Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ವಾರ್ತಾಭಾರತಿವಾರ್ತಾಭಾರತಿ25 Jun 2018 12:06 AM IST
share
ಓ ಮೆಣಸೇ...

ವಿಮರ್ಶಕರು ಕೊಲೆಗಡುಕರು - ದೊಡ್ಡರಂಗೇಗೌಡ, ಹಿರಿಯ ಕವಿ
ಅಂದರೆ ಗೌರಿ, ಕಲಬುರ್ಗಿಯವರ ಹತ್ಯೆಯ ಆರೋಪವನ್ನು ವಿಮರ್ಶಕರ ತಲೆಗೆ ಕಟ್ಟುವ ಹುನ್ನಾರವೇ?
---------------------------
ರಾಮಾಯಣ ಮಹಾ ಕಾವ್ಯವು ಉಗ್ರ ಹಿಂದೂಗಳದ್ದಲ್ಲ - ಪ್ರಸನ್ನ, ರಂಗಕರ್ಮಿ
ರಾಮಾಯಣ ಮಹಾಕಾವ್ಯ ಹಿಂದೂಗಳಿಗಷ್ಟೇ ಸೇರಿದ್ದಲ್ಲ ಎಂದಿದ್ದರೆ ಇನ್ನಷ್ಟು ಅರ್ಥಪೂರ್ಣವಾಗಿರುತ್ತಿತ್ತು.
---------------------------
ಎಚ್.ಡಿ. ಕುಮಾರಸ್ವಾಮಿಯವರನ್ನು ನಾವೇ ಕರೆದು ಮುಖ್ಯಮಂತ್ರಿ ಮಾಡಿದ್ದು - ವೀರಪ್ಪ ಮೊಯ್ಲಿ, ಸಂಸದ
ಅದಕ್ಕಾಗಿಯೆ ಕಾಂಗ್ರೆಸ್‌ನ್ನು ಸೋಲಿಸಿದ್ದು ಕೂಡ ತಾವೇ ಎನ್ನುವ ವದಂತಿಗಳಿವೆ.

---------------------------
 ನಮಗೆ ನಮ್ಮ ತಂದೆ-ತಾಯಿ ಗೊತ್ತು - ಅನಂತಕುಮಾರ್ ಹೆಗಡೆ, ಸಂಸದ
 ತಂದೆ ತಾಯಿಗಳಿಂದ ಸಂಸ್ಕಾರ ಕಲಿಯದಿದ್ದರೆ, ಗೊತ್ತಿದ್ದು ಏನು ಪ್ರಯೋಜನ?
---------------------------
ಮುಸ್ಲಿಮರ ವಿಶ್ವಾಸ ಗೆಲ್ಲಲು ನರೇಂದ್ರ ಮೋದಿ ಇನ್ನಷ್ಟು ಕೆಲಸ ಮಾಡಬೇಕಿದೆ - ಮುಖ್ತಾರ್ ಅಬ್ಬಾಸ್‌ನಖ್ವಿ, ಕೇಂದ್ರ ಸಚಿವ

ಸಂವಿಧಾನದ ವಿಶ್ವಾಸ ಗೆದ್ದರೆ ದೇಶದ ವಿಶ್ವಾಸ ಗೆದ್ದಂತೆ.

---------------------------
ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ನಕ್ಸಲೈಟ್ ಇದ್ದಂತೆ - ಸುಬ್ರಮಣಿಯನ್‌ಸ್ವಾಮಿ, ಬಿಜೆಪಿ ಸಂಸದ
ಬಿಜೆಪಿಯ ಪಾಲಿಗೆ.

---------------------------
ಪ್ರಧಾನಿ ನರೇಂದ್ರ ಮೋದಿಯನ್ನು ಎದುರಿಸಲು ರಾಹುಲ್ ಗಾಂಧಿ ಸಮರ್ಥ - ಶೀಲಾ ದೀಕ್ಷಿತ್, ಕಾಂಗ್ರೆಸ್ ನಾಯಕಿ
ಆದರೆ ಅದಕ್ಕೆ ಪಕ್ಷದೊಳಗಿರುವ ಹಳೆಯ ತಲೆಗಳು ಅವಕಾಶ ಮಾಡಿಕೊಡಬೇಕಲ್ಲ?
---------------------------
ನಾನು ಆರೋಗ್ಯವಾಗಿದ್ದೇನೆ, ಗರ್ಭಿಣಿಯಾಗಿಲ್ಲ - ಶಿಲ್ಪಾ ಶೆಟ್ಟಿ, ನಟಿ
ಗರ್ಭಿಣಿಯಾಗುವುದು ಅನಾರೋಗ್ಯದ ಲಕ್ಷಣವೇ?
---------------------------
ಸಮ್ಮಿಶ್ರ ಸರಕಾರದ ಬಗ್ಗೆ ನಾನು, ಸಿದ್ದರಾಮಯ್ಯ, ಸಿ.ಎಂ. ಕುಮಾರಸ್ವಾಮಿ ಬಿಟ್ಟು ಬೇರೆ ಯಾರೂ ಮಾತನಾಡಬಾರದು - ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

