Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಗೋರಕ್ಷಣೆಗಾಗಿ ಮದ್ಯದ ಮೊರೆಹೋದ ರಾಜಸ್ಥಾನ...

ಗೋರಕ್ಷಣೆಗಾಗಿ ಮದ್ಯದ ಮೊರೆಹೋದ ರಾಜಸ್ಥಾನ ಸರಕಾರ !

ವಾರ್ತಾಭಾರತಿವಾರ್ತಾಭಾರತಿ25 Jun 2018 8:57 PM IST
share
ಗೋರಕ್ಷಣೆಗಾಗಿ ಮದ್ಯದ ಮೊರೆಹೋದ ರಾಜಸ್ಥಾನ ಸರಕಾರ !

 ಜೈಪುರ,ಜೂ.25: ಗೋಸಂರಕ್ಷಣೆಗಾಗಿ ಆರ್ಥಿಕ ನಿಧಿ ಸ್ಥಾಪಿಸಲು ರಾಜಸ್ಥಾನದ ಬಿಜೆಪಿ ಸರಕಾರವು ಮದ್ಯದ ಮೇಲೆ ಶೇ.20ರಷ್ಟು ಸರ್ಚಾರ್ಜ್ ವಿಧಿಸಿದೆ. ಗೋವುಗಳ ರಕ್ಷಣೆಗಾಗಿ ವಸುಂಧರರಾಜೆ ನೇತೃತ್ವದ ಸರಕಾರವು ಕಳೆದ ವರ್ಷದ ಎಪ್ರಿಲ್‌ನಲ್ಲಿ ನ್ಯಾಯಾಂಗೇತರ ವ್ಯವಹಾರಗಳಿಗಾಗಿ ಸ್ಟಾಂಪ್‌ಪೇಪರ್‌ಗಳ ಮೇಲೆ ಶೇ.20ರಷ್ಟು ಸರ್ಚಾರ್ಜ್(ಮೇಲ್ತೆರಿಗೆ) ವಿಧಿಸಿತ್ತು. ಇದರಿಂದ ದೊರೆಯುವ ಆದಾಯವನ್ನು ರಾಜ್ಯದಲ್ಲಿ ಗೋವುಗಳ ರಕ್ಷಣೆಗಾಗಿ ಬಳಸಲಾಗುವುದೆಂದು ರಾಜಸ್ಥಾನದ ಸರಕಾರದ ಉನ್ನತ ಅಧಿಕಾರಿಯೊಬ್ಬರು ಇಂದು ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

   ‘‘2003ರ ರಾಜಸ್ಥಾನ ಮೌಲ್ಯವರ್ಧಿತ ತೆರಿಗೆಯ ನಿಯಮಗಳ ಅಡಿಯಲ್ಲಿ ನೋಂದಣಿಗೊಂಡ ಡೀಲರ್‌ಗಳು ಮಾರಾಟ ಮಾಡುವ ವಿದೇಶಿ ಮದ್ಯ, ಭಾರತದಲ್ಲಿ ಉತ್ಪಾದನೆಯಾದ ವಿದೇಶಿ ಮದ್ಯ, ಶರಾಬು ಹಾಗೂ ಬಿಯರ್ ಮಾರಾಟದ ಮೇಲೆ ವಿಧಿಸಲಾಗುವ ತೆರಿಗೆಯ ಮೊತ್ತದ ಮೇಲೆ ಶೇ.20ರಷ್ಟು ದರದಲ್ಲಿ ಸರ್ಜಾರ್ಜ್ ವಿಧಿಸಲಾಗುವುದು’’ ಎಂದು ರಾಜಸ್ಥಾನ ಸರಕಾರವು ಇಂದು ಬಿಡುಗಡೆಗೊಳಿಸಿದ ಅಧಿಕೃತ ಆದೇಶವೊಂದರಲ್ಲಿ ತಿಳಿಸಿದೆ.

ಮದ್ಯದ ಮೇಲೆ ಹೇರಲಾಗಿರುವ ಸರ್ಚಾರ್ಜ್‌ನಿಂದ ಸಂಗ್ರಹವಾಗುವ ಹಣವನ್ನು ಗೋರಕ್ಷಣೆಯ ನಿಧಿಯಾಗಿ ಬಳಸಲಾಗುವುದೆಂದು ರಾಜಸ್ಥಾನ ಸರಕಾರದ ವಿತ್ತ ಹಾಗೂ ತೆರಿಗೆ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮುಖೇಶ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

ಕಳೆದ ವರ್ಷ ರಾಜಸ್ಥಾನ ಸರಕಾರವು ನ್ಯಾಯಾಂಗೇತರ ವ್ಯವಹಾರಗಳಿಗಾಗಿ ಸ್ಟಾಂಪ್‌ಪೇಪರ್‌ಗಳ ಮೇಲೆ ಶೇ.10ರಷ್ಟು ಸರ್ಚಾರ್ಜ್ ವಿಧಿಸಿದ್ದರಿಂದ ರಾಜ್ಯದಲ್ಲಿ ಬಾಡಿಗೆ ಒಪ್ಪಂದಗಳು, ಅಡಮಾನ ದಾಖಲೆ ಪತ್ರಗಳು ಹಾಗೂ ಲೀಸ್ ಒಪ್ಪಂದಗಳು ದುಬಾರಿಯಾಗಿದ್ದವು.

ಈ ಮಧ್ಯೆ ನ್ಯಾಯಾಂಗೇತರ ವ್ಯವಹಾರಗಳಿಗಾಗಿ ಬಳಸುವ ಸ್ಟಾಂಪ್‌ಪೇಪರ್‌ಗಳ ಮೇಲಿನ ಸರ್ಚಾರ್ಜ್‌ನ್ನು ಈಗ ಇರುವ ಶೇ.10ರಿಂದ ಶೇ.20ಕ್ಕೆ ಏರಿಸುವ ಬಗ್ಗೆಯೂ ರಾಜಸ್ಥಾನ ಸರಕಾರ ಚಿಂತಿಸುತ್ತಿದೆಯಂದು ಅಧಿಕೃತ ಮೂಲಗಳು ತಿಳಿಸಿವೆ.

 ರಾಜಸ್ಥಾನದ ಬರಪೀಡಿತ ಪ್ರದೇಶಗಳಲ್ಲಿ 1682 ಗೋಶಾಲೆಗಳಿದ್ದು, 5.62 ಲಕ್ಷ ದನಗಳು ಆಶ್ರಯ ಪಡೆದಿವೆ. ಸುಮಾರು 8.58 ಲಕ್ಷ ಗೋವುಗಳಿರುವ ರಾಜಸ್ಥಾನದಲ್ಲಿ 2562 ಗೋಶಾಲೆಗಳಿವೆ.

2017-18ರಲ್ಲಿ ರಾಜಸ್ಥಾನ ಸರಕಾರವು 1603 ಗೋಶಾಲೆಗಳಿಗಾಗಿ 123.07 ಕೋಟಿ ರೂ. ವ್ಯಯಿಸಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X