Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 10 ವರ್ಷ ಪ್ರಾಯ ತುಂಬುವವರೆಗೂ ಹೊಸ ಬಟ್ಟೆ...

10 ವರ್ಷ ಪ್ರಾಯ ತುಂಬುವವರೆಗೂ ಹೊಸ ಬಟ್ಟೆ ಧರಿಸಿದ ನೆನಪಿಲ್ಲ

ಈದುಲ್ ಫಿತ್ರ್ ಸವಿ ನೆನಪುಗಳು!

ವಾರ್ತಾಭಾರತಿವಾರ್ತಾಭಾರತಿ15 Jun 2018 6:29 PM IST
share
10 ವರ್ಷ ಪ್ರಾಯ ತುಂಬುವವರೆಗೂ ಹೊಸ ಬಟ್ಟೆ ಧರಿಸಿದ ನೆನಪಿಲ್ಲ

ನಾವು ನಮ್ಮ ತಂದೆ-ತಾಯಿಗೆ ನಾಲ್ಕು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳ ಸಹಿತ ಒಟ್ಟು 6 ಮಂದಿ ಮಕ್ಕಳು. ಕಿತ್ತು ತಿನ್ನುವ ಬಡತನ ನಮ್ಮದು. ಅಪ್ಪ ದೋಣಿ ಹುಟ್ಟು ಹಾಕಲು ಹೋಗುತ್ತಿದ್ದರೆ, ಉಮ್ಮ ಗದ್ದೆಯ ಕೆಲಸಕ್ಕೆ ಹೋಗುತ್ತಿದ್ದರು. ಮನೆ ಅಂತ ಹೇಳಿಕೊಳ್ಳುವ ವಿಷೇಶ ಏನೂ ಇರಲಿಲ್ಲ. ನಾಲ್ಕು ಕಂಬ ಊರಿ ಸುತ್ತ ಹೆಣೆದ ಮಡಲು ಕಟ್ಟಿದ ಸೋಗೆ ಮಾಡಿನ ಮನೆ ಅದು. ರಮಝಾನ್‌ನ 1 ತಿಂಗಳು ಮಾತ್ರ ಅಲ್ಲ, ವರ್ಷವಿಡೀ ನಮಗೆ ಉಪವಾಸ ಎಂದರೆ ತಪ್ಪಾಗಲಾರದು. ಅನ್ನಕ್ಕಿಂತ ಹಲಸು ತಿಂದು ಜೀವಿಸಿದ್ದೇ ಹೆಚ್ಚು. ಆದರೆ, ರಮಝಾನ್ ಸಂದರ್ಭದಲ್ಲಿ ಅನ್ನ ಬೇಯಿಸಿ ತಿನ್ನುತ್ತಿದ್ದೆವು. ನನಗೆ 10 ವರ್ಷ ಪ್ರಾಯ ಆಗುವವರೆಗೆ ಪೆರ್ನಾಳ್‌ಗೆ ಹೊಸ ಬಟ್ಟೆ ಧರಿಸಿದ ನೆನಪಿಲ್ಲ. ತಂದೆ-ತಾಯಿಯ ದುಡಿಮೆಯಿಂದ ಮಕ್ಕಳಿಗೆ ಏಕಕಾಲಕ್ಕೆ ಬಟ್ಟೆಬರೆ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಅಕ್ಕಪಕ್ಕದವರು ಹೊಸ ಅಂಗಿ-ಮುಂಡು ಧರಿಸಿ ಮಸೀದಿಗೆ ಹೋಗುವಾಗ ನಾವು ಆಸೆ ಕಣ್ಣಿನಿಂದ ನೋಡುತ್ತಿದ್ದೆವು.  ನಾನೂ ಹೀಗೆ ಹೊಸ ಬಟ್ಟೆ ಯಾವಾಗ ಧರಿಸುವುದು ಎಂದು ಮನಸ್ಸಲ್ಲೇ ಕೇಳಿ ದು:ಖಿಸುತ್ತಿದ್ದೆ.

