ಅಂದರ್ ಬಾಹರ್: 11 ಮಂದಿ ಬಂಧನ
ಉಡುಪಿ, ಜು.2: ಕಿನ್ನಿಮುಲ್ಕಿ ಸಣ್ಣ ಸೇತುವೆಯ ಬಳಿ ಜು.1ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಕಿನ್ನಿಮುಲ್ಕಿಯ ರಾಧಾಕೃಷ್ಣ(45), ಕುರ್ಕಾಲಿನ ಚಂದ್ರಕಾಂತ(29), ದೊಡ್ಡಣಗುಡ್ಡೆಯ ಇಸ್ಮಾಯಿಲ್(45), ಕಡೆಕಾರಿನ ಆನಂದ(36), ಅಂಬಲಪಾಡಿಯ ಶಿವ ಕುಮಾರ್(29), ಯತೀಶ್(22) ಎಂಬವರನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ, 15,650ರೂ. ನಗದು ವಶಪಡಿಸಿ ಕೊಂಡಿದ್ದಾರೆ.
ಶಿರ್ವ: ಕುರ್ಕಾಲು ಗ್ರಾಮದ ಕುಂಜಾರುಗಿರಿ ಮೂಡುಪಾಜೈ ಎಂಬಲ್ಲಿ ಜು.1ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಕುಂಜಾರುಗಿರಿಯ ಸಾಧು ಪೂಜಾರಿ(39), ಪಾಂಬೂರಿನ ಸುರೇಶ(30), ಮೂಡುಪಾಜೈಯ ಸಂತೋಷ್(32), ಸಂದೀಪ್(30), ಸರಕಾರಿಗುಡ್ಡೆಯ ಮುಹಮ್ಮದ್(42) ಎಂಬವರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿ, 5,850ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story