ಉಳ್ಳಾಲ: ಬ್ಲಾಕ್ ಕಾಂಗ್ರೆಸ್ನಿಂದ ಸೌಹಾರ್ದ ಈದ್ ಕೂಟ

ಕೊಣಾಜೆ,ಜೂ.26: ಸರ್ವ ಜನರೊಂದಿಗೆ ಸೌಹಾರ್ದತೆಯಿಂದ ಬಾಳುವುದು, ಶಾಂತಿ ಸ್ಥಾಪನೆ ಪ್ರೋತ್ಸಾಹಿಸುವುದು ಹಬ್ಬದ ಸಂದೇಶವಾಗಿದೆ, ಈದುಲ್ ಫಿತ್ರ್ ಪ್ರಯುಕ್ತ ಸರ್ವ ಧರ್ಮೀಯರನ್ನೂ ಒಂದೆಡೆ ಸೇರಿಸುವ ಮೂಲಕ ಬ್ಲಾಕ್ ಕಾಂಗ್ರೆಸ್ ಅತ್ಯುತ್ತಮ ಕಾರ್ಯ ನಡೆಸಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ರವಿವಾರ ಅಸೈಗೋಳಿ ಪುಲ್ಲುವಿನಲ್ಲಿ ನಡೆದ ಈದ್ ಸೌಹಾರ್ದ ಕೂಟದಲ್ಲಿ ಮಾತನಾಡಿದರು.
ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಅಲಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಗಳಾದ ಇಕ್ಬಾಲ್ ಸಾಮಾಣಿಗೆ, ಸಲೀಂ ಮೇಗಾ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ವಹಿಸಿದ್ದರು.
ಉಪಾಧ್ಯಕ್ಷ ಮುಹಮ್ಮದ್ ಮುಸ್ತಫಾ ಮಲಾರ್, ಸುರೇಶ್ ಭಟ್ನಗರ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಪ್ರಮುಖರಾದ ಖಲೀಲ್ ಪಟ್ಟೋರಿ, ಸುರೇಖ ಚಂದ್ರಹಾಸ, ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಅಮೀರ್ ತುಂಬೆ, ವಿಲ್ಮಾ ವಿಲ್ಫ್ರೆಡ್ ಡಿಸೋಜ, ಪದ್ಮಾವತಿ ಪೂಜಾರಿ, ಶ್ರೀನಿವಾಸ ಶೆಟ್ಟಿ ಪುಲ್ಲು, ಕೊಣಾಜೆ ಗ್ರಾ.ಪಂ. ಸದಸ್ಯರಾದ ನಝರ್ ಷಾ ಪಟ್ಟೋರಿ, ಅಬ್ದುಲ್ ಖಾದರ್ ಅಡ್ಕರೆ, ದೀಪಕ್ ಪಿಲಾರ್, ಅಚ್ಚುತ ಗಟ್ಟಿ, ಝಕರಿಯಾ ಮಲಾರ್, ಬಿ.ಎಂ.ಸತ್ತಾರ್, ಕೃಷ್ಣ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.