Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಗ್ರಾಹಕರಿಗೆ ವಂಚನೆ ಆರೋಪ: ಚೆನ್ನೈ ಮೂಲದ...

ಗ್ರಾಹಕರಿಗೆ ವಂಚನೆ ಆರೋಪ: ಚೆನ್ನೈ ಮೂಲದ ತಿರುಪುರ ಚಿಟ್ಸ್ ಪ್ರೈ.ಲಿ. ವಿರುದ್ಧ ದೂರು

ಜಿಲ್ಲೆಯ 200 ಕ್ಕೂ ಅಧಿಕ ಮಂದಿಯ 9 ಕೋ. ರೂ. ಗುಳುಂ ?

ವಾರ್ತಾಭಾರತಿವಾರ್ತಾಭಾರತಿ1 July 2018 6:43 PM IST
share
ಗ್ರಾಹಕರಿಗೆ ವಂಚನೆ ಆರೋಪ: ಚೆನ್ನೈ ಮೂಲದ ತಿರುಪುರ ಚಿಟ್ಸ್ ಪ್ರೈ.ಲಿ. ವಿರುದ್ಧ ದೂರು

ಮಂಗಳೂರು, ಜು. 1: ಚೆನ್ನೈ ಮೂಲದ ‘ತಿರುಪುರ ಚಿಟ್ಸ್ ಪ್ರೈ.ಲಿ.’ ಎಂಬ ಹೆಸರಿನ ಕಂಪೆನಿಯು ದ.ಕ. ಜಿಲ್ಲೆಯ ಸುಮಾರು 200ಕ್ಕೂ ಅಧಿಕ ಗ್ರಾಹಕರಿಂದ ಸಂಗ್ರಹಿಸಿದ 9 ಕೋ.ರೂ. ಅಧಿಕ ಹಣವನ್ನು ವಂಚಿಸಿದೆ ಎನ್ನಲಾದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ನಗರದ ಇಕೊನಾಮಿಕ್ ಆ್ಯಂಡ್ ನಾರ್ಕೊಟಿಸ್ ಕ್ರೈಂ ಠಾಣೆಗೆ ಮಂಗಳೂರಿನ ಅರಾಫತ್ ಎಂಬವರು ದೂರು ನೀಡಿದ್ದಾರೆ. ತನ್ಮಧ್ಯೆ ನೊಂದ ಹಲವು ಗ್ರಾಹಕರು ರವಿವಾರ ನಗರದಲ್ಲಿ ಸಭೆ ಸೇರಿ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಕಂಪನಿಯು ನಗರ ಸಹಿತ ಜಿಲ್ಲೆಯ ಹಲವು ಗ್ರಾಹಕರಿಂದ ಕೋಟ್ಯಂತರ ಹಣ ಸಂಗ್ರಹಿಸಿದೆ ಎನ್ನಲಾಗಿದೆ. ಆರಂಭದಲ್ಲಿ ಗ್ರಾಹಕರಿಗೆ ನಿಗದಿತ ಸಮಯಕ್ಕೆ ಹಣ ಮರಳಿಸಿದ ಸಂಸ್ಥೆಯು ಬಳಿಕ ಹೆಚ್ಚುವರಿ ಮೊತ್ತದ ಫಂಡ್‌ಗೆ ಸೇರ್ಪಡೆಗೊಳಿಸಿ ನಿಯಮಿತವಾಗಿ ಹಣ ಸಂಗ್ರಹಿಸಿ ಇದ್ದಕ್ಕಿದ್ದಂತೆಯೇ ಮಾಯವಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯ ಕಟ್ಟಡವೊಂದರಲ್ಲಿದ್ದ ಈ ಕಂಪನಿಯ ಮಂಗಳೂರು ಬ್ರಾಂಚ್ ಕಚೇರಿಗೂ ಈಗ ಬೀಗ ಜಡಿಯಲಾಗಿದೆ. ಹಾಗಾಗಿ ಹಣವನ್ನು ಕಳಕೊಂಡ ಗ್ರಾಹಕರು ಕಂಗಾಲಾಗಿದ್ದಾರೆ. ಚಿಟ್ಸ್ ಫಂಡ್ ಹೆಸರಿನಲ್ಲಿ ಹಲವು ಬಗೆಯ ಆಮಿಷಗಳನ್ನು ಒಡ್ಡಿ ಕೋಟ್ಯಂತರ ರೂ. ಸಂಗ್ರಹಿಸಿ ಹಲವು ಕಂಪನಿಗಳು ಈಗಾಗಲೆ ನಗರದ ಹಲವಾರು ಮಂದಿಗೆ ವಂಚಿಸಿದ ಘಟನೆ ಈ ಹಿಂದೆ ಬೆಳಕಿಗೆ ಬಂದಿದ್ದರೂ ಕೂಡ ಬುದ್ಧಿವಂತರ ಜಿಲ್ಲೆಯಲ್ಲಿ ಮತ್ತೆ ಮತ್ತೆ ಇಂತಹ ಮೋಸದ ಜಾಲಗಳು ಸಕ್ರಿಯವಾಗಿರುವುದು ಪೊಲೀಸ್ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ.

