ಶ್ರೀನಗರ: ಪೊಲೀಸ್ ಪೇದೆಯನ್ನು ಅಪಹರಿಸಿ, ಹತ್ಯೆ ಮಾಡಿದ ಉಗ್ರರು
ಜಾವಿದ್ ಅಹ್ಮದ್
ಶ್ರೀನಗರ, ಜು. 6: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಅಪಹರಿಸಿದ್ದ ಪೊಲೀಸ್ ಪೇದೆಯ ಮೃತದೇಹ ದಂಗಮ್ ಎಂಬಲ್ಲಿ ಗುರುವಾರ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ವರ್ಷ ಎಪ್ರಿಲ್ನಲ್ಲಿ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿ ಐವರು ಉಗ್ರರನ್ನು ಹತ್ಯೆ ಮಾಡಿದ ಕಚ್ದೂರ ಎಂಬ ಗ್ರಾಮದಲ್ಲಿರುವ ಜಾವಿದ್ ಅಹ್ಮದ್ ಎಂಬವರ ಮನೆಗೆ ನುಗ್ಗಿದ ಉಗ್ರಗಾಮಿಗಳು ಅವರನ್ನು ಅಪಹರಿಸಿದ್ದರು. ಅಪಹೃತ ಪೊಲೀಸ್ ಪತ್ತೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು.
ಈದ್ ಸಂದರ್ಭ ಎಲ್ಲ ಉಗ್ರಗಾಮಿ ವಿರೋಧಿ ಕಾರ್ಯಾಚರಣೆ, ಶೋಧ ಕಾರ್ಯಾಚರಣೆಯನ್ನು ಭದ್ರತಾ ಪಡೆ ನಿಲ್ಲಿಸಿತ್ತು. ಭಾರತೀಯ ಸೇನೆಯ ಔರಂಗಜೇಬ್ ಎಂಬ ಸೈನಿಕನನ್ನು ಇದೇ ರೀತಿಯಲ್ಲಿ ಪುಲ್ವಾನಾ ಜಿಲ್ಲೆಯಿಂದ ಅಪಹರಿಸಿದ ಉಗ್ರರು ಹತ್ಯೆ ಮಾಡಿದ್ದರು. ಈ ಅವಧಿಯಲ್ಲಿ ಉಗ್ರಗಾಮಿ ಚಟುವಟಿಕೆ ವ್ಯಾಪಕವಾಗಿದ್ದು, ಅಪರಾಧ ಕೃತ್ಯಗಳೂ ಹೆಚ್ಚಿವೆ ಎನ್ನುವುದು ಭದ್ರತಾ ಪಡೆಗಳ ವಾದ. ಇದನ್ನೇ ಆಧಾರವಾಗಿಟ್ಟುಕೊಂಡು ಬಿಜೆಪಿ, ಪಿಡಿಪಿ ಜತೆಗಿನ ಮೈತ್ರಿ ಕಡಿದುಕೊಂಡಿತ್ತು.
Next Story