Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ​ನಿಸ್ಸಂದೇಹವಾಗಿ ಅಡಿಗ ಕನ್ನಡದ ಮಹಾಕವಿ:...

​ನಿಸ್ಸಂದೇಹವಾಗಿ ಅಡಿಗ ಕನ್ನಡದ ಮಹಾಕವಿ: ಡಾ.ಮಾಲಗತ್ತಿ

ವಾರ್ತಾಭಾರತಿವಾರ್ತಾಭಾರತಿ2 July 2018 6:55 PM IST
share

ಉಡುಪಿ, ಜು.2: ಮಹಾಕವಿ ಎನಿಸಿಕೊಳ್ಳಲು ಮಹಾಕಾವ್ಯವನ್ನೇ ಬರೆಯ ಬೇಕೆಂದಿಲ್ಲ. ಬಿಡಿ ಅಥವಾ ಇಡಿ ಕವನದಿಂದಲೂ ಮಹಾಕವಿ ಎನಿಸಿಕೊಳ್ಳ ಬಹುದು. ತೆಲುಗಿನ ಶ್ರೀಶ್ರೀ ಇದೇ ರೀತಿ ಮಹಾಕವಿ ಎನಿಸಿಕೊಂಡವರು. ಈ ದೃಷ್ಟಿಯಿಂದ ಗೋಪಾಲಕೃಷ್ಣ ಅಡಿಗರನ್ನು ನಿಸ್ಸಂಕೋಚನವಾಗಿ ಕನ್ನಡದ ಮಹಾಕವಿ ಎಂದು ಕರೆಯಬಹುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಹಾಗೂ ಸಾಹಿತಿ ಡಾ.ಅರವಿಂದ ಮಾಲಗತ್ತಿ ಹೇಳಿದ್ದಾರೆ.

ಉಡುಪಿಯ ರಥಬೀದಿ ಗೆಳೆಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಹಮ್ಮಿಕೊಂಡ ‘ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ’ದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಅಡಿಗರು ಕನ್ನಡದ ಧೀಮಂತ ಕವಿ. ಅವರ ಜನ್ಮಶತಮಾನೋತ್ಸ ಕಾರ್ಯಕ್ರಮವನ್ನು ನಾಡಿನಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ಕಲುಬುರ್ಗಿಯಲ್ಲಿ ಕೇಂದ್ರ ವಿವಿಯ ಆಶ್ರಯದಲ್ಲಿ ಹಾಗೂ ಶಿವಮೊಗ್ಗ ವಿವಿಯಲ್ಲೂ ಕಾರ್ಯಕ್ರಮ ವನ್ನು ಆಯೋಜಿಸಲಾಗುತ್ತಿದೆ. ಇದೇ ರೀತಿ ವರ್ಷ ಇನ್ನೂ 6-7ಮಂದಿಯ ಶತಮಾನೋತ್ಸವ ನಡೆಯಲಿದೆ ಎಂದರು.

ನಾನು ದಲಿತ-ಬಂಡಾಯ ಚಳವಳಿಯೊಂದಿಗೆ ಸಾಹಿತ್ಯಕ್ಕೆ ಪ್ರವೇಶಿಸಿದವ ನಾದರೂ ನವ್ಯವನ್ನು ಹೆಚ್ಚು ಪ್ರೀತಿಸಿದವನು. ಆದರೆ ನವ್ಯ ಕಾವ್ಯ ಸಾಮಾನ್ಯ ಓದುಗನಿಗೆ ದಕ್ಕುವುದಿಲ್ಲ. ನವ್ಯಕಾವ್ಯದ ಒಳಹೊಕ್ಕರೆ ಹೊರಬರಲಾಗದೇ ಒದ್ದಾಡಬೇಕು ಎಂಬ ಅಭಿಪ್ರಾಯವಿತ್ತು. ಅಡಿಗರು ಸೇರಿದಂತೆ ನವ್ಯಪಂಥದ ಎಲ್ಲರೂ ಇದೇ ರೀತಿ ಕಾವ್ಯ ಸೃಷ್ಟಿಸಿದರು ಎಂದರು.

ಅಡಿಗರು ಎಲ್ಲರಿಗೂ ದಕ್ಕುವುದಿಲ್ಲ. ಪುರಾಣದ ಪರಿಭಾಷೆ ದಕ್ಕಿದರೆ ಮಾತ್ರ ಅಡಿಗರು ದಕ್ಕುತ್ತಾರೆ. ಇಲ್ಲದಿದ್ದರೆ ದಕ್ಕುವುದಿಲ್ಲ. ಆದುದರಿಂದ ಅಡಿಗರ ಕವಿತೆ ಗಳನ್ನು ಹೆಚ್ಚು ಹೆಚ್ಚ ಚರ್ಚೆಗೊಳಪಡಿಸಬೇಕು, ಪುನರ್‌ವ್ಯಾಖ್ಯಾನಕ್ಕೊಳಪಡಿಸ ಬೇಕಾದ ಅಗತ್ಯವಿದೆ ಎಂದು ಡಾ.ಮಾಲಗತ್ತಿ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಅಡಿಗ ಟ್ರಸ್ಟ್‌ನ ಜಯರಾಮ ಅಡಿಗ ಮಾತನಾಡಿ, ಅಡಿಗರು ಸುಮಾರು 258 ಕವನಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಸುಮಾರು 110 ಕವನಗಳು ಹಾಡಬಹುದಾದ ಕವನಗಳು. ಉಳಿದವು ಗಂಭೀರವಾದ ಓದು ಕವನಗಳು. ಅವರ 12 ಕವನ ಸಂಕಲನಗಳು ಹೊರಬಂದಿವೆ ಎಂದರು.

