Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪುತ್ತೂರು: ಏಳು ಬಾರಿ ಫೋಟೊ ತೆಗೆಸಿದರೂ...

ಪುತ್ತೂರು: ಏಳು ಬಾರಿ ಫೋಟೊ ತೆಗೆಸಿದರೂ ಬಾರದ ಅಧಾರ್ ಕಾರ್ಡ್ !

'ಆಧಾರ್‌'ಗಾಗಿ ಅಲೆದಾಡುತ್ತಿರುವ ಶಾಲಾ ವಿದ್ಯಾರ್ಥಿ

ವಾರ್ತಾಭಾರತಿವಾರ್ತಾಭಾರತಿ22 Jun 2018 11:16 PM IST
share
ಪುತ್ತೂರು: ಏಳು ಬಾರಿ ಫೋಟೊ ತೆಗೆಸಿದರೂ ಬಾರದ ಅಧಾರ್ ಕಾರ್ಡ್ !

ಪುತ್ತೂರು, ಜೂ. 22: ಬರೋಬ್ಬರಿ ಏಳು ಬಾರಿ ಫೋಟೊ ತೆಗೆಸಿಕೊಂಡರೂ ಈ ಶಾಲಾ ಬಾಲಕನಿಗೆ ಇನ್ನೂ ಆಧಾರ್ ಕಾರ್ಡ್ ಬಂದಿಲ್ಲ. ಈ ಬಗ್ಗೆ ವಿಚಾರಿಸಿದರೆ ಸಮರ್ಪಕವಾದ ಉತ್ತರವೂ ಸಿಗದೆ ಬಾಲಕ ಹಾಗೂ ಆತನ ಪೋಷಕರು ಕಂಗಾಲಾಗಿದ್ದಾರೆ.

ಬಹಳ ಮುಖ್ಯವಾಗಿರುವ ಆಧಾರ್ ಕಾರ್ಡ್‌ಗಾಗಿ ಈ ಬಾಲಕ ವರ್ಷಗಳಿಂದ ನೋಂದಣಿ ಮಾಡುತ್ತಿದ್ದಾನೆ. ಅದಕ್ಕೆ ಪೂರಕವಾಗಿ ಆಧಾರ್ ನೋಂದಣಿ ಕೇಂದ್ರದಲ್ಲಿ ಫೋಟೋ ತೆಗೆಸುತ್ತಲೇ ಇದ್ದಾನೆ ಆದರೆ ಪರಿಣಾಮ ಮಾತ್ರ ಶೂನ್ಯವಾಗಿದೆ.

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ ಮುಹಮ್ಮದ್ ಫಯಾಝ್ ಎಂಬ ಬಾಲಕನೇ ಆಧಾರ್ ಕಾರ್ಡ್‌ಗಾಗಿ ಏಳು ಬಾರಿ ಫೋಟೋ ತೆಗೆಸಿ ಮಾಹಿತಿ ಕೊಟ್ಟವರು. ಶಾಲಾ ವಿದ್ಯಾರ್ಥಿಯಾಗಿರುವ ಈತ ಶಾಲಾ ದಾಖಲೆಗಳಿಗಾಗಿ ಕಳೆದ ಕೆಲ ವರ್ಷ ಗಳಿಂದ ಆಧಾರ್ ಕಾರ್ಡ್‌ಗಾಗಿ ಫೋಟೊ ತೆಗೆಸುತ್ತಲೇ ಇದ್ದಾನೆ.

ಪುತ್ತೂರು ಪುರಭವನದಲ್ಲಿ ನಡೆಯುತ್ತಿದ್ದ ಆಧಾರ್ ಕಾರ್ಡ್ ನೋಂದಾವಣೆಯಲ್ಲಿ ಎರಡು ಬಾರಿ ಫೋಟೋ ತೆಗೆಸಿ ಮಾಹಿತಿ ಕೊಟ್ಟಿದ್ದಾನೆ. ಇದಲ್ಲದೆ ಅಂಚೆ ಕಚೇರಿಯಲ್ಲಿ, ಪಂಚಾಯತ್ ಕಚೇರಿಯಲ್ಲಿ ಹೀಗೆ ಬಹುತೇಕ ಎಲ್ಲಾ ಕಡೆಗಳಲ್ಲೂ ಇವರು ಆಧಾರ್ ಕಾರ್ಡ್‌ಗಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ ಆಧಾರ್ ಕಾರ್ಡ್ ಮಾತ್ರ ಇನ್ನೂ ಬಂದಿಲ್ಲ.

