ಜೂ.23: ಮಂಗಳೂರಿನಲ್ಲಿ ಕೆಸಿಎಫ್ ಸಂಗಮ
ಮಂಗಳೂರು, ಜೂ. 22: ಅನಿವಾಸಿ ಮುಸ್ಲಿಂ ಕನ್ನಡಿಗರ ಅಂತಾರಾಷ್ಟ್ರೀಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ "ಇಂಟರ್ನಾಷನಲ್ ಸಮ್ಮಿಟ್" ಜೂ. 23ರಂದು ಪೂರ್ವಾಹ್ನ 11:30 ಗಂಟೆಗೆ ಮಂಗಳೂರು ಹಂಪನಕಟ್ಟೆಯ ಸೂರ್ಯ ಕನ್ವೆನ್ಷನ್ ಹಾಲ್ನಲ್ಲಿ ನಡೆಯಲಿದೆ.
ಸೌದಿ ಅರೇಬಿಯಾ, ಯುಎಇ., ಬಹರೈನ್, ಕುವೈತ್, ಕತರ್, ಒಮನ್, ಮಲೇಷ್ಯಾ ಹಾಗೂ ಲಂಡನ್ ಗಳಲ್ಲಿ ಘಟಕಗಳನ್ನು ಹೊಂದಿರುವ ಕೆಸಿಎಫ್ ಕನ್ನಡಿಗ ಮುಸ್ಲಿಮರ ಸಾಮಾಜಿಕ, ಸಾಂಸ್ಕೃತಿಕ ವೇದಿಕೆಯಾಗಿ ಕಾರ್ಯಾಚರಿಸುತ್ತಿದೆ. ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಸಂಘಟನೆಯಲ್ಲಿ ಸದ್ಯ ಹತ್ತು ಸಾವಿರಕ್ಕೂ ಅಧಿಕ ಮಂದಿ ಸದಸ್ಯರಿದ್ದು ಊರಿನ ವಿವಿಧ ಜನಪರ ಕಾರ್ಯಗಳಿಗಾಗಿ ಅವರು ಸಕ್ರಿಯವಾಗಿ ದುಡಿಯುತ್ತಿದ್ದಾರೆ. ಸದರಿ ಸಂಘಟನೆಯ ಅಂತಾರಾಷ್ಟ್ರೀಯ ಸಮಿತಿಯ ಮಹಾಸಭೆಯ ಅಂಗವಾಗಿ ನಡೆಯುವ ಸಮಾವೇಶದಲ್ಲಿ ರಾಜ್ಯದ ಸುನ್ನೀ ಸಂಘಟನಾ ಪ್ರಮುಖರು ಭಾಗವಹಿಸಲಿದ್ದು ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಶೈಖುನಾ ಬೇಕಲ್ ಉಸ್ತಾದ್ ಉದ್ಘಾಟನೆ ಮಾಡಲಿದ್ದಾರೆ ಎಂದು ಅಧ್ಯಕ್ಷ ಎಸ್ ಪಿ.ಹಂಝ ಸಖಾಫಿ ಬಂಟ್ವಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





