Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಯುಎಇ: ನೂತನ ಉದ್ಯೋಗ, ವೀಸಾ ನೀತಿ ಘೋಷಣೆ

ಯುಎಇ: ನೂತನ ಉದ್ಯೋಗ, ವೀಸಾ ನೀತಿ ಘೋಷಣೆ

ಪ್ರಮುಖಾಂಶಗಳು

ವಾರ್ತಾಭಾರತಿವಾರ್ತಾಭಾರತಿ14 Jun 2018 11:27 PM IST
share
ಯುಎಇ: ನೂತನ ಉದ್ಯೋಗ, ವೀಸಾ ನೀತಿ ಘೋಷಣೆ

ದುಬೈ, ಜೂ. 14: ಯುಎಇ ಉಪಾಧ್ಯಕ್ಷ, ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ನೇತೃತ್ವದ ಸಚಿವ ಸಂಪುಟವು, ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ವಿದೇಶಿಯರ ವಿಮೆ ಮತ್ತು ವೀಸಾ ನಿಯಮಗಳಿಗೆ ಸಂಬಂಧಿಸಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.

 ಕೆಲಸಗಾರರ ಖಾತರಿಗಳಿಗೆ ಸಂಬಂಧಿಸಿದ ನೂತನ ವಿಮಾ ಯೋಜನೆಯೊಂದನ್ನು ಜಾರಿಗೊಳಿಸಲಾಗಿದೆ. ನೂತನ ಯೋಜನೆಯ ಪ್ರಕಾರ, ಹಿಂದೆ ಪ್ರತಿಯೊಬ್ಬ ಕೆಲಸಗಾರನಿಗಾಗಿ ಕಡ್ಡಾಯವಾಗಿ ಠೇವಣಿ ಇರಿಸಬೇಕಾಗಿದ್ದ 3,000 ದಿರ್ಹಮ್ (ಸುಮಾರು 55,000 ರೂಪಾಯಿ) ಬದಲಿಗೆ ಪ್ರತಿ ವರ್ಷ 60 ದಿರ್ಹಮ್ (1105 ರೂಪಾಯಿ) ವೆಚ್ಚ ತಗಲುವ ವಿಮೆಯನ್ನು ತರಲಾಗಿದೆ.

 ನೂತನ ವಿಮಾ ಯೋಜನೆಯು ಖಾಸಗಿ ಕ್ಷೇತ್ರದ ಉದ್ಯೋಗಿಗಳ ಹಕ್ಕುಗಳನ್ನು ರಕ್ಷಿಸುತ್ತದೆ ಹಾಗೂ ಉದ್ಯೋಗದಾತರ ಮೇಲಿನ ಹೊರೆಯನ್ನು ಕಡಿಮೆಗೊಳಿಸುತ್ತದೆ. ಇದರ ಪ್ರಕಾರ, ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಖಾತರಿಯಾಗಿ ಈವರೆಗೆ ಇರಿಸಿರುವ ಸುಮಾರು 14 ಬಿಲಿಯ ದಿರ್ಹಮ್ (ಸುಮಾರು 25,800 ಕೋಟಿ ರೂಪಾಯಿ) ಠೇವಣಿಯನ್ನು ಹಿಂದಕ್ಕೆ ಪಡೆಯಬಹುದಾಗಿದೆ ಹಾಗೂ ಅದನ್ನು ತಮ್ಮ ವ್ಯಾಪಾರದಲ್ಲಿ ಹೊಸದಾಗಿ ಹೂಡಬಹುದಾಗಿದೆ.

ನೂತನ ವ್ಯವಸ್ಥೆಯು ಯುಎಇಯಲ್ಲಿ ವ್ಯಾಪಾರ ಮಾಡುವುದನ್ನು ಸುಲಭಗೊಳಿಸುತ್ತದೆ ಹಾಗೂ ಇದರ ಪರಿಣಾಮ ಮಾರುಕಟ್ಟೆ ಸಮೃದ್ಧಿ ಮತ್ತು ಬೆಳವಣಿಗೆಯ ಮೇಲೆ ಆಗುತ್ತದೆ.

