ಪ್ರೊ.ರಂಗಪ್ಪಗೆ ಉನ್ನತ ಸ್ಥಾನ ಬೇಡ: ಸಿಎಂಗೆ ಪರಿಷತ್ ಸದಸ್ಯರ ಪತ್ರ
ಬೆಂಗಳೂರು, ಜೂ. 20: ಅವ್ಯವಹಾರದ ಕಳಂಕ ಹೊತ್ತಿರುವ ಕರ್ನಾಟಕ ಮುಕ್ತ ವಿವಿ ಮಾಜಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರನ್ನಾಗಿ ನೇಮಕ ಮಾಡಬಾರದು ಎಂದು ಪರಿಷತ್ ಸದಸ್ಯರಾದ ಅರಣ್ ಶಹಾಪೂರ ಮತ್ತು ಎನ್.ರವಿಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.
ಪ್ರೊ.ರಂಗಪ್ಪ ಹಾಗೂ ಅವರ ನಂತರ ಕುಲಪತಿಯಾಗಿದ್ದ ಪ್ರೊ.ಎಂ.ಜೆ.ಕೃಷ್ಣನ್ ಅವರು ಭ್ರಷ್ಟಾಚಾರ ನಡೆಸಿದ್ದು, ಇದರಿಂದ ವಿಶ್ವ ವಿದ್ಯಾಲಯ ಅವನತಿ ಕಂಡಿದೆ. ಆದುದರಿಂದ ಪ್ರೊ.ರಂಗಪ್ಪ ಅವರಿಗೆ ಯಾವುದೇ ಉನ್ನತ ಹುದ್ದೆ ನೀಡಬಾರದು ಎಂದು ಪತ್ರದಲ್ಲಿ ಕೋರಿದ್ದಾರೆ.
Next Story