Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತನ್ನ ಮಗುವಿಗೆ ಪ್ರೀತಿಯ ತಮ್ಮ ಜುನೈದ್...

ತನ್ನ ಮಗುವಿಗೆ ಪ್ರೀತಿಯ ತಮ್ಮ ಜುನೈದ್ ಹೆಸರಿಟ್ಟ ಸೋದರಿ

ಕಳೆದ ವರ್ಷ ರೈಲಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಾಲಕ

ವಾರ್ತಾಭಾರತಿವಾರ್ತಾಭಾರತಿ22 Jun 2018 4:12 PM IST
share
ತನ್ನ ಮಗುವಿಗೆ ಪ್ರೀತಿಯ ತಮ್ಮ ಜುನೈದ್ ಹೆಸರಿಟ್ಟ ಸೋದರಿ

ಹೊಸದಿಲ್ಲಿ, ಜೂ.22: ಕಳೆದ ವರ್ಷದ ಜೂನ್ 22ರಂದು ಮಥುರಾಗೆ ಹೊರಟಿದ್ದ ರೈಲೊಂದರಲ್ಲಿ ದುಷ್ಕರ್ಮಿಗಳ ಗುಂಪೊಂದು ಇರಿದು ಕೊಲೆಗೈದ 15 ವರ್ಷದ ಜುನೈದ್ ಖಾನ್ ಅವರ ಸೋದರಿ ತನ್ನ ಪುತ್ರನಿಗೆ ಪ್ರೀತಿಯ ಸ್ಮರಣಾರ್ಥ ಜುನೈದ್ ಎಂದು ನಾಮಕರಣ ಮಾಡಿದ್ದಾಳೆ.

‘‘ಜುನೈದ್ ಖಾನ್ ಸಾವಿಗೀಡಾದ ಮೂರು ತಿಂಗಳ ನಂತರ ಹುಟ್ಟಿರುವ ನನ್ನ ಮಗು ತನ್ನ ಮಾವ ಜುನೈದ್ ನಂತೆಯೇ ಕಾಣುತ್ತಾನೆ. ಆದರೆ ಸ್ವಲ್ಪ ಸಪೂರಗಿದ್ದಾನೆ. ಜುನೈದ್ ನನ್ನ ಅಚ್ಚುಮೆಚ್ಚಿನ ತಮ್ಮನಾಗಿದ್ದ. ಆತನ ಹೆಸರನ್ನೇ ನನ್ನ ಮಗನಿಗೆ ಇಡಲು ನಿರ್ಧರಿಸಿದೆ’’ ಎಂದು ಫರೀದಾಬಾದ್ ನ ಖಂಡವ್ಲಿ ಗ್ರಾಮದ ತನ್ನ ಹೆತ್ತವರ ಮನಯೆಲ್ಲಿರುವ ಜುನೈದ್ ಸಹೋದರಿ ರಬಿಯಾ ಹೇಳುತ್ತಾಳೆ.

ಜುನೈದ್ ಸಾವಿಗೀಡಾಗಿ ವರ್ಷವೊಂದು ಕಳೆದಿದ್ದರೂ ಕುಟುಂಬದ ನೋವು ಇನ್ನೂ ಮಾಸಿಲ್ಲ. ಜುನೈದ್ ತಾಯಿ ಸಾಯಿರಾ ದುಃಖದಿಂದ ಹಾಸಿಗೆ ಹಿಡಿದಿದ್ದರೆ, ತಂದೆ ಜಲಾಲುದ್ದೀನ್ ಈಗಾಗಲೇ 25 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ. ಆ ದಿನ ಜುನೈದ್ ಜತೆ ದಾಳಿಗೊಳಗಾಗಿದ್ದ ಆತನ ಸೋದರ ಶಾಕಿರ್ ಇನ್ನೂ ತನ್ನ ಒಂದು ಕೈಯನ್ನು ಎತ್ತಲು ಕಷ್ಟಪಡುತ್ತಿದ್ದಾನೆ. ಇತರ ನಾಲ್ಕು ಸೋದರರಾದ ಫೈಝಲ್, ಆದಿಲ್, ಹಾಶಿಂ ಮತ್ತು ಖಾಸಿಂ ಲೋಕಲ್ ರೈಲುಗಳಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ. ಶಾಕಿರ್ ಮತ್ತು ಖಾಸಿಂ ಪ್ರಕರಣದ ಪ್ರಮುಖ ಸಾಕ್ಷಿಗಳಾಗಿರುವುದರಿಂದ ಕುಟುಂಬ ಇನ್ನೂ ಭಯ ಪಡುತ್ತಿದೆ.

ಕಳೆದೊಂದು ವರ್ಷದಿಂದ ಇಬ್ಬರು ಪೊಲೀಸ್ ಸಿಬ್ಬಂದಿ ಅವರ ಮನೆಯೆದುರು ಕಾವಲು ಕಾಯುತ್ತಿದ್ದಾರೆ. ಆದರೂ ಕುಟುಂಬದ ಯಾರಾದರೂ ಸದಸ್ಯರು ಹೊರ ಹೋದಾಗ ಜಲಾಲುದ್ದೀನ್ ಗೆ ಅವ್ಯಕ್ತ ಭಯ ಕಾಡುತ್ತದೆ. ಮಕ್ಕಳಿಗೆ ಯಾರ ಜತೆಗೂ ರೈಲಿನಲ್ಲಿ ಮಾತನಾಡದಂತೆ ಅವರು ಹೇಳಿದ್ದಾರೆ. ಅವರು ಹೊರಹೋದಾಗ ಪ್ರತಿ 30 ನಿಮಿಷಕ್ಕೊಮ್ಮೆ ಕರೆ ಮಾಡಿ ವಿಚಾರಿಸುತ್ತಾರೆ.

ಕಳೆದ ವರ್ಷ ಈದ್ ಗೆ ಮುಂಚೆ ಜುನೈದ್ ಹತ್ಯೆ ನಡೆದಿದ್ದರಿಂದ ಮತ್ತೆ ಈದ್ ಆಚರಿಸಲು ತನಗೆ ಸಾಧ್ಯವೇ ಇಲ್ಲ ಎಂದು ಜುನೈದ್ ತಾಯಿ ಸಾಯಿರಾ ಹಾಸಿಗೆಯಲ್ಲಿ ನರಳುತ್ತಲೇ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X