ಕೆಲಸಗಾರರಿಗೆ ಹೆಚ್ಚಿನ ಪ್ರಮಾಣದ ಹಕ್ಕುಗಳು ಮತ್ತು ಸೌಲಭ್ಯಗಳು ಸಿಗುವಂತೆ ನೂತನ ವ್ಯವಸ್ಥೆಯು ಖಾತರಿಪಡಿಸುತ್ತದೆ.

ವಾಸ್ತವ್ಯ ವೀಸಾ 2 ವರ್ಷ ವಿಸ್ತರಣೆ

ಪ್ರವಾಸಿಗರು, ನಿವಾಸಿಗಳು, ಕಟುಂಬಗಳು ಮತ್ತು ತಮ್ಮ ವೀಸಾ ಅವಧಿ ಮೀರಿ ವಾಸಿಸುತ್ತಿರುವ ಜನರಿಗಾಗಿ ಯುಎಇ ಸಚಿವ ಸಂಪುಟವು ನೂತನ ವೀಸಾ ನಿಯಮಗಳನ್ನು ಜಾರಿಗೆ ತಂದಿದೆ.

ಇದರ ಪ್ರಕಾರ, ಹೆತ್ತವರನ್ನು ಆಶ್ರಯಿಸಿರುವ ಮಕ್ಕಳು ತಮ್ಮ ಯನಿವರ್ಸಿಟಿ ಕಲಿಕೆ ಮುಗಿಸಿದ ಬಳಿಕ ಅವರ ವಾಸ್ತವ್ಯ ವೀಸಾವನ್ನು ಎರಡು ವರ್ಷಗಳಿಗೆ ವಿಸ್ತರಿಸಲು ಪ್ರಸ್ತಾಪಕ್ಕೆ ಸಚಿವ ಸಂಪುಟ ಅಂಗೀಕಾರ ನೀಡಿದೆ.

ನೌಕರರಿಗೆ ವಿಮಾ ಸೌಲಭ್ಯ

ನೂತನ ವ್ಯವಸ್ಥೆಯಲ್ಲಿ ಜಾರಿಗೆ ಬಂದಿರುವ ವಿಮಾ ಪಾಲಿಸಿಯ ಮೌಲ್ಯ ಪ್ರತಿ ನೌಕರರಿಗೆ ಪ್ರತಿ ವರ್ಷಕ್ಕೆ 60 ದಿರ್ಹಮ್ (1105 ರೂಪಾಯಿ).

ಸೇವಾವಧಿ ಕೊನೆಯಾಗುವಾಗ ಸಿಗುವ ಸೌಲಭ್ಯಗಳು, ರಜೆ ಭತ್ತೆ, ಓವರ್‌ಟೈಮ್ ಭತ್ತೆ, ಪಾವತಿಯಾಗದ ವೇತನ, ನೌಕರರ ವಾಪಸಾತಿ ಟಿಕೆಟ್ ಮತ್ತು ಕೆಲಸ ಮಾಡುವಾಗ ಸಂಭವಿಸುವ ಗಾಯಗಳ ಚಿಕಿತ್ಸೆಯ ವೆಚ್ಚ ಮುಂತಾದುವುಗಳು ಈ ವಿಮೆಯ ವ್ಯಾಪ್ತಿಗೆ ಬರುತ್ತವೆ.

ಗಾಯಗಳಿಗೆ ಚಿಕಿತ್ಸೆ ವೆಚ್ಚವಾಗಿ ಪ್ರತಿ ನೌಕರರಿಗೆ 20,000 ದಿರ್ಹಮ್ (ಸುಮಾರು 3.68 ಲಕ್ಷ ರೂಪಾಯಿ) ನಿಗದಿಪಡಿಸಲಾಗಿದೆ.