ಮತಕೊಟ್ಟ ಜನರ ಪಾತ್ರವೇನು?
---------------------------
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಿತ್ಯ ಯೋಗ ಮಾಡುತ್ತಾರೆ - ಬಾಬಾ ರಾಮ್‌ದೇವ್, ಯೋಗಗುರು
ಯೋಗದ ಮೇಲೆ ಜಿಎಸ್‌ಟಿ ಹಾಕುವ ಉದ್ದೇಶವಿದೆಯಂತೆ.

---------------------------
11 ಬಾರಿ ಗೆದ್ದರೂ ಮುಖ್ಯಮಂತ್ರಿ ಸಿಗದಿರುವುದಕ್ಕೆ ನನಗೆ ಬಹಳ ನೋವಿದೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಗೆದ್ದವರೇ ಮುಖ್ಯಮಂತ್ರಿಯಾಗಬೇಕೆಂದೇನಿಲ್ಲ ಎನ್ನುವುದನ್ನು ಇತಿಹಾಸ ಹಲವು ಬಾರಿ ಹೇಳಿದೆ.

---------------------------
ಸರಕಾರಿ ಜಾಗದ ಕೊರತೆಯಿಂದ ವಸತಿರಹಿತರಿಗೆ ವಸತಿ ನೀಡಲು ಸಾಧ್ಯವಾಗಿಲ್ಲ - ಯು.ಟಿ. ಖಾದರ್, ಸಚಿವ
ಇರುವ ಸರಕಾರಿ ಜಾಗವನ್ನೆಲ್ಲ ರಾಜಕಾರಣಿಗಳು ಒತ್ತುವರಿ ಮಾಡಿಕೊಂಡರೆ ಇನ್ನೇನಾಗುತ್ತದೆ?
---------------------------
ಗೌರಿ ಲಂಕೇಶ್ ಹತ್ಯೆಯಲ್ಲಿ ಯಾವುದೇ ಹಿಂದೂಪರ ಸಂಘಟನೆಗಳು ಭಾಗಿಯಾಗಿಲ್ಲ - ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಮುಖ್ಯಸ್ಥ
ತಮ್ಮ ಸಂಘಟನೆ ಹಿಂದೂ ಪರ ಅಲ್ಲ ಎನ್ನುವುದು ಹಿಂದೂಗಳಿಗೆ ಚೆನ್ನಾಗಿ ಗೊತ್ತಿದೆ.

---------------------------
ಸಾಲ ಮನ್ನಾ ಯೋಜನೆ ಯಾವುದೇ ರೀತಿಯಲ್ಲೂ ಒಳ್ಳೆಯದಲ್ಲ - ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ
ಚುನಾವಣೆಗೆ ಮುನ್ನ ಇಂತಹ ಹೇಳಿಕೆ ತಮಗೂ ಒಳ್ಳೆಯದಲ್ಲ.

---------------------------
ಜನರ ಸೇವೆ ಮಂತ್ರಿಸ್ಥಾನಕ್ಕಿಂತಲೂ ದೊಡ್ಡದು - ಶಾಮನೂರು ಶಿವಶಂಕರಪ್ಪ, ಶಾಸಕ

ಮಂತ್ರಿಸ್ಥಾನ ದೊರಕಿದರೆ ಜನಸೇವೆಗೆ ಸಮಯ ಎಲ್ಲಿರುತ್ತದೆ?
---------------------------
ನನ್ನ ಮಗ ಕುಮಾರಸ್ವಾಮಿಗೆ ಅಧಿಕಾರ ಕೊಟ್ಟದ್ದು ದೇವರು - ದೇವೇಗೌಡ, ಮಾಜಿ ಪ್ರಧಾನಿ

ಸೋನಿಯಾ ಗಾಂಧಿಯನ್ನು ಈ ಮಟ್ಟಿಗೆ ಹೊಗಳುವುದು ಸರಿಯಲ್ಲ.

---------------------------
ಹಲಸಿನ ಹಣ್ಣಿನಿಂದ ಏಡ್ಸ್ ದೂರ- ರಘುಪತಿ ಭಟ್, ಶಾಸಕ
ಹೊಲಸಿನಿಂದ ದೂರ ಇದ್ದರೆ ಹಲಸಿನ ಅಗತ್ಯವಿಲ್ಲ.

