ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ
ಬ್ರಹ್ಮಾವರ, ಜೂ.16: ಚೇರ್ಕಾಡಿ ಗ್ರಾಮದ ಪ್ರಗತಿನಗರದ ನಿವಾಸಿ ಸಂತೋಷ್ (34) ಎಂಬವರು ಜೂ.14ರಂದು ರಾತ್ರಿ 10 ಗಂಟೆಗೆ ಮನೆ ಯಿಂದ ಬೈಕಿನಲ್ಲಿ ಹೋದವರು ಈವರೆಗೆ ಹಿಂದಿರುಗಿ ಬಾರದೆ ನಾಪತ್ತೆಯಾಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಬೈಕಾಡಿ ಗ್ರಾಮದ ಗಾಂಧಿ ನಗರ ನಿವಾಸಿ ವಾಸು ಎಂಬವರ ಮಗಳು ವಿನುತಾ (22) ಎಂಬಾಕೆ ಜೂ.15ರಂದು ಬೆಳಗ್ಗೆ ಮನೆ ಯಲ್ಲಿ ಯಾರೂ ಇಲ್ಲದ ವೇಳೆ ಹೊರಗಡೆ ಹೋದವಳು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story