ಕರ್ನಾಟಕದಲ್ಲಿ ಸುಮಾರು 34 ಸಹಿತ ದೇಶಾದ್ಯಂತ 150ಕ್ಕೂ ಅಧಿಕ ಶಾಖೆಗಳನ್ನು ಈ ಕಂಪನಿ ಹೊಂದಿದೆ. ಮಂಗಳೂರಿನಲ್ಲೇ ಸುಮಾರು 200 ಗ್ರಾಹಕರಿಗೆ 9 ಕೋ.ರೂ. ಅಧಿಕ ಹಣ ವಂಚಿಸಿರುವ ಈ ಕಂಪನಿ ದೇಶಾದ್ಯಂತ ಗ್ರಾಹಕರಿಂದ ಸಂಗ್ರಹಿಸಿರುವ ಹಣದ ಮೊತ್ತ 20 ಪಟ್ಟು ಜಾಸ್ತಿಯಾಗಬಹುದು ಎಂದು ಹೇಳಲಾಗುತ್ತಿದೆ.

ಮಂಗಳೂರಿನ ಅರಾಫತ್ ಎಂಬವರು ನಗರದ ಇಕೊನಾಮಿಕ್ ಆ್ಯಂಡ್ ನಾರ್ಕೊಟಿಸ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಿ.ವಿ. ಕೃಷ್ಣಪ್ರಸಾದ್, ನಿರ್ದೇಶಕರಾದ ಸುಮನಾ, ವಾಸು ಕೆ., ನಾರಾಯಣ ಪೊಟ್ಟಿ ಬಾಲಕೃಷ್ಣ, ಜಯಪ್ರಕಾಶ್ ಬಸವರಾಜ ಉಪ್ಪಿನ್, ಕುರುಂಬಯ್ಯ ಮಂಡೇಪಂಡ ಗಣಪತಿ, ಎಂ.ಇ.ವೇಣು ಮತ್ತು ಉದ್ಯೋಗಿಗಳಾದ ರಾಯ್ಡೋ ಡಿಸಿಲ್ವಾ, ಶಾಜಿ ವಿ., ದೇವರಾಜ್ ಎಂ.ಎಸ್., ಜಯರಾಮ್ ಎಂ., ಸೂರಜ್ ಕೆ. ಅವರನ್ನು ಆರೋಪಿಗಳು ಎಂದು ಗುರುತಿಸಿದ್ದಾರೆ.

