Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅರ್ಥವೆಂಬುದೆ ಪಾಪ

ಅರ್ಥವೆಂಬುದೆ ಪಾಪ

ವಾರ್ತಾಭಾರತಿವಾರ್ತಾಭಾರತಿ7 July 2018 12:12 AM IST
share
ಅರ್ಥವೆಂಬುದೆ ಪಾಪ

ಅರ್ಥವೆಂಬುದೆ ಪಾಪ, ಬೇರೆ ಪಾಪವಿಲ್ಲ ಕಂಡಯ್ಯ.

ಪರಿಣಾಮವೆಂಬುದೆ ಪುಣ್ಯ, ಬೇರೆ ಪುಣ್ಯವಿಲ್ಲ ಕಂಡಯ್ಯ,
ಪಾಪಪುಣ್ಯಗಳನತಿಗಳೆದ ಉಳುಮೆ, ಶಿವಯೋಗ.
ಮಹಾಲಿಂಗ ಕಲ್ಲೇಶ್ವರನು ಬಲ್ಲ ಸಿದ್ಧರಾಮನ ಪರಿಯ

                                                       -ಹಾವಿನಾಳ ಕಲ್ಲಯ್ಯ

 ಹಣವು ನರನ ಸಂಗ್ರಹ ಬುದ್ಧಿಯನ್ನು ಚುರುಕುಗೊಳಿಸಿತು ಎಂಬುದಕ್ಕೆ ಜಗತ್ತಿನ ಅನೇಕ ಮಹಾತ್ಮರ ಸಹಮತವಿದೆ. ಈ ಹಣ ಕೆಲವರಲ್ಲೇ ಸಂಗ್ರಹವಾಗದಂತೆ ನೋಡಿಕೊಳ್ಳುವುದಕ್ಕಾಗಿಯೇ ಮುಹಮ್ಮದ್ ಪೈಗಂಬರರು ಝಕಾತನ್ನು ಧಾರ್ಮಿಕ ವಿಧಿಯಾಗಿಸಿ ಬಡ್ಡಿಯನ್ನು ನಿಷಿದ್ಧಗೊಳಿಸಿದರು. ಬಸವಣ್ಣನವರು ದಾಸೋಹ ಪದ್ಧತಿ ತಂದು ಬಡ್ಡಿಯನ್ನು ನಿಷೇಧಿಸಿದರು. ದೊರೆಯಾಗಿದ್ದ ಮೋಳಿಗೆ ಮಾರಯ್ಯನವರು ‘ಹಣಹದ್ದು’ ಎಂದು ಕರೆದರು. ಇಟಲಿಯ ಅಸ್ಸಿಸಿ ಎಂಬ ಪ್ರದೇಶದಲ್ಲಿ 12ನೇ ಶತಮಾನದಲ್ಲಿದ್ದ ಸೈಂಟ್ ಫ್ರಾನ್ಸಿಸ್ ಪೂರ್ವಾಶ್ರಮದಲ್ಲಿ ಭಾರೀ ಶ್ರೀಮಂತ ವ್ಯಾಪಾರಿಯ ಮಗನಾಗಿದ್ದರು. ಕಂಡ ಕಂಡ ಬಡವರಿಗೆ ತನ್ನ ತಂದೆಯ ಹಣವನ್ನು ಕೊಡುವುದೇ ಅವರ ಗುರಿಯಾಗಿತ್ತು. ಸಿಟ್ಟಿಗೆದ್ದ ತಂದೆ ಅವರನ್ನು ಹೊರಗೆ ಹಾಕಿದರು. ಫ್ರಾನ್ಸಿಸ್ ಕಡುಬಡವರ ಹಾಗೆ ಬದುಕುತ್ತ ಸಂತನಾಗಿ ಅಮರನಾದರು. ತಂದೆಯ ಮನೆಯಿಂದ ಹೊರಬಿದ್ದ ನಂತರ ಅವರು ಹಣವನ್ನು ಎಂದೂ ಮುಟ್ಟಲಿಲ್ಲ. ಅಂಥ ಹೊಲಸನ್ನು ಮುಟ್ಟಬಾರದೆಂದು ಹೇಳುತ್ತಿದ್ದರು.
