್ರಕಟನೆ ಹೊರಡಿಸಿದೆ.
ಪ್ರಸಿದ್ಧ ಯಾತ್ರಾ ಕ್ಷೇತ್ರದಲ್ಲಿ ಮಧ್ಯವರ್ತಿಗಳ ಹಾವಳಿ ಅಧಿಕವಾಗಿದ್ದು, ಭಕ್ತರನ್ನು ಖಾಸಗಿ ಪೂಜೆ ಮತ್ತು ವಿಶೇಷ ಧಾರ್ಮಿಕ ವಿಧಿವಿಧಾನಗಳ ಆಮಿಷ ತೋರಿಸಿ, ಲೂಟಿ ಮಾಡುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಈ ಪ್ರಕಟನೆ ಹೊರಡಿಸಿದೆ.
"ದೇವಸ್ಥಾನ ಆವರಣದಿಂದ ಹೊರಗೆ ಅಂದರೆ ನದಿ ತಟದಲ್ಲಿ, ಕಲ್ಯಾಣ ಮಂಟಪಗಳಲ್ಲಿ, ಇತರ ದೇವಾಲಯ ಅಥವಾ ಮಠಗಳಲ್ಲಿ ನಡೆಸುವ ಧಾರ್ಮಿಕ ವಿಧಿವಿಧಾನಗಳು ಹಾಗೂ ಪೂಜೆಗಳು ಖಾಸಗಿ ಸ್ವರೂಪದವುಗಳು. ಇಂಥ ಪೂಜೆ ಪುನಸ್ಕಾರಗಳು ಶ್ರೀ ಕುಕ್ಕೆ ಸುಬ್ರಹ್ಮಣ್ಯನಿಗೆ ತಲುಪುವುದಿಲ್ಲ ಎಂಬ ನಂಬಿಕೆ ಇದೆ" ಎಂದು ಪ್ರಕಟನೆಯಲ್ಲಿ ವಿವರಿಸಲಾಗಿದೆ.
Next Story