ಹುಸೈನಬ್ಬ ಪ್ರಕರಣ: ಜಾಮೀನು ವಿಚಾರಣೆ ಮುಂದೂಡಿಕೆ

ಉಡುಪಿ, ಜೂ.25: ಪೆರ್ಡೂರು ಶೇನರಬೆಟ್ಟು ಬಳಿ ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ(62) ಕೊಲೆ ಪ್ರಕರಣದ ಆರೋಪಿ ದೀಪಕ್ ಹೆಗ್ಡೆ ಜಾಮೀನು ಅರ್ಜಿ ವಿಚಾರಣೆಯನ್ನು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೂ.30ಕ್ಕೆ ಮುಂದೂಡಿದೆ.
ದೀಪಕ್ ಹೆಗ್ಡೆ ಜಾಮೀನಿಗೆ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಸಿಐಡಿ ವರದಿಯಂತೆ ಇಂದು ಆಕ್ಷೇಪಣೆ ಸಲ್ಲಿಸಿದ್ದು, ಈ ಕುರಿತು ಜೂ.30 ರಂದು ವಾದ ಮಂಡಿಸಲು ಅವಕಾಶ ನೀಡಿ ವಿಚಾರಣೆಯನ್ನು ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಮುಂದೂಡಿದರು.
Next Story