Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹೊಸ ವಸ್ತ್ರದ ಬಣ್ಣ ಹಿಡಿಸದಿದ್ದರೂ....

ಹೊಸ ವಸ್ತ್ರದ ಬಣ್ಣ ಹಿಡಿಸದಿದ್ದರೂ....

ಈದುಲ್ ಫಿತ್ರ್ ಸವಿ ನೆನಪುಗಳು!

ವಾರ್ತಾಭಾರತಿವಾರ್ತಾಭಾರತಿ15 Jun 2018 7:10 PM IST
share
ಹೊಸ ವಸ್ತ್ರದ ಬಣ್ಣ ಹಿಡಿಸದಿದ್ದರೂ....

ಪೆರ್ನಾಳ್ ಪ್ರತಿ ವರ್ಷವೂ ನಮಗೆ ಸವಿ ನೆನಪು ನೀಡುವ ಹಬ್ಬ. ಪೆರ್ನಾಳ್ ಸವಿ ನೆನಪನ್ನು ಹಂಚಿಕೊಳ್ಳುವಾಗ ನಾನು ಮದುಮಗಳಾಗಿ ಕಾಲಿಟ್ಟ ಕೆಲ ದಿನಗಳಲ್ಲೇ ಆಗಮಿಸಿದ ಪೆರ್ನಾಳ್ ನನಗೆ ನೆನಪಾಗುತ್ತಿದೆ. ಅಷ್ಟರವರೆಗೆ ಉಮ್ಮ, ಅಕ್ಕ, ಅಣ್ಣಂದಿರೊಂದಿಗೆ ಸಂಭ್ರಮಿಸುತ್ತಿದ್ದ ನನಗೆ ಅವರ ಆ ಪ್ರೀತಿಗೆ ಕೊರತೆಯಾಗದಂತೆ ಪ್ರೀತಿಸುವ ಪತಿ, ಅತ್ತೆ, ಮಾವ, ಸ್ನೇಹಿತೆಯರಂತೆ ಕಾಣುವ ನಾದಿನಿಯರು, ಅಣ್ಣನಂತೆ ಕಾಳಜಿ ತೋರಿಸುವ ಮೈದುನ ಇವರೆಲ್ಲರ ನಡುವೆ ಅಂದಿನ ಹಬ್ಬ ನನ್ನನ್ನು ಸಂತೋಷದ ಕಡಲಲ್ಲಿ ತೇಲಿಸುವಂತೆ ಮಾಡಿತ್ತು.

ನನಗಾಗಿ ಪತಿ ಖರೀದಿಸಿ ತಂದ ಹೊಸ ವಸ್ತ್ರ ಬಣ್ಣ ಅಲ್ಪಇಷ್ಟವಾಗಿರದಿದ್ದರೂ ಪತಿಯ ಪ್ರೀತಿಯ ಮುಂದೆ ನನಗೆ ಅದು ತುಂಬಾ ಸುಂದರವಾಗಿ ಕಂಡಿತ್ತು. ನಿನಗೆ ಇಷ್ಟ ಆಗದಿದ್ದರೆ ಬದಲಾಯಿಸಿ ತರೋಣ ಎಂಬ ಮಾತನ್ನು ತಡೆದು ‘ಇಲ್ಲ ತುಂಬಾ ಸುಂದರವಾಗಿದೆ. ನಾನಿದುವರೆಗೂ ಇಷ್ಟು ಚಂದದ ಡ್ರೆಸ್ ತೊಟ್ಟವಳೇ ಅಲ್ಲ’ ಎಂದು ಎದೆಗಪ್ಪಿಕೊಂಡಿದ್ದೆ. ಮನೆಯ ಸದಸ್ಯರಿಗೆಲ್ಲರಿಗೂ ಸ್ವತಃ ತಾನೇ ಹೊಸ ವಸ್ತ್ರ ತಂದು ಕೊಡುತ್ತಿದ್ದ ಪತಿಯ ಕಡೆಗೆ ಅಭಿಮಾನದ ನೋಟ ಬೀರಿದ್ದು ಇಂದೂ ನೆನಪಾಗುತ್ತಿದೆ.

ಜೊತೆಗೆ ಹಿಂದೂ, ಮುಸ್ಲಿಂ ಭೇದವಿಲ್ಲದೆ ನೆರೆಮನೆಯ ಎಲ್ಲಾ ಹುಡುಗಿಯರಿಗೆ ಹಬ್ಬದ ಮೊದಲ ದಿನ ಮೆಹಂದಿ ನೀಡುವುದು ವಾಡಿಕೆಯಾಗಿತ್ತು. ಜಲೀಲಣ್ಣ ಮೆಹಂದಿ ತರುವುದನ್ನೇ ಕಾಯುತ್ತಿದ್ದ ಹುಡುಗಿಯರು... ಅವರ ಕಣ್ಣುಗಳಲ್ಲಿದ್ದ ಹೊಳಪು.. ನನಗೆ ಇದು ಹೊಸ ಅನುಭವ. ನೆರೆಮನೆಯ ಹುಡುಗಿ ವಾಣಿ ನನ್ನ ಕೈಗಳಿಗೆ ಬಿಡಿಸಿದ ಮೆಹಂದಿಯ ಚಿತ್ತಾರ ಸವಿನೆನಪಾಗಿ ಉಳಿದಿದೆ. ಮೊದಲ ಹಬ್ಬದ ಸಂಭ್ರಮದಲ್ಲಿ ಸಂಜೆಯಾಗುತ್ತಿರಲು ತವರಿನ ಕಡೆಗೆ ಮನಸ್ಸು ಓಡಿತ್ತು. ಪತಿಯ ಜೊತೆಯಲ್ಲಿ ಸುತ್ತಾಡಿ ತವರಿಗೆ ತಲುಪಿ ಅಲ್ಲಿ ರಾತ್ರಿಯವರೆಗೆ ಆಚರಿಸಿದ ಪೆರ್ನಾಳ್ ಮರೆಯಲಾಗದ ಸವಿನೆನಪು.

ಆಯಿಷಾ ಯು.ಕೆ. ಉಳ್ಳಾಲ (ಸದಸ್ಯೆ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X