Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಶವ್ವಾಲ್‌ನ ಮೊದಲ ಚಂದ್ರನನ್ನು ನಾನೇ...

ಶವ್ವಾಲ್‌ನ ಮೊದಲ ಚಂದ್ರನನ್ನು ನಾನೇ ಕಂಡೆನೆಂಬ ಹೆಮ್ಮೆ

ಈದುಲ್ ಫಿತ್ರ್ ಸವಿ ನೆನಪುಗಳು!

ವಾರ್ತಾಭಾರತಿವಾರ್ತಾಭಾರತಿ15 Jun 2018 7:08 PM IST
share
ಶವ್ವಾಲ್‌ನ ಮೊದಲ ಚಂದ್ರನನ್ನು ನಾನೇ ಕಂಡೆನೆಂಬ ಹೆಮ್ಮೆ

ಪೆರ್ನಾಳ್ ಹಬ್ಬದ ಚಂದ್ರದರ್ಶನದ ಸಂಭಾವ್ಯದ ದಿನ ಮನೆಯ ಹಿಂದುಗಡೆಯಿದ್ದ ಎತ್ತರದ ಮಣಿಪದವುಗುಡ್ಡೆಗೆ ಗೆಳೆಯರೊಂದಿಗೆ ಚಂದ್ರದರ್ಶನಕ್ಕೆಂದು ಹೋಗುತ್ತಿದ್ದ ನೆನಪು ಇನ್ನೂ ಹಸಿರು. ಚಂದ್ರದರ್ಶನವಾಯಿತೆಂದರೆ ನಾನೇ ಆ ಊರಿಗೆ ಮೊದಲಿಗನಾಗಿ ದರ್ಶನ ಮಾಡಿದವನೆಂಬ ಹೆಮ್ಮೆ ಮನದಲ್ಲಿ ಮೂಡುತ್ತಿತ್ತು. ತಕ್ಷಣ ಅಲ್ಲಿಯೇ ಗೆಳೆಯರೊಂದಿಗೆ ಕೂಡಿ ಏರುಧ್ವನಿಯಲ್ಲಿ ತಕ್ಬೀರ್ ಧ್ವನಿ ಮೊಳಗಿಸುತ್ತಿದ್ದ ನೆನಪು ಯಾವತ್ತೂ ಮರೆಯಲಾಗದು.

ಪೆರ್ನಾಳ್‌ನ ಹಿಂದಿನ ರಾತ್ರಿಯೇ ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ಟ್ರಾಲ್‌ಗಾಗಿ ಹೊಸ ಉಡುಪನ್ನು ರಾತ್ರಿಯೇ ಧರಿಸಿ ಸಂಭ್ರಮಿಸಿದಾಗ ಉಮ್ಮ ಇಂದೇ ಏಕೆ ಹಾಕಿದೆ ಎಂದು ಗದರಿಸುತ್ತಿದ್ದರು. ನಿರೀಕ್ಷಿತ ದಿನಕ್ಕಿಂತ ಒಂದು ದಿನ ಮುಂಚಿತವಾಗಿ ಪೆರ್ನಾಳ್ ಹಬ್ಬದ ಘೋಷಣೆಯಾದರೆ ಹೊಸ ಉಡುಪು ಹೊಲಿಯಲು ಕೊಟ್ಟ ನಮ್ಮೂರಿನ ಏಕೈಕ ಟೈಲರಾಗಿದ್ದ ಕುಂಞಿ ಬಲ್ಯಾಯರ ಅಂಗಡಿಗೆ ಹಬ್ಬದಂದೇ ಬೆಳಗ್ಗೆ ದೌಡಾಯಿಸುವುದು, ಅಲ್ಲಿಯೂ ನನ್ನಂತೆ ಹೊಲಿಸಲು ಕೊಟ್ಟ ಅಂಗಿ-ಪ್ಯಾಂಟ್‌ಗಾಗಿ ಜನರ ಕ್ಯೂ, ಕೆಲವೊಂದು ಬಾರಿ ಹೊಲಿದು ಉಡುಪು ಸಿಗುವುದು ತಡವಾದುದರಿಂದ ಪೆರ್ನಾಳ್ ನಮಾಝ್ ತಪ್ಪಿದ್ದೂ ಉಂಟು.

