Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸಿರಿಯ ನಿರಾಶ್ರಿತರಿಗೆ ಗಡಿ ತೆರೆಯಲು...

ಸಿರಿಯ ನಿರಾಶ್ರಿತರಿಗೆ ಗಡಿ ತೆರೆಯಲು ಜೋರ್ಡಾನ್ ನಕಾರ

ಗಡಿಯಲ್ಲಿ ಜಮಾಯಿಸಿದ 1 ಲಕ್ಷ ಮ ಮಂದಿ

ವಾರ್ತಾಭಾರತಿವಾರ್ತಾಭಾರತಿ4 July 2018 8:35 PM IST
share
ಸಿರಿಯ ನಿರಾಶ್ರಿತರಿಗೆ ಗಡಿ ತೆರೆಯಲು ಜೋರ್ಡಾನ್ ನಕಾರ

 ಅಮ್ಮಾನ್, ಜು. ೪: ಸಿರಿಯದ ದರಾ ನಗರದಲ್ಲಿ ಸರಕಾರಿ ಸೇನೆ ನಡೆಸುತ್ತಿರುವ   ಬಾಂಬ್ ದಾಳಿಗಳಿಗೆ ಬೆದರಿ ಪಲಾಯನಗೈಯುತ್ತಿರುವ ಸುಮಾರು 1 ಲಕ್ಷ ನಿರಾಶ್ರಿತರಿಗೆ  ತನ್ನ ಗಡಿಯನ್ನು ತೆರೆಯಬೇಕೆಂಬ ಹೆಚ್ಚುತ್ತಿರುವ ಒತ್ತಡವನ್ನು ಜೋರ್ಡಾನ್ ಮಂಗಳವಾರ ತಿರಸ್ಕರಿಸಿದೆ.

ನಿರ್ವಸಿತರ ನಡುವೆ ಭಯೋತ್ಪಾದಕರೂ ಸೇರಿರಬಹುದು ಎಂಬ ಭೀತಿ ಅಧಿಕಾರಿಗಳಿಗಿದೆ ಎಂದು ‘ಅರಬ್ ನ್ಯೂಸ್’ ವರದಿ ಮಾಡಿದೆ.

‘‘ಭದ್ರತಾ ಪರಿಸ್ಥಿತಿ ಈಗಲೂ ಗಂಭೀರವಾಗಿದೆ ಹಾಗೂ ನಾವು ಯಾವುದೇ ಅಪಾಯವನ್ನು ಎದುರುಹಾಕಿಕೊಳ್ಳುವ ಸ್ಥಿತಿಯಲ್ಲಿಲ್ಲ’’ ಎಂದು ಜೋರ್ಡಾನ್ ಸರಕಾರಿ ವಕ್ತಾರೆಯೊಬ್ಬರು ಹೇಳಿದ್ದಾರೆ.

ಗಡಿಯ ಸಿರಿಯ ಬದಿಯಲ್ಲಿ ಐಸಿಸ್‌ಗೆ ಸೇರಿದ ಸೇನಾ ಉಪಕರಣಗಳು ಪತ್ತೆಯಾಗಿವೆ ಎಂದು ಅವರು ಹೇಳಿದರು. ‘‘ಸಿರಿಯದೊಂದಿಗಿನ ನಮ್ಮ ಗಡಿ ಸಮೀಪ ಯಾವುದೇ ಸ್ಥಳದಲ್ಲಿ ಶಸ್ತ್ರಧಾರಿ ಬಂಡುಕೋರರು ಇರಬಾರದು ಎಂಬ ನಮ್ಮ ಹಿಂದಿನ ಶರತ್ತುಗಳಿಗೆ ನಾವು ಬದ್ಧರಾಗಿದ್ದೇವೆ’’ ಎಂದರು.

ಜೋರ್ಡಾನ್ ಗಡಿಯಲ್ಲಿರುವ ದಕ್ಷಿಣ ದರಾ ಪ್ರಾಂತವನ್ನು ಮರುವಶಪಡಿಸಿಕೊಳ್ಳುವುದಕ್ಕಾಗಿ ಸಿರಿಯ ಸೇನೆಯು ರಶ್ಯದ ವಾಯು ದಾಳಿಯ ನೆರವಿನೊಂದಿಗೆ ಜೂನ್ ೧೯ರಂದು ಕಾರ್ಯಾಚರಣೆ ಆರಂಭಿಸಿದೆ.