 ಹಾವಿನಾಳ ಕಲ್ಲಯ್ಯ, ಹಣವನ್ನು ಪಾಪಕ್ಕೆ ಹೋಲಿಸಿದ್ದಾನೆ. ಹಣವು ಎಲ್ಲ ಪಾಪಗಳ ಮೂಲ ಎಂದು ತಿಳಿಸಿದ್ದಾನೆ. ಪರಿಣಾಮ ಎಂಬುದು ಪುಣ್ಯ. ಪರಿಣಾಮವೆಂಬುದು ಎಲ್ಲ ಪುಣ್ಯದ ಮೂಲ. ದೇಹೇಂದ್ರಿಯಗಳು ನಮ್ಮವಲ್ಲ ಎಂದು ತಿಳಿದು ಅವುಗಳನ್ನು ಪರಶಿವನಿಗೆ ಅರ್ಪಿಸಿದ ನಂತರ ನಾವು ಬದುಕನ್ನು ಅನುಭವಿಸುವುದರ ಮೂಲಕ ಪಡೆಯುವ ಆನಂದವೇ ಪರಿಣಾಮ. ಹಣವು ಮಾನವನ ಭೌತಿಕ ಆಸೆಗಳನ್ನು ಈಡೇರಿಸುತ್ತದೆ. ಅದರಿಂದ ಸುಖ ಸಿಗುತ್ತದೆ. ತಿಂದ ಆಹಾರ ಕೊನೆಗೆ ಮಲವೂ ಆಗುವಂತೆ ಸಿಕ್ಕ ಸುಖವು ಕೊನೆಗೆ ದುಃಖ ವನ್ನೂ ತರುತ್ತದೆ. ಆದರೆ ಪರಿಣಾಮದಿಂದ ಸಿಗುವ ಆನಂದವು ದುಃಖದಿಂದ ಹೊರತಾಗಿರುತ್ತದೆ. ಪುಣ್ಯ ಲಭಿಸುವುದೆಂದರೆ ಇದೇ. ಇಂಥ ಪುಣ್ಯ ಪಾಪಗಳನ್ನು ಮೀರಿದ ಕೃಷಿಯೇ ಶಿವಯೋಗ. ಶರಣರ ಶಿವಯೋಗದ ಗುರಿ ಲಿಂಗಾಂಗಸಾಮರಸ್ಯ. ಈ ಸಾಮರಸ್ಯದಲ್ಲಿ ಜೀವನು ಶಿವನೊಂದಿಗೆ ಬೆರೆತು ಪರಮಾನಂದದ ಸ್ಥಿತಿ ತಲುಪುತ್ತಾನೆ. ಸೊನ್ನಲಿಗೆಯ ಸಿದ್ಧರಾಮ ಇಂಥ ಶಿವಯೋಗದ ಕೃಷಿಕನಾಗಿದ್ದ. ಸಿದ್ಧರಾಮನ ಈ ರೀತಿ ತನ್ನ ಆರಾಧ್ಯದೈವ ಮಹಾಲಿಂಗ ಕಲ್ಲೇಶ್ವರನಿಗೆ ಗೊತ್ತು ಎಂದು ಹೇಳುವ ಮೂಲಕ ಹಾವಿನಾಳ ಕಲ್ಲಯ್ಯ ಸಿದ್ಧರಾಮನ ಶಿವಯೋಗ ಮಹಿಮೆಯನ್ನು ಕೊಂಡಾಡಿದ್ದಾನೆ.
 ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಾವಿನಾಳ ಗ್ರಾಮದ ಅಕ್ಕಸಾಲಿಗ ಶಿವನಯ್ಯ ಸೋಮವ್ವೆಯರ ಮಗ ಕಲ್ಲಯ್ಯ ಕಲ್ಯಾಣಕ್ಕೆ ಬಂದು ಶರಣ ಚಳವಳಿಯಲ್ಲಿ ಭಾಗವಹಿಸಿದ. ನಂತರ ಸೋಲಾಪುರಕ್ಕೆ ಹೋಗಿ ಉಳಿದ. ಸಿದ್ಧರಾಮನ ಸಮಾಧಿಯ ಆವರಣದಲ್ಲಿ ಈತನ ಸಮಾಧಿ ಇದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X