Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ತನ್ನ ಉದ್ಯೋಗಿಗೆ ಗ್ರಾಹಕಿ ಜನಾಂಗ ನಿಂದನೆ...

ತನ್ನ ಉದ್ಯೋಗಿಗೆ ಗ್ರಾಹಕಿ ಜನಾಂಗ ನಿಂದನೆ ಮಾಡಿದಾಗ ಪ್ರತಿಭಟಿಸದ ಏರ್ ಟೆಲ್ ವಿರುದ್ಧ ವ್ಯಾಪಕ ಆಕ್ರೋಶ

ಓಲಾ ನೋಡಿ ಕಲಿತುಕೊಳ್ಳಿ ಎಂದ ಜನರು

ವಾರ್ತಾಭಾರತಿವಾರ್ತಾಭಾರತಿ18 Jun 2018 9:28 PM IST
share
ತನ್ನ ಉದ್ಯೋಗಿಗೆ ಗ್ರಾಹಕಿ ಜನಾಂಗ ನಿಂದನೆ ಮಾಡಿದಾಗ ಪ್ರತಿಭಟಿಸದ ಏರ್ ಟೆಲ್ ವಿರುದ್ಧ ವ್ಯಾಪಕ ಆಕ್ರೋಶ

ಬೆಂಗಳೂರು, ಜೂ.18: ಗ್ರಾಹಕಿಯೊಬ್ಬರು ತನ್ನ ಸಂಸ್ಥೆಯ ಉದ್ಯೋಗಿಯನ್ನು ಆತನ ಧರ್ಮದ ಆಧಾರದಲ್ಲಿ ಅವಹೇಳನ ಮಾಡಿದಾಗ ಅದನ್ನು ಪ್ರತಿಭಟಿಸದೆ ಆಕೆಗೆ ಸೇವೆ ಸಲ್ಲಿಸಲು ಬೇರೆ ಉದ್ಯೋಗಿಯನ್ನು ನೇಮಿಸಿದ ಏರ್ ಟೆಲ್ ಮೊಬೈಲ್ ಕಂಪೆನಿಯ ಧೋರಣೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 

ಪೂಜಾ ಸಿಂಗ್ ಎಂಬ ಮಹಿಳೆ ಸೋಮವಾರ ಏರ್ ಟೆಲ್ ಗೆ ದೂರೊಂದನ್ನು ಟ್ವೀಟ್ ಮಾಡಿದ್ದರು. 'ಡಿಟಿಎಚ್ ಸೇವೆ ಸರಿಯಿಲ್ಲ. ಹಾಗಾಗಿ ಅದನ್ನು ಪುನಃ ಇನ್ಸ್ಟಾಲ್ ಮಾಡಬೇಕು ಎಂಬ ತನ್ನ ಬೇಡಿಕೆಗೆ ಏರ್ ಟೆಲ್ ಸರಿಯಾಗಿ ಸ್ಪಂದಿಸಿಲ್ಲ. ಸಂಸ್ಥೆ ನಿಯೋಜಿಸಿದ ಉದ್ಯೋಗಿ ನನ್ನೊಂದಿಗೆ ಕೆಟ್ಟದಾಗಿ ಮಾತನಾಡಿ ಇನ್ನೊಮ್ಮೆ ಫೋನ್ ಮಾಡಬೇಡ ಎಂದು ಲೈನ್ ಕಟ್ ಮಾಡಿದ' ಎಂದು ಆರೋಪಿಸಿದ್ದಳು. 

