ಮಂಗಳೂರು: ಚಿನ್ನದ ಕೆಲಸಗಾರರ ಸಂಘದ ಮಹಾಸಭೆ

ಮಂಗಳೂರು, ಜು.4: ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ 41ನೇ ವಾರ್ಷಿಕ ಮಹಾಸಭೆಯು ನಗರದ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಜರಗಿತು.
ಅತಿಥಿಗಳಾಗಿ ಶ್ರೀರಾಮಸೇನೆಯ ಪ್ರಮುಖ ಪ್ರಸಾದ್ ಅತ್ತಾವರ, ವೈಷ್ಣವಿ ಎಜುಕೇಶನ್ನ ಆಡಳಿತ ನಿರ್ದೇಶಕ ವಿವೇಕ್ ಆಚಾರ್ಯ ಪಾಲ್ಗೊಂಡಿದ್ದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎ.ಮೋಹನ್ ಕುಮಾರ್ ಬೆಳ್ಳೂರು ವಹಿಸಿದ್ದರು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಪ್ರಕಾಶ್ ಹಲೇಜಿ, ಜತೆ ಕಾರ್ಯದರ್ಶಿ ರಮೇಶ್ ಮಾಪಲಾಡಿ ಹಾಗೂ ಕೋಶಾಧಿಕಾರಿ ಕೆ. ಶಶಿಕಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಕೆ.ಎಲ್. ಹರೀಶ್ ಸ್ವಾಗತಿಸಿದರು. ನೆತ್ತರ ರಾಜೇಶ್ ವಂದಿಸಿದರು, ಪಿ.ರವೀಂದ್ರ ಮಂಗಳಾದೇವಿ ಕಾರ್ಯಕ್ರಮ ನಿರೂಪಿಸಿದರು.
Next Story