ಬಂಧಿತ ಪರಶುರಾಮ್ ಪರ ಬಿಜೆಪಿ ನಾಯಕಿಯ ಪೋಸ್ಟ್: ವಿವಾದ
ಗೌರಿ ಲಂಕೇಶ್ ಹತ್ಯೆ ಪ್ರಕರಣ
ವಿಜಯಪುರ, ಜೂ.14: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟ್ ತನಿಖಾಧಿಕಾರಿಗಳಿಂದ ಬಂಧಿತನಾಗಿರುವ ಸಂಘಪರಿವಾರ ಕಾರ್ಯಕರ್ತ ಪರಶುರಾಮ್ ವಾಗ್ಮೋರೆ ಪರ ಬಿಜೆಪಿ ನಾಯಕಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ ಎನ್ನಲಾದ ಪೋಸ್ಟ್ವೊಂದು ವೈರಲ್ ಆಗಿ ವಿವಾದ ಹುಟ್ಟುಹಾಕಿದೆ.
ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಂಚಾಲೇಶ್ವರಿ ತೊನಶ್ಯಾಳ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪರಶುರಾಮ್ ಪರವಹಿಸಿ ವಿವಾದಿತ ಪೋಸ್ಟ್ ಅಪ್ಡೇಟ್ ಮಾಡಿದ್ದಾರೆ.
‘ಈ ದೇಶದ ತಳಹದಿ ಹಿಂದುತ್ವ, ಹಿಂದೂ ವಿರೋಧಿ ಚಟುವಟಿಕೆ ಮಾಡಿದರೆ, ಮನೆ ಮನೆಗೂ ಪರಶುರಾಮ್ ವಾಗ್ಮೋರೆ ಹುಟ್ಟುತ್ತಾರೆ’ ಎಂದು ಮಂಚಾಲೇಶ್ವರಿ ತೊನಶ್ಯಾಳ ಬರೆದು ಹಾಕಿದ್ದಾರೆನ್ನಲಾದ ಪೋಸ್ಟ್ ವೈರಲ್ ಆಗಿ ವಿವಾದ ಹುಟ್ಟುಹಾಕಿದೆ.
Next Story