ತಾನು 50 ಲಕ್ಷ ರೂ. ಮೌಲ್ಯದ ಚಿಟ್ಸ್ ಫಂಡ್‌ಗೆ ಸೇರ್ಪಡೆಗೊಂಡು ಸುಮಾರು 20 ತಿಂಗಳ ಕಾಲ 32,38,450 ರೂ. ಪಾವತಿಸಿದ್ದು, ಅದರ ಡಿವಿಡೆಂಡ್ ಸೇರಿ ಅಂದಾಜು 40 ಲಕ್ಷ ರೂ. ಮರಳಿ ಸಿಗಬೇಕಿತ್ತು. ಆದರೆ, ಹಣ ಮರಳಿಸುವ ಲಕ್ಷಣ ಕಾಣದಿದ್ದಾಗ ದೂರು ನೀಡುವುದು ಅನಿವಾರ್ಯವಾಯಿತು ಎಂದು ಅರಾಫತ್ ತಿಳಿಸಿದ್ದಾರೆ.

ಮೊದಲು ನಾವು ಗೋಕುಲಂ ಚಿಟ್ಸ್ ಫಂಡ್‌ನಲ್ಲಿ ಹಣ ತೊಡಗಿಸುತ್ತಿದ್ದೆವು. ಬಳಿಕ ‘ತಿರುಪುರ’ದಲ್ಲಿ ನನ್ನ ಹೂಡಿಕೆ ಆರಂಭಿಸಿದೆವು. ಮೊದಲು 5 ಲಕ್ಷದ ಫಂಡ್‌ಗೆ ಸೇರಿದ್ದೆವು. 2 ವರ್ಷದೊಳಗೆ ಆ ಹಣ ಡಿವಿಡೆಂಡ್ ಸಹಿತ ಸಿಕ್ಕಿತು. ಅದೇ ವಿಶ್ವಾಸದಿಂದ ನಾವು 50 ಲಕ್ಷ ರೂ.ನ ಚಿಟ್ ಫಂಡ್‌ಗೆ ಹಣ ತೊಡಗಿಸತೊಡಗಿದೆವು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಈ ಕಂಪೆನಿಯು ಮುಳುಗುತ್ತಿರುವ ಬಗ್ಗೆ ಸಂಶಯ ಕಾಡತೊಡಗಿತು. ಅದರಂತೆ ಹಣ ಹೂಡಿಕೆ ಮಾಡುವುದನ್ನು ಸ್ಥಗಿತಗೊಳಿಸಿ ನೇರ ಚೆನ್ನೈಗೆ ಧಾವಿಸಿದೆವು. ಆವಾಗ ಚೆನ್ನೈಯ ಕೇಂದ್ರ ಕಚೇರಿಗೂ ಬೀಗ ಜಡಿಯಲಾಗಿತ್ತು ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕಿ (ಗಂಡ-ಹೆಂಡತಿ)ಯಲ್ಲದೆ ಇತರ 7 ಮಂದಿ ನಿರ್ದೇಶಕರ ಮೇಲೆ ಪ್ರಕರಣ ದಾಖಲಾಗಿರುವುದು ಹಾಗೂ ದಂಪತಿಯನ್ನು ಪೊಲೀಸರು ಬಂಧಿಸಿರುವುದು ತಿಳಿದು ಬಂತು ಎಂದು ಅರಾಫತ್ ಹೇಳಿದ್ದಾರೆ.

ದೇಶಾದ್ಯಂತ ಲಕ್ಷಾಂತರ ಮಂದಿಗೆ ವಂಚಿಸಿದ ಈ ಕಂಪೆನಿಯ ನಿರ್ದೇಶಕಿಯಾಗಿರುವ ಸುಮನಾ ಮಂಗಳೂರು ಮೂಲದವರು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬೃಹತ್ ಮೊತ್ತದ ವಂಚನಾ ಜಾಲವೊಂದು ಬೆಳಕಿಗೆ ಬಂದಿದ್ದು, ನೊಂದ ಇತರ ಗ್ರಾಹಕರು ಕೂಡಾ ಪೊಲೀಸರಿಗೆ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X