Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಲಷ್ಕರ್ ಎ ತೊಯ್ಬಾ ಉಗ್ರರಿಗೆ ರಮೇಶ್ ಶಾ...

ಲಷ್ಕರ್ ಎ ತೊಯ್ಬಾ ಉಗ್ರರಿಗೆ ರಮೇಶ್ ಶಾ ಹೇಗೆ ಹಣ ಪೂರೈಸುತ್ತಿದ್ದ ಗೊತ್ತಾ?

ಕಂಪ್ಯೂಟರ್ ಪ್ರೋಗ್ರಾಮಿಂಗ್, ಹಾರ್ಡ್ ವೇರ್ ಕ್ಷೇತ್ರದಲ್ಲಿ ನಿಪುಣ ಈತ

ವಾರ್ತಾಭಾರತಿವಾರ್ತಾಭಾರತಿ23 Jun 2018 6:43 PM IST
share
ಲಷ್ಕರ್ ಎ ತೊಯ್ಬಾ ಉಗ್ರರಿಗೆ ರಮೇಶ್ ಶಾ ಹೇಗೆ ಹಣ ಪೂರೈಸುತ್ತಿದ್ದ ಗೊತ್ತಾ?

ಲಕ್ನೋ, ಜೂ.23: ಉಗ್ರರಿಗೆ ಹಣ ಪೂರೈಕೆ ಜಾಲದ ರೂವಾರಿಯೆಂದು ತಿಳಿಯಲಾದ ಗೋರಖ್ ಪುರದ ವ್ಯಕ್ತಿ 30 ವರ್ಷದ ರಮೇಶ್ ಶಾ ಎಂಬಾತನನ್ನು ಉತ್ತರ ಪ್ರದೇಶದ ಎಟಿಎಸ್ ಹಾಗೂ ಮಹಾರಾಷ್ಟ್ರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಪುಣೆಯಲ್ಲಿ ಜೂನ್ 9ರಂದು ಬಂಧಿಸಿದಾಗ ವ್ಯವಸ್ಥಿತ ಜಾಲವೊಂದನ್ನೇ ಬೇಧಿಸಿದ ಸಮಾಧಾನ ಪೊಲೀಸರಿಗುಂಟಾಗಿತ್ತು. ಶಾ  ತನ್ನ ಈ  ಜಾಲವನ್ನು ಹೇಗೆ ನಿರ್ವಹಿಸುತ್ತಿದ್ದ ಎನ್ನುವ ಸಂಪೂರ್ಣ ವರದಿಯನ್ನು ibtimes.co.in ವರದಿ ಮಾಡಿದೆ.

ಎಟಿಎಸ್ ಅಧಿಕಾರಿಗಳ ಪ್ರಕಾರ ಶಾ ತನಗೆ ಸಹಾಯ ಮಾಡಲೆಂದು ಬಾಡಿಗೆ ಜನರನ್ನು ಪಡೆಯಲು ಪುಣೆಗೆ ಬಂದಿದ್ದ. ಬಿಹಾರದ ಮುಕೇಶ್ ಪ್ರಸಾದ್ ಹಾಗೂ ಕುಶಿನಗರದ ಮುಶರಫ್ ಅನ್ಸಾರಿ ಸಹಿತ ಆತನ ಗ್ಯಾಂಗಿನ ಹಲವರನ್ನು ಮಾರ್ಚ್ ತಿಂಗಳಲ್ಲಿ ಬಂಧಿಸಲಾಗಿತ್ತು. ಪೊಲೀಸರು ಕೆಲವೊಂದು ಧ್ವನಿಮುದ್ರಿಕೆಗಳು ಹಾಗೂ ಡೈರಿಯನ್ನು ಅನ್ಸಾರಿ ಮತ್ತು ಪ್ರಸಾದ್ ರಿಂದ ವಶಪಡಿಸಿಕೊಂಡಿದ್ದರು. ಇದರಲ್ಲಿ ರಮೇಶ್ ಮತ್ತವನ ಗ್ಯಾಂಗ್ ಹೇಗೆ ಕಾರ್ಯಾಚರಿಸುತ್ತಿತ್ತೆಂಬ ಬಗ್ಗೆ ಮಹತ್ವದ ಸುಳಿವಿತ್ತು. ರಮೇಶ್ ಶಾನನ್ನು ಬಂಧಿಸಿದ ಕೂಡಲೇ ಎಟಿಎಸ್ ಅಧಿಕಾರಿಗಳು ಆತನ ಫೋನ್ ವಶಪಡಿಸಿಕೊಂಡು ಆದರಲ್ಲಿ ಆತನ ಶಾಮೀಲಾತಿಯನ್ನು ದೃಢಪಡಿಸುವ  ಮಹತ್ವದ ವಾಟ್ಸ್ಯಾಪ್ ಚಾಟ್ ಗಳಿರುವುದು ಪತ್ತೆ ಹಚ್ಚಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಆತನ ಜಾಲ ಹೇಗೆ ಕಾರ್ಯಾಚರಿಸುತ್ತಿತ್ತು ?