ಸಿರಿಯ ಸೇನೆಯ ಕಾರ್ಯಾಚರಣೆಯಿಂದಾಗಿ 2,70,000 ಸಿರಿಯನ್ನರು ನಿರ್ವಸಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಅದೇ ವೇಳೆ, 95000 ಮಂದಿ ಗಡಿಯಲ್ಲಿ ಆಶ್ರಯ ಕೋರಿದ್ದಾರೆ ಎಂದು ಜೋರ್ಡಾನ್ ಅಂದಾಜಿಸಿದೆ.

ಗಡಿ ತೆರೆಯಲು ವಿಶ್ವಸಂಸ್ಥೆ ಮನವಿ

ತನ್ನ ಗಡಿಯನ್ನು ತೆರೆದಿಡುವಂತೆ ಜೋರ್ಡಾನ್ ಸರಕಾರಕ್ಕೆ ಹಾಗೂ ಪಲಾಯನಗೈಯುತ್ತಿರುವ ನಾಗರಿಕರನ್ನು ಸ್ವೀಕರಿಸುವಂತೆ ವಲಯದ ಇತರ ದೇಶಗಳಿಗೆ  ನಾವು ಕರೆ ನೀಡುತ್ತೇವೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗದ ವಕ್ತಾರ ಲಿಝ್ ತ್ರಾಸೆಲ್ ಹೇಳಿದ್ದಾರೆ.

ನಿರಾಶ್ರಿತರಿಗೆ ಮಾನವೀಯ ಸೇವೆ: ಜೋರ್ಡಾನ್

ತಾನು ಮಾನವೀಯ ಸೇವೆಯನ್ನು ಮಾಡುತ್ತಿರುವುದಾಗಿ ಜೋರ್ಡಾನ್ ಹೇಳಿದೆ.

ಕಳೆದ ಮೂರು ದಿನಗಳ ಅವಧಿಯಲ್ಲಿ ಸಿರಿಯ ನಿರ್ವಸಿತರಿಗೆ ಆಹಾರ ಮತ್ತು ನೀರು ನೀಡಲು ತನ್ನ 86 ಟ್ರಕ್‌ಗಳು ಸಿರಿಯ ಗಡಿ ದಾಟಿವೆ ಎಂದು ಜೋರ್ಡಾನ್ ಸೇನೆಯ ನಾರ್ದರ್ನ್ ಕಮಾಂಡರ್ ಜನರಲ್ ಖಾಲಿದ್ ಅಲ್-ಮಸೂದ್ ಹೇಳಿದ್ದಾರೆ.

ಗಡಿಯುದ್ದಕ್ಕೂ ಮೂರು ಸ್ಥಳಗಳಲ್ಲಿ ಜೋರ್ಡಾನ್ ಸೇನೆಯು ಮಾನವೀಯ ನೆರವು ವಿತರಿಸುತ್ತಿದೆ ಹಾಗೂ ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತಿದೆ ಎಂದು ಅವರು ತಿಳಿಸಿದರು.

ಗಾಯಗೊಂಡವರಿಗಾಗಿ ಗಡಿಯ ಜೋರ್ಡಾನ್ ಭಾಗದಲ್ಲಿ ಜೋರ್ಡಾನ್ ಸೇನೆಯು 20 ಹಾಸಿಗೆಗಳ ಆಸ್ಪತ್ರೆಗಳನ್ನು ನಡೆಸುತ್ತಿದೆ.

‘‘ಕಳೆದ ಹಲವಾರು ದಿನಗಳಲ್ಲಿ ಸೇನೆಯು ೧೬ ವೈದ್ಯಕೀಯ ಪ್ರಕರಣಗಳನ್ನು ಗುರುತಿಸಿದೆ ಹಾಗೂ ರೋಗಿಗಳನ್ನು ರಮ್ತದಲ್ಲಿರುವ ಸ್ಥಳೀಯ ಆಸ್ಪತ್ರೆಗಳಿಗೆ ಸೇರಿಸಲಾಗಿತ್ತು. ನಾಲ್ಕು ರೋಗಿಗಳನ್ನು ಜೋರ್ಡಾನ್ ರಾಜಧಾನಿ ಅಮ್ಮಾನ್‌ನಲ್ಲಿರುವ ಪ್ರಮುಖ ಆಸ್ಪತ್ರೆಗಳಿಗೆ ಸೇರಿಸಲಗಿದೆ’’ ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X