Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಫಿತ್ರ್ ಝಕಾತ್‌ನ ಅಕ್ಕಿ ಅಳೆದು ಕೊಡಲು...

ಫಿತ್ರ್ ಝಕಾತ್‌ನ ಅಕ್ಕಿ ಅಳೆದು ಕೊಡಲು ಕಾದಾಟ!

ಈದುಲ್ ಫಿತ್ರ್ ಸವಿ ನೆನಪುಗಳು!

ವಾರ್ತಾಭಾರತಿವಾರ್ತಾಭಾರತಿ15 Jun 2018 6:58 PM IST
share
ಫಿತ್ರ್ ಝಕಾತ್‌ನ ಅಕ್ಕಿ ಅಳೆದು ಕೊಡಲು ಕಾದಾಟ!

ನನ್ನ ಬಾಲ್ಯದ ಪೆರ್ನಾಳ್ ದಿನಗಳನ್ನು ನೆನಪಿಸುವಾಗ ತುಂಬಾ ಖುಷಿಯಾಗುತ್ತಿದೆ. ಫಿತ್ರ್ ಝಕಾತ್‌ಗಾಗಿ ಮನೆ ಬಾಗಿಲಿಗೆ ಬರುವವರಿಗೆ ಅಕ್ಕಿಯನ್ನು ಅವರ ಚೀಲಗಳಿಗೆ ಅಳತೆ ಮಾಡಿ ಕೊಡಲು ನಾನು ಮತ್ತು ನನ್ನ ಸಹೋದರ ಜೊತೆ ಜಗಳ ಮಾಡುವ ಪೆರ್ನಾಳ್‌ನ ಮುಂಜಾನೆಯ ಆ ದಿನಗಳು, ಪೆರ್ನಾಳ್ ನಮಾಝ್‌ನ ನಂತರ ಸ್ನೇಹಿತರ ಜೊತೆ ಸೇರಿ ಅದೆಷ್ಟೋ ಕಿಲೋ ಮೀಟರ್ ನಡೆದುಕೊಂಡೇ ನಮ್ಮ ಊರಿನ ಒಂದೇ ಒಂದು ಮನೆಯನ್ನೂ ಬಿಡದೆ ಪ್ರತಿಯೊಂದು ಮನೆಗೂ ಭೇಟಿ ಕೊಡುತಿದ್ದ ದಿನಗಳು, ಪ್ರೀತಿಯಿಂದ ಭೇಟಿಕೊಟ್ಟಾಗ ಸಂಬಂಧಿಕರ ಮನೆಗಳಲ್ಲಿ ಕೊಟ್ಟ ಒಂದಿಷ್ಟು ಹಣವನ್ನು ಎಣಿಸಿಕೊಂಡು ಮಧ್ಯಾಹ್ನ ದೇರಳಕಟ್ಟೆಯ ಇಬ್ರಾಯಾಕರ ಸೈಕಲ್ ಶಾಪ್‌ಗೆ ಹೋಗಿ ಸೈಕಲ್ ಬಾಡಿಗೆ ಪಡೆದು ದೇರಳಕಟ್ಟೆಯ ಮೈದಾನವಿಡೀ ಸುತ್ತಾಡಿ ಸಂಜೆಯ ವೇಳೆಗೆ ಮನೆ ಸೇರುತ್ತಿದ್ದ ಆ ದಿನಗಳ ಸವಿ ನೆನಪುಗಳು ನನ್ನ ಕಣ್ಣ ಮುಂದೆ ಬರುತ್ತಿವೆ...

ತದನಂತರ ನಾನು ಸೌದಿ ಅರೇಬಿಯಾದಲ್ಲಿದ್ದ ಸಮಯದಲ್ಲಿ ಪೆರ್ನಾಳ್ ದಿವಸ ನಾನು ನನ್ನ ಸಹೋದರರಾದ ನಾಸಿರ್, ಮೊಹಿಷೀರ್, ಸ್ನೇಹಿತರಾದ ಮುತ್ತಲಿಬ್, ಹಾರಿಸ್, ಮಕ್ಸೂದ್, ಹಮೀದಾಕ, ಹನೀಫ್,ಅನ್ಸಾರ್ ಕಣ್ಮಣಿ, ಮುಸ್ತ್ತಫ, ಮಿರ್ಷಾದ್ ಎಲ್ಲರೂ ಒಟ್ಟಿಗೆ ಪೆರ್ನಾಳ್ ನಮಾಝ್ ಮಾಡಿ ಬಂದು ಬಿರಿಯಾನಿ ಮಾಡಲು ತಯಾರಾಗಿ ನಿಂತಾಗ ಗ್ಯಾಸ್ ಮುಗಿದಾಗಿನ ದಿಗಿಲು, ಅಂದು ರಜೆ ಇದ್ದ ಕಾರಣ ಎಲ್ಲೂ ಗ್ಯಾಸ್ ಸಿಲಿಂಡರ್ ಸಿಗದೆ ಇದ್ದಾಗ ಪಕ್ಕದ ಫ್ಲಾಟಿನಲ್ಲಿದ್ದ ಯಮನ್ ದೇಶದ ಪ್ರಜೆ ಮಹಮೂದ್ ಎಂಬವರ ಮನೆಯ ಗ್ಯಾಸ್ ಸಿಲಿಂಡರ್ ಹೊತ್ತು ತಂದು ಬಿರಿಯಾನಿ ಮಾಡಿ ಒಟ್ಟಿಗೆ ಸೇರಿ ಪೆರ್ನಾಳ್‌ನ ಸಂಭ್ರಮ ಸವಿದದ್ದನ್ನು ಮರೆಯುವಂತಿಲ್ಲ.

ಪೆರ್ನಾಳ್ ದಿವಸ ಪ್ರತಿಯೊಬ್ಬ ಅನಿವಾಸಿ ಭಾರತೀಯ ತನ್ನ ಮನೆಯವರು, ಕುಟುಂಬಸ್ಥರು, ಬಾಲ್ಯದ ಸ್ನೇಹಿತರು, ಬಾಲ್ಯದ ಸವಿ ನೆನಪುಗಳನ್ನು ಜ್ಞಾಪಿಸಿಕೊಳ್ಳುವುದು ಸಹಜ. ಆವಾಗೆಲ್ಲಾ ಊರಿನ ಪೆರ್ನಾಳ್ ಸಡಗರವನ್ನು ನೆನೆದು ಕಣೀರಿಟ್ಟ ಸಂದರ್ಭಗಳೂ ಇವೆ.

ಮನ್ಸೂರ್ ಅಹ್ಮದ್ ಸಾಮಣಿಗೆ

(ಸಾಮಾಜಿಕ ಕಾರ್ಯಕರ್ತರು, ಅಸೈಗೋಳಿ-ಕೊಣಾಜೆ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X