ಇತರ ಮುಖ್ಯಾಂಶಗಳು

►ಟ್ರಾನ್ಸಿಟ್ ಪ್ರಯಾಣಿಕರಿಗೆ (ಹೋಗ ಬೇಕಾದ ಸ್ಥಳ ತಲುಪುವ ಮುನ್ನ ವಿಮಾನ ಬದಲಿಸುವುದಕ್ಕಾಗಿ ಬೇರೊಂದು ದೇಶದ ವಿಮಾನ ನಿಲ್ದಾಣದಲ್ಲಿ ಇಳಿಯುವವರು) ಮೊದಲ 48 ಗಂಟೆಗಳ ಕಾಲ ಸಂಪೂರ್ಣ ಪ್ರವೇಶ ಶುಲ್ಕದಿಂದ ವಿನಾಯಿತಿ. ಟ್ರಾನ್ಸಿಟ್ ವೀಸಾವನ್ನು 50 ದಿರ್ಹಮ್ (920 ರೂಪಾಯಿ) ಪಾವತಿಸಿ 96 ಗಂಟೆಗಳವರೆಗೆ ವಿಸ್ತರಿಸಬಹುದಾಗಿದೆ.

►ವೀಸಾ ಅವಧಿ ಮೀರಿ ಯುಎಇಯಲ್ಲಿ ವಾಸಿಸುತ್ತಿರುವವರಿಗೆ ಪಾಸ್‌ಪೋರ್ಟ್‌ನಲ್ಲಿ ‘ನೋ ಎಂಟ್ರಿ’ ಮುದ್ರೆಯಿಲ್ಲದೆ ಸ್ವಯಂಪ್ರೇರಿತವಾಗಿ ದೇಶ ತೊರೆಯಲು ಒಂದು ಅವಕಾಶ ನೀಡಲಾಗಿದೆ.

►ಯುಎಇಯಲ್ಲಿ ಕೆಲಸ ಹುಡುಕುತ್ತಿರುವವರ ವೀಸಾ ಅವಧಿ ಮುಗಿದಿದ್ದರೆ ಹಾಗೂ ದೇಶದಲ್ಲಿ ಕೆಲಸ ಮಾಡಲು ಬಯಸಿದರೆ, ಅಂಥವರಿಗಾಗಿ ಹೊಸದಾಗಿ 6 ತಿಂಗಳ ವೀಸಾವನ್ನು ಪರಿಚಯಿಸಲಾಗುವುದು.

►ಯುಇಎಗೆ ಅಕ್ರಮ ಪ್ರವೇಶ ಮಾಡಿರುವ ವ್ಯಕ್ತಿಗಳು, ಪಾಸ್‌ಪೋರ್ಟ್‌ನಲ್ಲಿ ‘ನೋ ಎಂಟ್ರಿ’ ಮುದ್ರೆಯಿಲ್ಲದೆ ಎರಡು ವರ್ಷಗಳ ಕಾಲ ಸ್ವಯಂಪ್ರೇರಿತವಾಗಿ ದೇಶ ತೊರೆಯಲು ಒಂದು ಅವಕಾಶ ನೀಡಲಾಗುವುದು. ಇದಕ್ಕಾಗಿ ಅವರು ಚಾಲ್ತಿಯಲ್ಲಿರುವ ವಾಪಸಾತಿ ಟಿಕೆಟನ್ನು ತೋರಿಸಬೇಕಾಗುತ್ತದೆ.

►ತಮ್ಮ ವೀಸಾಗಳನ್ನು ನವೀಕರಿಸಬಯಸುವವರು ಇನ್ನು ತಮ್ಮ ಸ್ವದೇಶಕ್ಕೆ ವಾಪಸಾಗಿ ಮತ್ತೆ ಯುಎಇಗೆ ಮರು ಪ್ರವೇಶ ಮಾಡಬೇಕಾಗಿಲ್ಲ. ಅವರು ನಿರ್ದಿಷ್ಟ ಶುಲ್ಕ ಪಾವತಿಸಿ ಯುಎಇಯಲ್ಲೇ ನವೀಕರಿಸಬಹುದಾಗಿದೆ. ಈ ಮೂಲಕ ಹಣ ಮತ್ತು ಸಮಯವನ್ನು ಅವರು ಉಳಿಸಬಹುದಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X