Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹೊಸ ಬಟ್ಟೆ ಧರಿಸದೆ ಪೆರ್ನಾಳ್ ಆಚರಿಸಿದ ಆ...

ಹೊಸ ಬಟ್ಟೆ ಧರಿಸದೆ ಪೆರ್ನಾಳ್ ಆಚರಿಸಿದ ಆ ಕಹಿ ನೆನಪು

ಈದುಲ್ ಫಿತ್ರ್ ಸವಿ ನೆನಪುಗಳು!

ವಾರ್ತಾಭಾರತಿವಾರ್ತಾಭಾರತಿ15 Jun 2018 6:56 PM IST
share
ಹೊಸ ಬಟ್ಟೆ ಧರಿಸದೆ ಪೆರ್ನಾಳ್ ಆಚರಿಸಿದ ಆ ಕಹಿ ನೆನಪು

ಸುಮಾರು 15 ವರ್ಷದ ಹಿಂದಿನ ನೆನಪು. ನಾನು ಪೆರ್ನಾಳ್‌ಗೆ ಅಂಗಿ ಹೊಲಿಯಲು ಕೆಲವು ದಿನ ಮುಂಚೆಯೇ ದರ್ಜಿಯಲ್ಲಿ ಕೊಟ್ಟಿದ್ದೆ.ಹಾಗೇ ಪೆರ್ನಾಳ್

ಮುಂಚಿನ ದಿನ ಸಂಜೆ ಹೊಲಿದ ಅಂಗಿಯನ್ನು ಮನೆಗೆ ತೆಗೆದು ಕೊಂಡು ಬಂದೆ. ರಾತ್ರಿ ಊಟ ಮುಗಿಸಿ ನಿದ್ದೆ ಮಾಡುವ ಮುನ್ನ ‘ಒಮ್ಮೆ ನಿಮ್ಮ ಅಂಗಿ ಧರಿಸಿ ಸರಿಯಾಗಿದೆಯಾ ನೋಡಿ’ ಎಂದು ಪತ್ನಿ ಸೂಚಿಸಿದಳು. ಆದರೆ, ಅವಳ ಮಾತನ್ನು ಕಿವಿಗೆ ಹಾಕಿಕೊಳ್ಳದ ನಾನು ಬೆಳಗ್ಗೆ ನೋಡಿದರಾಯಿತು ಎಂದು ಉದಾಸೀನದಿಂದ ನಿದ್ದೆಗೆ ಜಾರಿದೆ.

ಮರುದಿನ ಬೆಳಗ್ಗೆ ಸ್ನಾನ ಮಾಡಿ ಇನ್ನೇನು ಪೆರ್ನಾಳ್ ನಮಾಝ್‌ಗೆ ಮಸೀದಿಗೆ ತಲುಪಲು ಅರ್ಧ ಗಂಟೆ ಇರುವಾಗ ಅಂಗಿ ಧರಿಸಲು ಮುಂದಾದಾಗ ನನಗೆ ಆಶ್ಚರ್ಯ. ಅಂಗಿ ಮತ್ತು ಪ್ಯಾಂಟ್ ಎರಡೂ ಟೈಟ್ ಆಗಿತ್ತು. ಅಂದರೆ, ಅದು ನನ್ನದಾಗಿರಲಿಲ್ಲ. ವಿಷಯ ತಿಳಿದ ಪತ್ನಿ ‘ನಿನ್ನೆ ರಾತ್ರಿಯೇ ಧರಿಸಿ ನೋಡಲು ಹೇಳಿದ್ದೆ. ಕೇಳಿದ್ರಾ... ರಾತ್ರಿಯೇ ನೋಡಿದ್ದರೆ ಇದು ಕೊಟ್ಟು ನಿಮ್ಮ ಅಂಗಿ-ಪ್ಯಾಂಟ್ ತರಬಹುದಿತ್ತು’ ಎಂದು ತರಾಟೆಗೆ ತೆಗೆದುಕೊಂಡಳು.

ನಾನು ಏನೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಉಪಾಯವಿಲ್ಲದೆ ಹೊಸ ಅಂಗಿಯ ಬದಲು ಒಂದು ವರ್ಷಕ್ಕೆ ಮೊದಲು ತೆಗೆದ ಕುರ್ತಾ ಧರಿಸಿ ಮಸೀದಿಗೆ ತೆರಳಿದೆ. ಮಸೀದಿಯಿಂದ ಬಂದವನೇ ನೇರ ಟೈಲರ್ ಅಂಗಡಿಗೆ ತೆರಳಿದೆ. ಆದರೆ ಆ ಟೈಲರ್ ಅಂಗಡಿ ಅಂದು ಬಂದ್ ಆಗಿತ್ತು. ನಿರಾಶೆಯಿಂದ ಹಿಂದಿರುಗಿದೆ.

ಪೆರ್ನಾಳ್‌ನ ಮರುದಿನ ಆ ಬಟ್ಟೆ ಅಂಗಿ-ಪ್ಯಾಂಟ್‌ನ್ನು ತೆಗೆದುಕೊಂಡು ಟೈಲರ್ ಬಳಿಗೆ ಹೋದೆ. ‘ನಿಮ್ಮ ಡ್ರೆಸ್ ಕೊಂಡು ಹೋದವರು ನಿನ್ನೆ ರಾತ್ರಿಯೇ ವಾಪಸ್ ತಂದಿದ್ದರು. ನೀವು ಮೊನ್ನೆ ರಾತ್ರಿಯೇ ಬಂದಿದ್ದರೆ ಕೊಂಡು ಹೋಗಬಹುದಿತ್ತು’ಎಂದು ಕ್ಷಮೆಯಾಚನೆಯ ಧಾಟಿಯಲ್ಲಿ ಮಾತನಾಡಿದರು.

ನಾನು ನನ್ನದೇ ಆಲಸ್ಯದಿಂದ ಆದ ತಪ್ಪಿಗೆ ವೌನ ವಹಿಸಿ ಆ ಬಟ್ಟೆಯನ್ನು ದೊಡ್ಡ ಪೆರ್ನಾಳ್ (ಬಕ್ರೀದ್)ಗೆ ಹಾಕಿ ಸಂಭ್ರಮ ಪಟ್ಟೆ.

ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು, ಮಂಗಳೂರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X