---------------------------
ಲಕ್ಷ್ಮೀ ಹೆಬ್ಬಾಳ್ಕರ್‌ಗೆ ನಾನು ಅಕ್ಕ - ಜಯಮಾಲಾ, 
ಸಚಿವೆ ಒಟ್ಟಿನಲ್ಲಿ ಇಬ್ಬರೂ ಹೊಂದಾಣಿಕೆಯ ಮೂಲಕ ಸೇವೆ ಮಾಡಿ.

---------------------------

ಸ್ವಯಂಘೋಷಿತ ಕಳ್ಳ ಸಾಧುಗಳನ್ನು ನೇಣುಹಾಕಿ - ಬಾಬಾ ರಾಮ್‌ದೇವ್, ಯೋಗಗುರು

ನೇಣು ಹಾಕದಿದ್ದರೂ ಪರವಾಗಿಲ್ಲ, ಅವರ ಸಂಸ್ಥೆಗಳಿಗೆ ತೆರಿಗೆಯನ್ನಾದರೂ ಹಾಕಿ.

---------------------------

ಪ್ರಧಾನಿ ನರೇಂದ್ರ ಮೋದಿಗೆ ಮದುವೆಯೇ ಆಗಿಲ್ಲ - ಆನಂದಿಬೆನ್ ಪಟೇಲ್, ಗುಜರಾತ್ ಮಾಜಿ ಮುಖ್ಯಮಂತ್ರಿ
ಹಾಗಾದರೆ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆಯೇ?
---------------------------

ರಾಜ್ಯದಲ್ಲಿ ಅತೃಪ್ತರ ಸರಕಾರ ಆಡಳಿತದಲ್ಲಿದೆ- ಕೆ.ಎಸ್. ಈಶ್ವರಪ್ಪ, ಶಾಸಕ
ಜೊತೆಗೆ ಅತೃಪ್ತ ವಿರೋಧ ಪಕ್ಷ ಕೂಡ.

---------------------------
 ಶೋಭಾ ಕರಂದ್ಲಾಜೆ ಮನೆ ಶೋಧಿಸಿದರೆ ಯಡಿಯೂರಪ್ಪರ ಖಜಾನೆ ಸಿಗುತ್ತದೆ - ಡಿ.ಕೆ. ಶಿವಕುಮಾರ್, ಸಚಿವ
 ಕುಮಾರಸ್ವಾಮಿಯವರ ಖಜಾನೆ ಶೋಧಿಸಲು ಯಾರ ಮನೆ ಬಾಗಿಲು ತಟ್ಟಬೇಕು?
---------------------------

ಆರೆಸ್ಸೆಸ್‌ನ ಅಗೋಚರ ಹಸ್ತವು ಆಡಳಿತದ ಹಡಗನ್ನು ಬಂಡೆಗೆ ಢಿಕ್ಕಿ ಹೊಡೆಸಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಆ ಹಸ್ತವನ್ನು ಪ್ರಣವ್ ಮುಖರ್ಜಿ ಕುಲುಕಿ ಬಂದರಲ್ಲ, ಆ ಕುರಿತು ಮಾತನಾಡಿ.

---------------------------

ಕಾಂಗ್ರೆಸ್ - ಜೆಡಿಎಸ್‌ನವರು ಮಾಡುತ್ತಿರುವ ಪಾಪಕ್ಕೆ ಯಾವಾಗ ಕುಸಿಯುತ್ತಾರೆ ಎಂದು ನಾವು ಕಾಯುತ್ತಿದ್ದೇವೆ - ಶೋಭಾ ಕರಂದ್ಲಾಜೆ, ಸಂಸದೆ
ಕುಸಿಯಬೇಕಾದರೆ ಬಿಜೆಪಿಯ ಪಾಪದ ಹಣವೂ ಶಾಮೀಲಾಗಬೇಕು.

---------------------------
ದೇಶವನ್ನು ಮುನ್ನಡೆಸುವುದು ಮಕ್ಕಳಾಟವಲ್ಲ - ನರೇಂದ್ರ ಮೋದಿ.
 ಇಷ್ಟು ತಡವಾಗಿ ಗೊತ್ತಾಯಿತೇ?
---------------------------

2029ರ ವರೆಗೂ ಮೋದಿಯೇ ಗೆಲ್ಲಬೇಕು, ಇಲ್ಲದಿದ್ದರೆ ಈ ದೇಶ ಉದ್ಧಾರವಾಗುವುದಿಲ್ಲ - ಎಸ್.ಎಲ್.ಭೈರಪ್ಪ, ಸಾಹಿತಿ

ಅಲ್ಲಿಯವರೆಗೆ ತಾವು ರಾಷ್ಟ್ರೀಯ ಪ್ರೊಫೆಸರ್ ಆಗಿ ಉಳಿಯಬಹುದು ಎನ್ನುವ ಯೋಚನೆಯೇ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X