ಫಿತ್ರ್ ಝಕಾತ್ ಬಾಬ್ತು ಅಪ್ಪಅಕ್ಕಪಕ್ಕದವರಿಗೆ ಸೇರಿನಲ್ಲಿ ಅಳೆದುಕೊಡುತ್ತಿದ್ದ ಅಕ್ಕಿ, ಅದಕ್ಕಾಗಿ ಮನೆಗೆ ಬರುತ್ತಿದ್ದವರಿಗೆ ಚಹಾ-ತಿಂಡಿ ಕುಡಿದೇ ಹೋಗಬೇಕೆಂಬ ಅಪ್ಪನ ತಾಕೀತು ಇವೆಲ್ಲ ಕೇವಲ ನೆನಪಾಗಿ ಉಳಿದಿದೆ. ಗಂಡು ಮಕ್ಕಳು ಅಪ್ಪನ ಜೊತೆ 1 ಕಿಲೋ ಮೀಟರ್ ದೂರದ ಪೊಯ್ಯತ್ತಬೈಲ್ ಮಸೀದಿಗೆಕಾಲ್ನಡಿಗೆಯಲ್ಲೇ ಬಯಲು ದಾರಿಯಲ್ಲಿ ಸಾಗುತ್ತಿದ್ದೆವು.

ಪೆರ್ನಾಳ್ ದಿನಕ್ಕೆಂದು ಗಂಧಸಾಲೆ ಭತ್ತವನ್ನು ಅಮ್ಮ ಸ್ವತ: ಒನಕೆಯಿಂದ ಕುಟ್ಟಿ ಅಕ್ಕಿ ಮಾಡಿ ತೆಗೆದಿರಿಸುತ್ತಿದ್ದ ನೆನಪು,ಆ ದಿನಗಳಲ್ಲಿ ಮನೆಯಲ್ಲೇ ನಾವು ಸಾಕುತ್ತಿದ್ದ ನಾಟಿಕೋಳಿಗಳಲ್ಲಿ ಒಂದು ಹುಂಜವನ್ನು ಪದಾರ್ಥ ಮಾಡಲೆಂದು ಮೀಸಲಿಟ್ಟದ್ದು, ಹಬ್ಬದಂದು ಹಿರಿಯಣ್ಣ ಅದರ ಕತ್ತನ್ನು ‘ಬಿಸಿ’್ಮ ಉಚ್ಚರಿಸಿ ಕುಯ್ದದ್ದು, ಗಂಧಸಾಲೆಯ ಅಕ್ಕಿಯ ಇಡ್ಲಿ, ಕೇವಲ ಹಬ್ಬದಂದು ಮಾತ್ರ ಮಾಡುತ್ತಿದ್ದ ತುಪ್ಪದ ಅನ್ನದ ಸವಿ ನೆನಪಾಗಿ ಉಳಿದಿದೆ. ಅಂದಿನ ದಿನಗಳಲ್ಲಿ ಕುಟುಂಬಸ್ಥರು, ದೂರದ ಸಂಬಂಧಿಗಳು ಬಂದು ಜೊತೆ ಜೊತೆಯಾಗಿಯೇ ಕಲೆತು ಬೆರೆತು ಸಂಭ್ರಮಿಸಿದ ದಿನಗಳು ಇಂದಿಗೆ ಮಸುಕಾಗುತ್ತಿರುವುದು ಸುಳ್ಳಲ್ಲ.

ಇಸ್ಮಾಯೀಲ್ ತುಪ್ಪೆ

ಉಪ ಪ್ರಾಂಶುಪಾಲರು, ಮದನಿ ಪಿಯು ಕಾಲೇಜು ಉಳ್ಳಾಲ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X