ಗೋಪಾಲಕೃಷ್ಣ ಅಡಿಗ ಹಾಗೂ ಸಮಕಾಲೀನ ಇತರ ಸಾಹಿತಿಗಳೊಂದಿಗೆ ಅವರ ಸಂಬಂಧ, ಭಿನ್ನಾಭಿಪ್ರಾಯಗಳ ಕುರಿತಂತೆ ಹಲವು ತಪ್ಪಾಭಿಪ್ರಾಯಗಳು, ಆರೋಪಗಳು ಪ್ರಚಲಿತದಲ್ಲಿವೆ. ಆದರೆ ಲಂಕೇಶ್, ದ.ರಾ.ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ ಮುಂತಾದವರೊಂದಿಗೆ ಅಡಿಗರಿಗಿದ್ದಿದ್ದು ತಾತ್ವಿಕ ಭಿನ್ನಾಭಿಪ್ರಾಯವೇ ಹೊರತು ವೈಯಕ್ತಿಕವಾದುದಲ್ಲ ಎಂಬುದು ಅವರ ಸಂಗ್ರಹದಲ್ಲಿದ್ದ ಪತ್ರಗಳು, ಡೈರಿಗಳಿಂದ ತಿಳಿದುಬರುತ್ತದೆ ಎಂದರು.

ಅಡಿಗರ ಸಮಗ್ರ ಜೀವನ ಚರಿತ್ರೆಯನ್ನು ಪ್ರಕಟಿಸುವ ಪ್ರಯತ್ನ ಟ್ರಸ್ಟ್‌ನಿಂದ ನಡೆಯುತ್ತಿದೆ. ಅದೇ ರೀತಿ ಅಡಿಗರ ಸಾಹಿತ್ಯವನ್ನು ಈಗಿನ ತಲೆಮಾರಿಗೆ ತಲುಪಿಸುವ ಉದ್ದೇಶವೂ ಇದ್ದು, ಅಡಿಗರ ಸಮಕಾಲೀನರ, ಒಡನಾಡಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ವಿಡಿಯೊ ದಾಖಲೆ ಮಾಡಿಡುವ ಕೆಲಸವೂ ನಡೆಯುತ್ತಿದೆ ಎಂದು ಜಯರಾಮ ಅಡಿಗ ನುಡಿದರು.

ಹಿರಿಯ ವಿಮರ್ಶಕ ಜಿ.ರಾಜಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಕಾಡೆಮಿಯ ಸದಸ್ಯ ಸಂಚಾಲಕಿ ಮುಮ್ತಾಜ್ ಬೇಗಂ, ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಉಪಸ್ಥಿತರಿದ್ದರು.

 ಬಳಿಕ ‘ಕನ್ನಡ ಕಾವ್ಯಕ್ಕೆ ಅಡಿಗರ ಕೊಡುಗೆ’ ವಿಷಯದ ಕುರಿತು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ವಿಶೇಷ ಉಪನ್ಯಾಸ ನೀಡಿದರು. ಅಡಿಗರು ಉಡುಪಿಯಲ್ಲಿ ಮೂರು ವರ್ಷ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಾಂಶುಪಾಲ ರಾಗಿದ್ದ ಅವಧಿಯಲ್ಲಿ ಅವರ ಸಹೋದ್ಯೋಗಿ, ಒಡನಾಡಿ ಹಾಗೂ ವಿದ್ಯಾರ್ಥಿಗಳಾಗಿದ್ದ ನಟರಾಜ ದೀಕ್ಷಿತ್, ಡಾ.ಎನ್.ಎ.ಮಧ್ಯಸ್ಥ, ಗುರುರಾಜ ಮಾರ್ಪಳ್ಳಿ, ಎಸ್.ವಿ.ಭಟ್, ಡಾ.ಶ್ರೀಕಾಂತ ಸಿದ್ಧಾಪುರ, ಎಚ್.ಡುಂಡಿರಾಜ್, ಪೃಥ್ವಿರಾಜ್ ಕವತ್ತಾರ್ ಅಡಿಗರ ಒಡನಾಟದ ನೆನಪುಗಳನ್ನು ಮೆಲುಕು ಹಾಕಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X