ಶಾ ವಿವಿಧ ನಗರಗಳಲ್ಲಿ ಸುಳ್ಳು ಗುರುತು ಪರಿಚಯ ಹೇಳಿಕೊಂಡು ತನಗಾಗಿ ಕೆಲಸ ಮಾಡಲು ಹಲವರನ್ನು ನೇಮಿಸುತ್ತಿದ್ದ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್ ಎ ತೊಯ್ಬಾ (ಎಲ್‍ಇಟಿ ) ಜತೆ ಆತ ನಿರಂತರ ಸಂಪರ್ಕದಲ್ಲಿದ್ದನಲ್ಲದೆ, ದೇಶಾದ್ಯಂತ ಎಲ್‍ಇಟಿ ಉಗ್ರರಿಗೆ ಹಣದ ಕೊರತೆಯೆದುರಾಗದಂತೆ ಹಣ ಸಂದಾಯ ಮಾಡುತ್ತಿದ್ದ. ಆತನಿಗೆ ಪಾಕಿಸ್ತಾನ, ಮಧ್ಯಪೂರ್ವ ದೇಶಗಳು ಸೇರಿದಂತೆ ದೇಶದ ಹಲವೆಡೆಗಳಿಂದ ಹಣ ಸಂದಾಯವಾಗುತ್ತಿತ್ತು.  ಈ ಹಣ ವಿವಿಧ ಜನರ ಖಾತೆಗಳಿಗೆ ಜಮೆಯಾಗುತ್ತಿತ್ತು. ಅವರು ಆ ಹಣವನ್ನು ಶಾ ಗ್ಯಾಂಗಿಗೆ ನೀಡಿದರೆ ನಂತರ ಅದು ಉಗ್ರರ ಪಾಲಾಗುತ್ತಿತ್ತು ಎಂದು ibtimes.co.in ವರದಿಯಲ್ಲಿ ತಿಳಿಸಿದೆ.

ವಿವಿಧ ಮೂಲಗಳಿಂದ ಬಂದ ಹಣ ಯಾರ ಖಾತೆಗೆ ಜಮೆಯಾಗುತ್ತಿತ್ತೋ ಅವರಿಗೆ ಆತ ಕಮಿಷನ್ ನೀಡುತ್ತಿದ್ದ. ತನಗೆ ಹಣ ಸಂದಾಯ ಮಾಡುತ್ತಿದ್ದವರ ಜತೆ ಆತ ವಾಟ್ಸ್ಯಾಪ್ ಮತ್ತು ಇಂಟರ್ನೆಟ್ ಕರೆಗಳ ಮೂಲಕ ಸಂಪರ್ಕದಲ್ಲಿರುತ್ತಿದ್ದನೆಂದು ಅಧಿಕಾರಿಗಳು ತಿಳಿಸುತ್ತಾರೆ. ಆತ ಕಂಪ್ಯೂಟರ್ ಪ್ರೊಗ್ರಾಮಿಂಗ್ ಮತ್ತು ಹಾರ್ಡ್ ವೇರ್ ಕ್ಷೇತ್ರದ ನಿಪುಣನಾಗಿದ್ದು ಇದು ಆತನಿಗೆ ಅನುಕೂಲಕರವಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ.

ರಮೇಶ್ ಕಳೆದೆರಡು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು ಇಲ್ಲಿಯ ತನಕ ಹಲವಾರು ಕೋಟಿ ರೂಪಾಯಿ ಹಣವನ್ನು ಉಗ್ರರಿಗೆ ಸಂದಾಯ ಮಾಡಿರಬಹುದು ಎಂದು ಉತ್ತರ ಪ್ರದೇಶ ಎಟಿಎಸ್ ಮಹಾನಿರ್ದೇಶಕ ಅಸಿಮ್ ಅರುಣ್ ಹೇಳುತ್ತಾರೆ. ತನಿಖಾ ತಂಡ ಆತನನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X