ಸುಳ್ಯ: ಎಣ್ಮೂರು ಮಸೀದಿಯ ಪದಾಧಿಕಾರಿಗಳ ಆಯ್ಕೆ

ಕೆ.ಎಂ. ಇಸ್ಮಾಯೀಲ್
ಸುಳ್ಯ, ಜು.8: ಜುಮಾ ಮಸ್ಜಿದ್ ದರ್ಗಾ ಶರೀಫ್ ಎಣ್ಮೂರು-ಐವತ್ತೊಕ್ಲು ಇದರ ವಾರ್ಷಿಕ ಮಹಾಸಭೆಯು ಜಮಾಅತ್ ಅಧ್ಯಕ್ಷ ಕೆ.ಎಂ. ಇಸ್ಮಾಯೀಲ್ರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಬಳಿಕ 2018-19ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಅಡ್ವಕೇಟ್ ಕುಂಞಿಪಳ್ಳಿ ಐ., ನೂತನ ಅಧ್ಯಕ್ಷರಾಗಿ ಕೆ.ಎಂ. ಇಸ್ಮಾಯೀಲ್ 5ನೇ ಬಾರಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಸುಲೈಮಾನ್ ಟಿ.ಎಸ್., ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಮುಚ್ಚಿಲ-ಪಂಜ, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಕೊಳ್ತಂಗರೆ, ಅಬ್ದುಲ್ ಹಮೀದ್ ಅಡಿಬಾಯಿ, ಖಜಾಂಚಿಯಾಗಿ ರಫೀಕ್ ಸಿ.ಎಂ. ಹಾಗೂ ಸದಸ್ಯರಾಗಿ ಅಬ್ದುರ್ರಹ್ಮಾನ್ ಐವತ್ತೊಕ್ಲು, ಇಸ್ಮಾಯೀಲ್ ಪಿಲತ್ತಡಿ, ಹಮೀದ್ ಮರಕ್ಕಡ, ಅಬೂಬಕರ್ ಚೆಕ್ಕಡ್ಕ, ಶರೀಫ್ ಕಿಂಗ್ಸ್ಟಾರ್, ಹನೀಫ್ ಕೊಳ್ತಂಗರೆ, ಹನೀಫ್ ಅಡಿಬಾಯಿ, ಕೆ.ಬಿ. ಸೂಫಿ ಅಡಿಬಾಯಿ, ಆದಂ ಪಡ್ಪು ಆಯ್ಕೆಯಾದರು.
ಈ ಸಂದರ್ಭದಲ್ಲಿ ಜಮಾತಿನ ಸದಸ್ಯರು ಉಪಸ್ಥಿತರಿದ್ದರು.
Next Story