ವಿಚಾರಿಸಿದರೆ ರಿಜೆಕ್ಟಾಗಿದೆ ಎಂಬ ಉತ್ತರ: 

ಮುಹಮ್ಮದ್ ಫಯಾಝ್ ಆಧಾರ್‌ಗಾಗಿ ಫೋಟೋ ತೆಗೆಸಿ ಮಾಹಿತಿ ಕೊಟ್ಟಿರುವ ಬಗ್ಗೆ ಅವರಲ್ಲಿ 7 ಸ್ವೀಕೃತಿ ಪ್ರತಿಗಳಿವೆ. ಬಾಲಕನ ತಂದೆ ಅಬ್ದುಲ್ ಹಮೀದ್ ಅವರು ಹೇಳುವಂತೆ ಅರ್ಜಿ ನೋಂದಣಿ ಮಾಡಿ ಫೋಟೊ ತೆಗೆಸಿಕೊಂಡು ಸ್ವೀಕೃತಿ ಪ್ರತಿಗಳನ್ನು ಹಿಡಿದುಕೊಂಡು ಆಧಾರ್ ಕೇಂದ್ರದಲ್ಲಿ ವಿಚಾರಿಸಿದರೆ ಅಲ್ಲಿ ಆನ್‌ಲೈನ್‌ನಲ್ಲಿ ಪರಿಶೀಲನೆ ಮಾಡಿ ಇದು ರಿಜೆಕ್ಟ್ ಆಗಿದೆ, ಪುನಃ ನೀವು ಫೋಟೊ ತೆಗೆಸಬೇಕು ಎಂದು ಹೇಳುತ್ತಾರಂತೆ. ಹೀಗೆ 7 ಬಾರಿ ನನ್ನ ಮಗನ ಫೋಟೊ ತೆಗೆಸಿ ಮಾಹಿತಿ ಕೊಟ್ಟಿದ್ದೇನೆ. ಪುತ್ತೂರು ಪುರಭವನದಲ್ಲಿ ನಡೆಯುತ್ತಿದ್ದ ಆಧಾರ್ ಕಾರ್ಡ್ ನೋಂಧಾವಣೆಯಲ್ಲಿ ಎರಡು ಬಾರಿ ಫೋಟೊ ತೆಗೆಸಿ ಮಾಹಿತಿ ಕೊಟ್ಟಿದ್ದೇನೆ. ಆದರೂ ಇದುವರೆಗೆ ಆಧಾರ್ ಕಾರ್ಡ್ ಬಂದಿಲ್ಲ ಇದಕ್ಕೆ ನಾನು ಏನು ಮಾಡಬೇಕು ತಿಳಿಯುತ್ತಿಲ್ಲ. ವಿಳಾಸವನ್ನು ಸಮರ್ಪಕವಾಗಿ ಹಲವು ಬಾರಿ ನೀಡಿದರೂ ಆಧಾರ್ ಕಾರ್ಡ್ ಬಂದಿಲ್ಲ. ಮುಂದೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ ಎಂದು ಅಸಹಾಯಕರಾಗಿ ನುಡಿಯುತ್ತಾರೆ.

ಆಧಾರ್ ಪಡೆಯಲು ಸಮಸ್ಯೆಗಳೇನು ಎಂಬುದು ಇನ್ನೂ ಅಬ್ದುಲ್ ಹಮೀದ್ ಹಾಗೂ ಮುಹಮ್ಮದ್ ಫಯಾಝ್ ಅವರಿಗೆ ತಿಳಿದಿಲ್ಲ. ನೋಂದಣಿ ಕೇಂದ್ರದವರಿಗೂ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಶಾಲಾ ದಾಖಲಾತಿಗಾಗಿ ಆಧಾರ್ ಪಡೆಯಲು ನಿರಂತರ ಪ್ರಯತ್ನ ನಡೆಸುತ್ತಿರುವ ಈ ಬಾಲಕನಿಗೆ ಇನ್ನೂ ಆಧಾರ್ ಭಾಗ್ಯ ಲಭಿಸಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X