ನಾನು ದುಡಿಯಲು ಆರಂಭಿಸಿದ ಬಳಿಕ ಹೊಸ ಬಟ್ಟೆ ಧರಿಸುವ ಭಾಗ್ಯ ಸಿಕ್ಕಿತು. ಅದೂ ಕಡಿಮೆ ಬೆಲೆಗೆ ಖರೀಸಿದ ಬಟ್ಟೆ. ಆವಾಗ ಅರ್ಧತೋಳಿನ ಅಂಗಿ ಮತ್ತು ಮುಂಡು (ಲುಂಗಿ). ಅದರ ಹೊರತು ಬೇರೆ ಹೊಸತೇನೂ ಇರಲಿಲ್ಲ. ನಾನು ಸಣ್ಣವನಿರುವಾಗ ಹರೇಕಳ ಗ್ರಾಮದ ಪಂಜಿಮಾಡಿಯಲ್ಲಿದ್ದೆ. 1974ರ ನೆರೆ ಹಾವಳಿಯ ಬಳಿಕ ನ್ಯೂಪಡ್ಪುಗೆ ನಮ್ಮ ಮನೆ ಸ್ಥಳಾಂತರಗೊಂಡಿತು. ಆವಾಗ ಗ್ರಾಮದಲ್ಲಿ ಮೂರೋ-ನಾಲ್ಕೋ ಮಂದಿ ಟೈಲರ್‌ಗಳಿದ್ದರು. ಹೊಸ ಬಟ್ಟೆ ಖರೀದಿಸಿದರೂ ರಮಝಾನ್‌ನಲ್ಲಿ ಅದನ್ನು ತಕ್ಷಣ ಹೊಲಿದು ಕೊಡುತ್ತಿರಲಿಲ್ಲ. ಹಾಗಾಗಿ ಒಂದು ವಾರ ಟೈಲರ್‌ಗಳ ಬಳಿ ಹೋಗಿ ಬರುತ್ತಿದ್ದೆ. ಕೆಲವೊಮ್ಮೆ ‘ಪೆರ್ನಾಳ್’ನ ಮುಂಚಿನ ದಿನದ ರಾತ್ರಿ ಹೊಸ ಅಂಗಿ ಸಿಕ್ಕರೆ, ಇನ್ನು ಕೆಲವೊಮ್ಮೆ ‘ಪೆರ್ನಾಳ್’ನ ದಿನ ಮುಂಜಾನೆ ಅಂಗಿ ಸಿಗುತ್ತಿತ್ತು. ಆ ಬಟ್ಟೆ ಧರಿಸಿ ಮಸೀದಿಗೆ ಹೋಗುವ ಖುಷಿಯೇ ಬೇರೆ. ಇನ್ನು ‘ಪೆರ್ನಾಳ್’ನಂದು ಆವಾಗ ಈಗಿನಂತೆ ಬಿರಿಯಾನಿ, ‘ನೈಚೋರು’ ಇರಲಿಲ್ಲ. ಬಸಳೆಯ ಸಾರು ಮತ್ತು ದೋಸೆ. ಅದೇ ನಮ್ಮ ‘ಪೆರ್ನಾಳ್’ನ ವಿಶೇಷ ಆಹಾರ. ಅಂದಹಾಗೆ, ‘ಪೆರ್ನಾಳ್’ನಂದೂ ನಮಗೆ ಹೊಟ್ಟೆ ತುಂಬಾ ತಿಂದು ಗೊತ್ತೇ ಇರಲಿಲ್ಲ. ಹಾಗಾಗಿಯೋ ಏನೋ, ನನಗೆ ಈಗಲೂ ಹಸಿವು ಎಂಬುದು ಇಲ್ಲ.

ಹರೇಕಳ ಹಾಜಬ್ಬ, (ಅಕ್ಷರ ಸಂತ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X