ಕರಣ ಕಾರಣ ಕೃತಿ ಬಿಡುಗಡೆ

ಮೂಡುಬಿದಿರೆ,ಜೂ.26: ನಾಡಿನ ಶ್ರೇಷ್ಠ ವಿದ್ವಾಂಸರು, ಚಿಂತಕರು ಮತ್ತು ಅನುಭಾವಿಗಳು ನೀಡಿರುವ ಉಪನ್ಯಾಸಗಳನ್ನು ಸಂಗ್ರಹಿಸಿ ಅದನ್ನು ಪ್ರತೀ ವರ್ಷ ಕೃತಿ ರೂಪಕ್ಕಿಳಿಸಿ ಪ್ರಕಟಿಸುತ್ತಿರುವುದು ದಾಖಲಾತಿಯ ದೃಷ್ಟಿಯಿಂದ ಸುತ್ಯಾರ್ಹ ಕಾರ್ಯವಾಗಿದೆ ಎಂಬುದಾಗಿ ಮಂಗಳೂರಿನ ಸಾಹಿತ್ಯ ಕಲಾ ಪೋಷಕರಾದ ಪ್ರೊ.ಜಿ.ಆರ್.ರೈಯವರು ಅಭಿಪ್ರಾಯಪಟ್ಟರು.
ಕಾಂತಾವರ ಅಲ್ಲಮಪ್ರಭು ಪೀಠದ ‘ಅನುಭವದ ನಡೆ ಅನುಭಾವದ ನುಡಿ’ ತಿಂಗಳ ಗೋಷ್ಠಿಗಳಲ್ಲಿ ಮೂಡಿ ಬಂದ 2015ರ ಸಾಲಿನ ಉಪನ್ಯಾಸಗಳ ನಾಲ್ಕನೇ ಸಂಪುಟ ‘ಕರಣ ಕಾರಣ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕೃತಿಯ ಸಂಪಾದಕರಾದ ಮಂಗಳೂರಿನ ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪೀಠದ ಪ್ರಧಾನ ನಿರ್ದೇಶಕರಾದ ಡಾ.ನಾ.ಮೊಗಸಾಲೆಯವರು ಸ್ವಾಗತಿಸಿ ಸದಾನಂದ ನಾರಾವಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Next Story