Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪೆರ್ನಾಳ್‌ನ ನಮಾಝ್ ತಪ್ಪಿದಾಗ ಎದೆ ಢವ...

ಪೆರ್ನಾಳ್‌ನ ನಮಾಝ್ ತಪ್ಪಿದಾಗ ಎದೆ ಢವ ಢವ...

ಈದುಲ್ ಫಿತ್ರ್ ಸವಿ ನೆನಪುಗಳು!

ವಾರ್ತಾಭಾರತಿವಾರ್ತಾಭಾರತಿ15 Jun 2018 7:05 PM IST
share
ಪೆರ್ನಾಳ್‌ನ ನಮಾಝ್ ತಪ್ಪಿದಾಗ ಎದೆ ಢವ ಢವ...

ನಮಗೆ ಆ ಸಂದರ್ಭ ಆರ್ಥಿಕ ಬಡತನವಿತ್ತು. ಆದರೂ ಅಪ್ಪ ಪೆರ್ನಾಳ್ ಸಹಿತ ಮದುವೆ, ಮುಂಜಿ ಮತ್ತಿತರ ಸಂಭ್ರಮದ ದಿನಗಳಂದು ನಮಗೆ ಹೇಗಾದರೂ ಹೊಸ ಬಟ್ಟೆಬರೆ ತಂದು ಕೊಡುತ್ತಿದ್ದರು. ಅಪ್ಪ ತೀರಿ ಹೋಗಿ ಸುಮಾರು 10 ವರ್ಷಗಳಾದವು. ನನಗೆ ಆಗ 10 ವರ್ಷ ಪ್ರಾಯ. ಅಪ್ಪನಿಲ್ಲದ ಮನೆ ಖಾಲಿ ಖಾಲಿ... ‘ಇದ್ದತ್’ ಮುಗಿದ ಬಳಿಕ ಉಮ್ಮ ಹೊರಗೆ ಹೋಗಿ ದುಡಿಯುವುದು ಅನಿವಾರ್ಯವಾಯಿತು. ನನಗೆ ಇಬ್ಬರು ಅಕ್ಕಂದಿರು, ಒಬ್ಬ ತಮ್ಮ ಮತ್ತು ಇಬ್ಬರು ತಂಗಿಯರು. ಹೀಗೆ ಆರು ಮಕ್ಕಳನ್ನು ಸಾಕುವ ಹೊಣೆ ಉಮ್ಮನದ್ದಾಗಿತ್ತು. ಕುಟುಂಬದ ಸದಸ್ಯರಲ್ಲದೆ ಅಕ್ಕಪಕ್ಕದವರು ಕೊಡುತ್ತಿದ್ದ ಫಿತ್ರ್ ಝಕಾತ್‌ನ ಅಕ್ಕಿಯನ್ನು ಕಾಣುವಾಗ ಮನದ ಮೂಲೆಯಲ್ಲೊಂದು ಖುಷಿ.

ಉಮ್ಮ, ದೊಡ್ಡಪ್ಪ, ಚಿಕ್ಕಪ್ಪರ ಅಣತಿಯಂತೆ ಯತೀಂ ಹುಡುಗನಾದ ನಾನು ದರ್ಸ್ ಕಲಿಯಲು ಮಂಜನಾಡಿಗೆ ತೆರಳಿದೆ. ಅಲ್ಲಿ ಸಿಗುವ ಹೊಸ ಬಟ್ಟೆ ಬರೆಯನ್ನು ಸ್ವೀಕರಿಸಿದಾಗ ಅಪ್ಪ ತಂದು ಕೊಡುತ್ತಿದ್ದ ಅಂಗಿ-ಪ್ಯಾಂಟ್‌ಗಳು ನೆನಪಿಗೆ ಬರುತ್ತಿತ್ತು. ಹೊಸ ಬಟ್ಟೆಯ ಆ ಸುವಾಸನೆಯಂತೂ ಪೆರ್ನಾಳ್‌ನ ಸಂಜೆಯವರೆಗೂ ಮೂಗಿಗೆ ಬಡಿಯುತ್ತಿತ್ತು. ‘ಉಸ್ತಾದ್’ರಂತೆ ಬಿಳಿ ಅಂಗಿ, ಲುಂಗಿ, ತಲೆಗೆ ಮುಂಡಾಸು ಕಟ್ಟಿ ಮನೆಗೆ ಹೋಗುವಾಗ ಎಲ್ಲಿಲ್ಲದ ಖುಷಿ.

ನಾನು ಪ್ರತೀ ಪೆರ್ನಾಳ್‌ಗೆ ಊರಿನ ಮಸೀದಿಗೆ ಹೋಗುತ್ತಿದ್ದೆ. ಎರಡ್ಮೂರು ವರ್ಷಗಳ ಹಿಂದಿನ ನೆನಪು. ನಮ್ಮ ಮಸೀದಿಯಲ್ಲಿ ಪೆರ್ನಾಳ್ ನಮಾಝ್‌ನ ಸಮಯದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿತ್ತು. ನನಗೆ ಅದರ ಅರಿವು ಇರಲಿಲ್ಲ. ನಾನು ಎಂದಿನ ಸಮಯಕ್ಕೆ ಮಸೀದಿಗೆ ಹೋದಾಗ ಪೆರ್ನಾಳ್ ನಮಾಝ್ ಮುಗಿದು ಖುತ್ಬಾ ಆಗುತ್ತಿತ್ತು. ನನ್ನಂತೆ ಸಮಯದ ಬದಲಾವಣೆ ಗೊತ್ತಿಲ್ಲದ ಸುಮಾರು 30-40 ಮಂದಿಯೂ ನಮಾಝ್ ತಪ್ಪಿದ್ದರಿಂದ ಪರಿತಪಿಸುತ್ತಿದ್ದರು. ನನ್ನನ್ನು ಕಂಡೊಡನೆ ‘ನೀನೇ ಇಮಾಮ್ ನಿಲ್ಲು’ ಎಂದು ಒತ್ತಾಯಿಸಿದರು. ನನಗೋ ಎದೆ ಢವ... ಢವ... ಊರಿನವರಿಗೆ ಹೇಗೆ ಇಮಾಮ್ ನಿಲ್ಲಲಿ, ತಪ್ಪಿದರೆ... ಎಂಬ ಅಳುಕು. ಆದರೆ ಹಿಂದೇಟು ಹಾಕುವಂತಿರಲಿಲ್ಲ. ಉಪಾಯವಿಲ್ಲದೆ, ನಮಾಝ್‌ಗೆ ನೇತೃತ್ವ ನೀಡಿದೆ. ನಮಾಝ್ ಪೂರೈಸಿದಾಗ ಧನ್ಯತಾ ಭಾವ. ಒಟ್ಟಿನಲ್ಲಿ ಪ್ರತೀ ಪೆರ್ನಾಳ್ ಹೊಸ ಅನುಭವವನ್ನೇ ನೀಡುತ್ತಿದೆ.

ನೌಫಲ್ ಅರಸ್ತಾನ,

(ದಅ್ವಾ ಕಾಲೇಜು ವಿದ್ಯಾರ್ಥಿ, ಅಲ್ ಮದೀನ ಮಂಜನಾಡಿ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X