ಇದಕ್ಕೆ ಸ್ಪಂದಿಸಿದ ಏರ್ ಟೆಲ್ ಶುಹೈಬ್ ಎಂಬ ಇನ್ನೊಬ್ಬ ಉದ್ಯೋಗಿಯನ್ನು ಪೂಜಾ ಅವರ ಸಮಸ್ಯೆ ನಿವಾರಿಸಲು ನಿಯೋಜಿಸುತ್ತದೆ. ಆದರೆ ಈ ವಿಷಯ ತಿಳಿಯುತ್ತಲೇ ಪೂಜಾ ಪ್ರತಿಕ್ರಿಯಿಸಿದ ರೀತಿ ಮಾತ್ರ ಎಲ್ಲರಿಗೂ ಆಘಾತ ತರುವಂತಹದ್ದು. ಶುಹೈಬ್ ಬಗ್ಗೆ ನೇರವಾಗಿ ಟ್ವೀಟ್ ಮಾಡಿದ ಪೂಜಾ 'ಡಿಯರ್ ಶುಹೈಬ್, ನೀನು ಮುಸ್ಲಿಂ. ನನಗೆ ನಿನ್ನ ಕೆಲಸದ ನೀತಿಯ ಬಗ್ಗೆ ವಿಶ್ವಾಸವಿಲ್ಲ. ಕುರ್ ಆನ್ ಗ್ರಾಹಕ ಸೇವೆಗೆ ಏನಾದರೂ ಹೊಸ ಅರ್ಥವನ್ನೇ ಕಲ್ಪಿಸರಬಹುದು. ಹಾಗಾಗಿ ನನ್ನ ಸಮಸ್ಯೆ ನಿವಾರಿಸಲು ಒಂದು ಹಿಂದೂ ಸಹೋದ್ಯೋಗಿಯನ್ನು ನಿಯೋಜಿಸಿದರೆ ಒಳ್ಳೆಯದು' ಎಂದು ಹೇಳಿದ್ದಾರೆ. 

ಈ ಟ್ವೀಟ್ ನೋಡಿ ಜನರು ಪೂಜಾ ವಿರುದ್ಧ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಪೂಜಾ ಅವರ ನಿಲುವನ್ನು ಟೀಕಿಸಿ , ವ್ಯಂಗ್ಯವಾಡಿದ್ದಾರೆ. ಆದರೆ ಏರ್ ಟೆಲ್ ಕಂಪೆನಿ ಮಾತ್ರ ತನ್ನ ಉದ್ಯೋಗಿಗೆ ಗ್ರಾಹಕಿಯೊಬ್ಬರು ಮಾಡಿರುವ ಧರ್ಮ ನಿಂದನೆ ಹಾಗು ಅವಮಾನವನ್ನು ಪರಿಗಣನೆಗೇ ತೆಗೆದುಕೊಳ್ಳದೆ ಆಕೆ ಹೇಳಿದಂತೆ ಆಕೆಗೆ ಸೇವೆ ನೀಡಲು ಒಬ್ಬ ಹಿಂದೂ ಉದ್ಯೋಗಿಯನ್ನು ನಿಯೋಜಿಸಿ ಟ್ವೀಟ್ ಮಾಡಿದೆ!

ಡಿಟಿಎಚ್ ಸಮಸ್ಯೆ ನಿವಾರಣೆಗೂ ಉದ್ಯೋಗಿಯ ಧರ್ಮಕ್ಕೂ ಯಾವ ಸಂಬಂಧವಿದೆ? ಎಲ್ಲ ಗ್ರಾಹಕರಿಗೆ ಅವರ ಧರ್ಮ ನೋಡಿ ಸೇವೆ ಸಲ್ಲಿಸಲಾಗುತ್ತದೆಯೇ? ಈ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಅವಹೇಳನಕ್ಕೆ ಒಳಗಾದ ಉದ್ಯೋಗಿಯನ್ನು ನಿರ್ಲಕ್ಷಿಸಿ ಏರ್ ಟೆಲ್ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದೆ. ಪರೋಕ್ಷವಾಗಿ ಜನಾಂಗ ನಿಂದನೆಯನ್ನು ಸಮರ್ಥಿಸಿಕೊಂಡಿದೆ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಏರ್ ಟೆಲ್ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಆ ಟ್ವೀಟ್ ಅನ್ನು ಡಿಲೀಟ್ ಮಾಡುವ ಗೋಜಿಗೂ ಹೋಗಿಲ್ಲ. 

ಈ ಹಿಂದೆ ವ್ಯಕ್ತಿಯೊಬ್ಬ ಓಲಾ ಡ್ರೈವರ್ ಮುಸ್ಲಿಂ ಎಂಬ ಕಾರಣಕ್ಕೆ ಬುಕ್ಕಿಂಗ್ ರದ್ದು ಪಡಿಸಿದೆ ಎಂದಾಗ ಅದನ್ನು ನಾವು ಒಪ್ಪುವುದಿಲ್ಲ ಎಂದು ಓಲಾ ಹೇಳಿದ್ದನ್ನು ಟ್ವಿಟರಿಗರು ಏರ್ ಟೆಲ್ ಗೆ ನೆನಪಿಸಿ ಅದರಿಂದ ಪಾಠ ಕಲಿತುಕೊಳ್ಳಿ ಎಂದಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X