ವಾಹನ, ನಗದು ಕಳವು ಪ್ರಕರಣ: ಆರೋಪಿ ಸೆರೆ
ಬಂಟ್ವಾಳ, ಜು. 4: ವಾಹನ-ನಗದು ಕಳವು ಆರೋಪಿಯೋರ್ವನನ್ನು ವಿಟ್ಲ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಧರ್ಮಸ್ಥಳದ ನಿಡ್ಲೆಯ ನಿವಾಸಿ ರಾಜೇಶ್ ಬಂಧಿತ ಆರೋಪಿ. ಜೂ. 11ರಂದು ಸಂಜೆ ವಿಟ್ಲದ ಉದ್ಯಮಿಯೊಬ್ಬರ ದ್ವಿಚಕ್ರ ವಾಹನ ಹಾಗೂ ಅದರೊಳಗಿದ್ದ 1.76 ಲಕ್ಷ ರೂ. ಕಳವುವಾಗಿದ್ದು, ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story